ಬೆಂಗಳೂರು: ʼಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಹೊಡೆದಿದ್ದು ಕಾಂಗ್ರೇಸ್ ನವರೆʼ ಎಂದು ಬಿಜೆಪಿ ಶಾಸಕ ಎಂ.ಪಿ. ರೇಣಾಕಾಚಾರ್ಯ ಹೇಳಿರುವ ಹೇಳಿಕೆ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತೀರುಗೇಟು ನೀಡಿದ್ದಾರೆ.
ನೆರೆಪೀಡಿತ ಮತ್ತು ಮಳೆಯಿಂದಾಗಿ ಅನಾಹುತವಾದ ಪ್ರದೇಶಗಳ ಭೇಟಿಯ ಸಂದರ್ಭದಲ್ಲಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಹೊಡೆದ ಘಟನೆ ನಡೆದಿತ್ತು, ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಎಂ.ಪಿ. ರೇಣಾಕಾಚಾರ್ಯ, ಸಿದ್ದರಾಮಯ್ಯನವರ ಮೇಲೆ ನಮಗೆ ಅಪಾರ ಗೌರವವಿದೆ. ಅವರ ಹೇಳಿಕೆಯನ್ನು ವಿರೋಧಿಸುತ್ತೆವೆ ಹೊರೆತು ಅವರನ್ನಲ್ಲ ಎಂದರು.
ಘಟನೆ ಬಗ್ಗೆ ಮುಂದುವರೆದು ಮಾತನಾಡಿದ ಅವರು, ನಮ್ಮ ಸಂಘಪರಿವಾರದವರು ಸಂಸ್ಕೃತಿಗೆ ಬೆಲೆಕೊಡುತ್ತೇವೆ, ಈ ತರಹದ ಕೆಲಸಮಾಡಲ್ಲ. ಮೊಟ್ಟೆ ಹೊಡೆದಿದ್ದು ಕಾಂಗ್ರೆಸ್ ಕಾರ್ಯಕರ್ತರು. ಅವರು ಬಿಜೆಪಿಗೆ ಕೆಟ್ಟ ಹೆಸರು ಬರಲೆಂದು ಹಾಗೆ ಸಂಚುಹೂಡಿದ್ದಾರೆ. ನಾವು ಪ್ರತಿಭಟನೆ ಮಾಡಿದ್ದೇವೆ ಅಷ್ಟೇ, ಈ ತರಹದ ಕಿಡಿಗೇಡಿ ಕೆಲಸವನ್ನು ಕೆಲವು ಕಾಂಗ್ರೇಸ್ ಕಿಡಿಗೇಡಿಗಳು ಮಾಡಿದ್ದಾರೆ ಎಂದು ಹೇಳಿದರು.
ಶಾಸಕರ ಈ ಹೇಳಿಕೆಗೆ ಡಿ.ಕೆ. ಶಿವಕುಮಾರ್ ʼಸುಳ್ಳಿಗೆ ಮತ್ತೋಂದು ಹೆಸರೇ ಬಿಜೆಪಿʼ ಎಂದು ತಿರುಗೇಟು ನೀಡಿದ್ದಾರೆ.