Home ಅಂಕಣ ಸೂರ್ಯನ ಆರಾಧನೆಯ ಸುಗ್ಗಿ ಹಬ್ಬ “ಸಂಕ್ರಾಂತಿ”

ಸೂರ್ಯನ ಆರಾಧನೆಯ ಸುಗ್ಗಿ ಹಬ್ಬ “ಸಂಕ್ರಾಂತಿ”

0

ಭಾರತ ದೇಶದಲ್ಲಿ ಪ್ರತಿಯೊಂದು ಪ್ರದೇಶದ ಹಾಗೂ ಅಲ್ಲಿ ವಾಸಿಸುವವರ ಧಾರ್ಮಿಕ ಜೀವನದಲ್ಲಿ ಹಬ್ಬ ಹರಿದಿನಗಳು ಆಚರಣೆಗಳು ಸರ್ವೇ ಸಾಮಾನ್ಯ. ಹಬ್ಬಗಳು ಮನುಷ್ಯ ಸಮೂಹಕ್ಕೆ ಸಂತೋಷ, ಸಡಗರ, ಸಹಜ ಪ್ರೀತಿಯನ್ನು ಬೆಳೆಸುವ ವಿಶೇಷ ಸಂದರ್ಭಗಳಾಗಿವೆ. ಇಂದಿನ ಆಧುನಿಕ ಹಾಗೂ ಒತ್ತಡಯುಕ್ತ ಜೀವನದಲ್ಲಿ ಹಬ್ಬಹರಿದಿನಗಳ ಬಗೆಗಿನ ಆಸಕ್ತಿಯು ಕಳೆದುಕೊಂಡಿಲ್ಲದ್ದನ್ನು ಕಾಣಬಹುದು. ಹಬ್ಬವೆಂಬುದು ಕೆಲವೇ ಧರ್ಮ, ಸಂಪ್ರದಾಯಕ್ಕೆ ಸೀಮಿತವಾದುದಲ್ಲ. ಎಲ್ಲಾ ಧರ್ಮಗಳಲ್ಲೂ ಅವರ ಸಂಪ್ರದಾಯ, ಆಚರಣೆಗೆ ತಕ್ಕಂತೆ ಹಬ್ಬಗಳಿರುವುದನ್ನು ಗಮನಿಸಬಹುದು. ಜಾತ್ಯಾತೀತ ರಾಷ್ಟ್ರವಾದ ನಮ್ಮ ಭಾರತದಲ್ಲಂತೂ ಜಗತ್ತಿನಲ್ಲಿ ಎಲ್ಲಿಯೂ ಇಲ್ಲದಷ್ಟು ವೈವಿದ್ಯಮಯವಾದ ಹಬ್ಬಹರಿದಿನಗಳನ್ನು ಕಾಣಬಹುದು. ಕೆಲವು ಹಬ್ಬಗಳು ಮತ್ತು ಆಚರಣೆಗಳಂತೂ ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರುಗಳಿಂದ, ವಿವಿಧ ರೀತಿ ನೀತಿಯಿಂದ ಆಚರಿಸ್ಪಡುತ್ತವೆ. ಅದರಲ್ಲಿಯೂ ವಿಶೇಷವಾಗಿ “ಸಂಕ್ರಾಂತಿ” ಹಬ್ಬವು ಆ ರೀತಿ ಆಚರಣೆಗೆ ಒಳಪಡುವ ವಿಶೇಷ ಹಾಗೂ ವಿಶಿಷ್ಟ ಹಬ್ಬಗಳಲ್ಲಿ ಒಂದು.

ಹಬ್ಬದ ಹಿನ್ನೆಲೆ: (ಪೌರಾಣಿಕ ಮತ್ತು ವೈಜ್ಞಾನಿಕ)

ಜಗದ ಪ್ರತಿಯೊಂದು ಚಟುವಟಿಕೆಗಳಿಗೂ ಆಧಾರಪ್ರಾಯವಾದ ಸೂರ್ಯನು ಒಂದು ರಾಶಿಯಿಂದ, ಮತ್ತೊಂದು ರಾಶಿಗೆ ಪ್ರವೇಶಿಸುವ ಕಾಲವನ್ನು “ಸಂಕ್ರಮಣ ಅಥವಾ ಸಂಕ್ರಾಂತಿ”ಕಾಲ ಎಂದು ಮೇಲೆ ಪರಿಗಣಿಸಲಾಗುವುದು ಹಾಗೂ ಸಂಕ್ರಾಂತಿಯು ಒಂದು ವಿಧದಲ್ಲಿ ವಿಶೇಷವಾಗಿ ಸೂರ್ಯನ ಆರಾಧನೆಯಾಗಿದ್ದು, “ಉತ್ತರಾಯಣ – ದಕ್ಷಿಯಾಣಗಳ” ಪ್ರಾರಂಭದ ದಿನವಾದ್ದರಿಂದ ಈ ಹಬ್ಬ ಹೆಚ್ಚಿನ ಮಾಹತ್ವವನ್ನು ಪಡೆದಿದೆ.

ಈ ಹಬ್ಬವನ್ನು ಸಾಮಾನ್ಯವಾಗಿ ಸುಗ್ಗಿಯ ಸಂದರ್ಭದಲ್ಲಿ ಆಚರಿಸುವ ಕಾರಣದಿಂದಾಗಿ ಇದನ್ನು ಸುಗ್ಗಿ ಹಬ್ಬ ಎಂತಲೂ, ಭಾರತೀಯ ಕಾಲಮಾನ “ಪುಷ್ಯಮಾಸದಲ್ಲಿ” ಬರುವುದು. ಉತ್ತರಾಯಣದ ಪುಣ್ಯಕಾಲವೆಂತಲೂ, “ದೇವತೆಗಳ ಕಾಲವೆಂದೂ” ಸಹ ಕರೆಯಲಾಗುತ್ತದೆ. ಸೂರ್ಯನು ಇವರೆಗೆ ದಕ್ಷಿಣದತ್ತ ವಾಲಿ ಚರಿಸುತ್ತಿದ್ದುದು, ಸಂಕ್ರಾಂತಿಯ ದಿನದಿಂದ ಉತ್ತರದ ಕಡೆ ಪಥ ಬದಲಾಯಿಸುತ್ತಾನೆ. ಈ ರೀತಿ ಸೂರ್ಯನ ಪಥ ಬದಲಾವಣೆಯಿಂದ ಭಾರತದಲ್ಲಿ ಕೊರೆಯುವ ಚಳಿ ಕಡಿಮೆಯಾಗಿ ಹಗಲು ಹೆಚ್ಚು ಸಂಭವಿಸುತ್ತದೆ ಎಂಬ ಪ್ರತೀತಿ ಇದೆ. ಈ ದಿನಗಳಲ್ಲಿ ಮಾಡಿದ ದಾನದಿಂದ ಸೂರ್ಯನು ಆ ಜನ್ಮ ಪರ್ಯಂತ ಅನುಗ್ರಹಿಸುತ್ತಾನೆಂಬ ನಂಬಿಕೆಯು ಇದೆ. ಅದರಂತೆ ಆಂದ್ರಪ್ರದೇಶ, ತಮಿಳು ನಾಡುಗಳಲ್ಲಿ ಸಂಕ್ರಾಂತಿ ಹಬ್ಬವನ್ನು “ಕನು, ಭೋಗಿ” ಎಂದು ಆಚರಿಸಲ್ಪಡುತ್ತಾರೆ. ಅದರಂತೆ ಅಲಹಾಬಾದಿನಲ್ಲಿ ಈ ಸಂದರ್ಭದಲ್ಲಿ ವಿಶೇಷ ಮತ್ತು ಸಂಭ್ರಮದ “ಕುಂಭ ಮೇಳ” ನಡೆಯುವುದನ್ನು ಕಾಣಬಹುದು. ಉತ್ತರ ಭಾರತದಲ್ಲಿಯೂ ಸಂಕ್ರಾಂತಿಯನ್ನು ಸಂಪ್ರದಾಯ ಬದ್ಧವಾಗಿ ಆಚರಿಸುವುದನ್ನು ಕಾಣುತ್ತೇವೆ.

ಹಬ್ಬದ ಆಚರಣೆ:

ಸಂಕ್ರಾಂತಿ ಹಬ್ಬದ ದಿನದಂದು ಎಳ್ಳು ಬೆಲ್ಲ, ನೆಲಗಡಲೆ, ಸಕ್ಕರೆ ಅಚ್ಚು, ಕೊಬ್ಬರಿ, ಕಬ್ಬು ಬೆರೆಸಿದ ವಿಶೇಷ ಸಿಹಿಯನ್ನು ದೇವರಿಗೆ ನೈವೇದ್ಯ ಮಾಡಿ ನಂತರ ವಿವಾಹಿತ ಹಾಗೂ ಅವಿವಾಹಿತ ಹೆಣ್ಣು ಮಕ್ಕಳು ವಿನಿಮಯ ಮಾಡಿಕೊಂಡು ತಿಂದು ಸಂತೋಷ ಪಡುತ್ತಾರೆ ಹಾಗೂ ತಮ್ಮ ಆಪ್ತರಿಗೆ, ಬಂಧು-ಬಳಗದವರಿಗೆ ಹಂಚುತ್ತಾರೆ. ತಮಿಳುನಾಡಿನಲ್ಲಿ ಬೆಲ್ಲ,ಅಕ್ಕಿ, ತುಪ್ಪದಿಂದ ತಯಾರಿಸಿದ ಪೊಂಗಲನ್ನು ಸುತ್ತಲೂ ಕಬ್ಬನ್ನು ಕಟ್ಟಿ ಸಿಂಗರಿಸಿದ ವಲೆಯಲ್ಲಿ ಮಾಡಿ ಹಬ್ಬವನ್ನು ಆಚರಿಸುತ್ತಾರೆ ಹಾಗೂ ರೈತರು ಈ ದಿನದಂದು ಜಾನುವಾರುಗಳಿಗೆ ಮೈತೊಳೆದು, ಸಿಂಗರಿಸಿ, ವಿಶೇಷ ಮೆರವಣಿಗೆ ಮಾಡಿ, ಸಂಜೆ ಊರ ಒಂದು ಬೀದಿಯಯಲ್ಲಿ ಕಿಚ್ಚು ಹಾಯಿಸುತ್ತಾರೆ, ಇದನ್ನು “ಎಳ್ಳಿನ ಹಬ್ಬವೆಂತಲೂ” ಆಚರಿಸುತ್ತಾರೆ ಹಾಗೂ ಬಗೆ ಬಗೆ ಯಲ್ಲಿ ಎಳ್ಳನ್ನು ಬಳಸುವುದಲ್ಲದೆ, ಪೀಡಾ ಪರಿಹಾರಾರ್ಥವಾಗಿ ಎಳ್ಳನ್ನು ಹಾಗೂ ಎಳಚಿ ಹಣ್ಣನ್ನು ಸುರಿಯುತ್ತಾರೆ. ಪುರಾಣಗಳ ಹೇಳಿಕೆಯಂತೆ ಈ ದಿನದಿಂದ ದೇವತೆಗಳಿಗೆ ಹಗಲು, ರಾಕ್ಷಸರಿಗೆ ರಾತ್ರಿಯಾಗುವುದರಿಂದ ಆನಂದಕ್ಕಾಗಿ ಎಳ್ಳು, ಬೆಲ್ಲ ತಿಂದು ಒಳ್ಳೆಯ ಮಾತುಗಳನ್ನಾಡಿ ಮತ್ತು ಹಿತ ನುಡಿಯುವ ಉದ್ದೇಶದಿಂದಾಗಿ ಎಳ್ಳು ಬೆಲ್ಲ ಹಂಚುವರು.
ಈ ಹಬ್ಬವನ್ನು ವಿಶೇಷವಾಗಿ ನಮ್ಮ ಜನಪದದಲ್ಲಿ “ಸುಗ್ಗಿ ಹಬ್ಬ”ವೆಂದೇ ಆಚರಿಸುವ ಈ ಸಂಕ್ರಾಂತಿಯ ಬಗ್ಗೆ ಹಲವಾರು ಹಾಡುಗಳನ್ನು ಕಟ್ಟಿ ಹಾಡಿರುವುದನ್ನು ಕಾಣುತ್ತೇವೆ.

“ಸಿಂಗಾರ್ದ ಸಿರಿ ಬಂತು
ಸಂಕ್ರಾಂತಿ ಹಬ್ಬ ಬಂತು
ಎಳ್ಳು ಬೆಲ್ಲಕ್ಕೆ ಬಂತು
ಒಳ್ಳೆ ಸಂಕ್ರಾಂತಿ ಹಬ್ಬ ಬಂತು”

“ಸುಗ್ಗಿಯು ಬಂದಿತು
ಹಿಗ್ಗನು ತಂದಿತು
ನಮ್ಮಯ ನಾಡಿನ ಜನಕೆಲ್ಲ”

ಈ ರೀತಿ ನಮ್ಮ ಭಾರತದಲ್ಲಿ ಆಚರಿಸಲ್ಪಡುವ ಪ್ರತಿಯೊಂದು ಧರ್ಮದ ಹಬ್ಬಕ್ಕೂ ತನ್ನದೇ ಆದ ಐತಿಹಾಸಿಕ, ಪೌರಾಣಿಕ, ವೈಜ್ಞಾನಿಕ ಮಹತ್ವಗಳಿವೆ. ಆದರೆ ಇತ್ತೀಚಿನ ದಿನಮಾನಗಳಲ್ಲಿ ಬದಲಾದ ಆಧುನಿಕ ಜೀವನ ಶೈಲಿಯ ಮಧ್ಯದಲ್ಲಿ ಮತ್ತು ಒತ್ತಡಯುಕ್ತ ಜೀವನದಲ್ಲಿ ಹಬ್ಬಗಳ ಆಚರಣೆಯೇ ಕಣ್ಮರೆಯಾಗುತ್ತಿರುವುದು ವಿಪರ್ಯಾಸ.

ಸೂರ್ಯನ ಆರಾಧನೆಯ ಸುಗ್ಗಿ ಹಬ್ಬ “ಸಂಕ್ರಾಂತಿ”

ಭಾರತ ದೇಶದಲ್ಲಿ ಪ್ರತಿಯೊಂದು ಪ್ರದೇಶದ ಹಾಗೂ ಅಲ್ಲಿ ವಾಸಿಸುವವರ ಧಾರ್ಮಿಕ ಜೀವನದಲ್ಲಿ ಹಬ್ಬ ಹರಿದಿನಗಳು ಆಚರಣೆಗಳು ಸರ್ವೇ ಸಾಮಾನ್ಯ. ಹಬ್ಬಗಳು ಮನುಷ್ಯ ಸಮೂಹಕ್ಕೆ ಸಂತೋಷ, ಸಡಗರ, ಸಹಜ ಪ್ರೀತಿಯನ್ನು ಬೆಳೆಸುವ ವಿಶೇಷ ಸಂದರ್ಭಗಳಾಗಿವೆ. ಇಂದಿನ ಆಧುನಿಕ ಹಾಗೂ ಒತ್ತಡಯುಕ್ತ ಜೀವನದಲ್ಲಿ ಹಬ್ಬಹರಿದಿನಗಳ ಬಗೆಗಿನ ಆಸಕ್ತಿಯು ಕಳೆದುಕೊಂಡಿಲ್ಲದ್ದನ್ನು ಕಾಣಬಹುದು. ಹಬ್ಬವೆಂಬುದು ಕೆಲವೇ ಧರ್ಮ, ಸಂಪ್ರದಾಯಕ್ಕೆ ಸೀಮಿತವಾದುದಲ್ಲ. ಎಲ್ಲಾ ಧರ್ಮಗಳಲ್ಲೂ ಅವರ ಸಂಪ್ರದಾಯ, ಆಚರಣೆಗೆ ತಕ್ಕಂತೆ ಹಬ್ಬಗಳಿರುವುದನ್ನು ಗಮನಿಸಬಹುದು. ಜಾತ್ಯಾತೀತ ರಾಷ್ಟ್ರವಾದ ನಮ್ಮ ಭಾರತದಲ್ಲಂತೂ ಜಗತ್ತಿನಲ್ಲಿ ಎಲ್ಲಿಯೂ ಇಲ್ಲದಷ್ಟು ವೈವಿದ್ಯಮಯವಾದ ಹಬ್ಬಹರಿದಿನಗಳನ್ನು ಕಾಣಬಹುದು. ಕೆಲವು ಹಬ್ಬಗಳು ಮತ್ತು ಆಚರಣೆಗಳಂತೂ ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರುಗಳಿಂದ, ವಿವಿಧ ರೀತಿ ನೀತಿಯಿಂದ ಆಚರಿಸ್ಪಡುತ್ತವೆ. ಅದರಲ್ಲಿಯೂ ವಿಶೇಷವಾಗಿ “ಸಂಕ್ರಾಂತಿ” ಹಬ್ಬವು ಆ ರೀತಿ ಆಚರಣೆಗೆ ಒಳಪಡುವ ವಿಶೇಷ ಹಾಗೂ ವಿಶಿಷ್ಟ ಹಬ್ಬಗಳಲ್ಲಿ ಒಂದು.

ಹಬ್ಬದ ಹಿನ್ನೆಲೆ: (ಪೌರಾಣಿಕ ಮತ್ತು ವೈಜ್ಞಾನಿಕ)

ಜಗದ ಪ್ರತಿಯೊಂದು ಚಟುವಟಿಕೆಗಳಿಗೂ ಆಧಾರಪ್ರಾಯವಾದ ಸೂರ್ಯನು ಒಂದು ರಾಶಿಯಿಂದ, ಮತ್ತೊಂದು ರಾಶಿಗೆ ಪ್ರವೇಶಿಸುವ ಕಾಲವನ್ನು “ಸಂಕ್ರಮಣ ಅಥವಾ ಸಂಕ್ರಾಂತಿ”ಕಾಲ ಎಂದು ಮೇಲೆ ಪರಿಗಣಿಸಲಾಗುವುದು ಹಾಗೂ ಸಂಕ್ರಾಂತಿಯು ಒಂದು ವಿಧದಲ್ಲಿ ವಿಶೇಷವಾಗಿ ಸೂರ್ಯನ ಆರಾಧನೆಯಾಗಿದ್ದು, “ಉತ್ತರಾಯಣ – ದಕ್ಷಿಯಾಣಗಳ” ಪ್ರಾರಂಭದ ದಿನವಾದ್ದರಿಂದ ಈ ಹಬ್ಬ ಹೆಚ್ಚಿನ ಮಾಹತ್ವವನ್ನು ಪಡೆದಿದೆ.

ಈ ಹಬ್ಬವನ್ನು ಸಾಮಾನ್ಯವಾಗಿ ಸುಗ್ಗಿಯ ಸಂದರ್ಭದಲ್ಲಿ ಆಚರಿಸುವ ಕಾರಣದಿಂದಾಗಿ ಇದನ್ನು ಸುಗ್ಗಿ ಹಬ್ಬ ಎಂತಲೂ, ಭಾರತೀಯ ಕಾಲಮಾನ “ಪುಷ್ಯಮಾಸದಲ್ಲಿ” ಬರುವುದು. ಉತ್ತರಾಯಣದ ಪುಣ್ಯಕಾಲವೆಂತಲೂ, “ದೇವತೆಗಳ ಕಾಲವೆಂದೂ” ಸಹ ಕರೆಯಲಾಗುತ್ತದೆ. ಸೂರ್ಯನು ಇವರೆಗೆ ದಕ್ಷಿಣದತ್ತ ವಾಲಿ ಚರಿಸುತ್ತಿದ್ದುದು, ಸಂಕ್ರಾಂತಿಯ ದಿನದಿಂದ ಉತ್ತರದ ಕಡೆ ಪಥ ಬದಲಾಯಿಸುತ್ತಾನೆ. ಈ ರೀತಿ ಸೂರ್ಯನ ಪಥ ಬದಲಾವಣೆಯಿಂದ ಭಾರತದಲ್ಲಿ ಕೊರೆಯುವ ಚಳಿ ಕಡಿಮೆಯಾಗಿ ಹಗಲು ಹೆಚ್ಚು ಸಂಭವಿಸುತ್ತದೆ ಎಂಬ ಪ್ರತೀತಿ ಇದೆ. ಈ ದಿನಗಳಲ್ಲಿ ಮಾಡಿದ ದಾನದಿಂದ ಸೂರ್ಯನು ಆ ಜನ್ಮ ಪರ್ಯಂತ ಅನುಗ್ರಹಿಸುತ್ತಾನೆಂಬ ನಂಬಿಕೆಯು ಇದೆ. ಅದರಂತೆ ಆಂದ್ರಪ್ರದೇಶ, ತಮಿಳು ನಾಡುಗಳಲ್ಲಿ ಸಂಕ್ರಾಂತಿ ಹಬ್ಬವನ್ನು “ಕನು, ಭೋಗಿ” ಎಂದು ಆಚರಿಸಲ್ಪಡುತ್ತಾರೆ. ಅದರಂತೆ ಅಲಹಾಬಾದಿನಲ್ಲಿ ಈ ಸಂದರ್ಭದಲ್ಲಿ ವಿಶೇಷ ಮತ್ತು ಸಂಭ್ರಮದ “ಕುಂಭ ಮೇಳ” ನಡೆಯುವುದನ್ನು ಕಾಣಬಹುದು. ಉತ್ತರ ಭಾರತದಲ್ಲಿಯೂ ಸಂಕ್ರಾಂತಿಯನ್ನು ಸಂಪ್ರದಾಯ ಬದ್ಧವಾಗಿ ಆಚರಿಸುವುದನ್ನು ಕಾಣುತ್ತೇವೆ.

ಹಬ್ಬದ ಆಚರಣೆ:

ಸಂಕ್ರಾಂತಿ ಹಬ್ಬದ ದಿನದಂದು ಎಳ್ಳು ಬೆಲ್ಲ, ನೆಲಗಡಲೆ, ಸಕ್ಕರೆ ಅಚ್ಚು, ಕೊಬ್ಬರಿ, ಕಬ್ಬು ಬೆರೆಸಿದ ವಿಶೇಷ ಸಿಹಿಯನ್ನು ದೇವರಿಗೆ ನೈವೇದ್ಯ ಮಾಡಿ ನಂತರ ವಿವಾಹಿತ ಹಾಗೂ ಅವಿವಾಹಿತ ಹೆಣ್ಣು ಮಕ್ಕಳು ವಿನಿಮಯ ಮಾಡಿಕೊಂಡು ತಿಂದು ಸಂತೋಷ ಪಡುತ್ತಾರೆ ಹಾಗೂ ತಮ್ಮ ಆಪ್ತರಿಗೆ, ಬಂಧು-ಬಳಗದವರಿಗೆ ಹಂಚುತ್ತಾರೆ. ತಮಿಳುನಾಡಿನಲ್ಲಿ ಬೆಲ್ಲ,ಅಕ್ಕಿ, ತುಪ್ಪದಿಂದ ತಯಾರಿಸಿದ ಪೊಂಗಲನ್ನು ಸುತ್ತಲೂ ಕಬ್ಬನ್ನು ಕಟ್ಟಿ ಸಿಂಗರಿಸಿದ ವಲೆಯಲ್ಲಿ ಮಾಡಿ ಹಬ್ಬವನ್ನು ಆಚರಿಸುತ್ತಾರೆ ಹಾಗೂ ರೈತರು ಈ ದಿನದಂದು ಜಾನುವಾರುಗಳಿಗೆ ಮೈತೊಳೆದು, ಸಿಂಗರಿಸಿ, ವಿಶೇಷ ಮೆರವಣಿಗೆ ಮಾಡಿ, ಸಂಜೆ ಊರ ಒಂದು ಬೀದಿಯಯಲ್ಲಿ ಕಿಚ್ಚು ಹಾಯಿಸುತ್ತಾರೆ, ಇದನ್ನು “ಎಳ್ಳಿನ ಹಬ್ಬವೆಂತಲೂ” ಆಚರಿಸುತ್ತಾರೆ ಹಾಗೂ ಬಗೆ ಬಗೆ ಯಲ್ಲಿ ಎಳ್ಳನ್ನು ಬಳಸುವುದಲ್ಲದೆ, ಪೀಡಾ ಪರಿಹಾರಾರ್ಥವಾಗಿ ಎಳ್ಳನ್ನು ಹಾಗೂ ಎಳಚಿ ಹಣ್ಣನ್ನು ಸುರಿಯುತ್ತಾರೆ. ಪುರಾಣಗಳ ಹೇಳಿಕೆಯಂತೆ ಈ ದಿನದಿಂದ ದೇವತೆಗಳಿಗೆ ಹಗಲು, ರಾಕ್ಷಸರಿಗೆ ರಾತ್ರಿಯಾಗುವುದರಿಂದ ಆನಂದಕ್ಕಾಗಿ ಎಳ್ಳು, ಬೆಲ್ಲ ತಿಂದು ಒಳ್ಳೆಯ ಮಾತುಗಳನ್ನಾಡಿ ಮತ್ತು ಹಿತ ನುಡಿಯುವ ಉದ್ದೇಶದಿಂದಾಗಿ ಎಳ್ಳು ಬೆಲ್ಲ ಹಂಚುವರು.
ಈ ಹಬ್ಬವನ್ನು ವಿಶೇಷವಾಗಿ ನಮ್ಮ ಜನಪದದಲ್ಲಿ “ಸುಗ್ಗಿ ಹಬ್ಬ”ವೆಂದೇ ಆಚರಿಸುವ ಈ ಸಂಕ್ರಾಂತಿಯ ಬಗ್ಗೆ ಹಲವಾರು ಹಾಡುಗಳನ್ನು ಕಟ್ಟಿ ಹಾಡಿರುವುದನ್ನು ಕಾಣುತ್ತೇವೆ.

“ಸಿಂಗಾರ್ದ ಸಿರಿ ಬಂತು
ಸಂಕ್ರಾಂತಿ ಹಬ್ಬ ಬಂತು
ಎಳ್ಳು ಬೆಲ್ಲಕ್ಕೆ ಬಂತು
ಒಳ್ಳೆ ಸಂಕ್ರಾಂತಿ ಹಬ್ಬ ಬಂತು”

“ಸುಗ್ಗಿಯು ಬಂದಿತು
ಹಿಗ್ಗನು ತಂದಿತು
ನಮ್ಮಯ ನಾಡಿನ ಜನಕೆಲ್ಲ”

ಈ ರೀತಿ ನಮ್ಮ ಭಾರತದಲ್ಲಿ ಆಚರಿಸಲ್ಪಡುವ ಪ್ರತಿಯೊಂದು ಧರ್ಮದ ಹಬ್ಬಕ್ಕೂ ತನ್ನದೇ ಆದ ಐತಿಹಾಸಿಕ, ಪೌರಾಣಿಕ, ವೈಜ್ಞಾನಿಕ ಮಹತ್ವಗಳಿವೆ. ಆದರೆ ಇತ್ತೀಚಿನ ದಿನಮಾನಗಳಲ್ಲಿ ಬದಲಾದ ಆಧುನಿಕ ಜೀವನ ಶೈಲಿಯ ಮಧ್ಯದಲ್ಲಿ ಮತ್ತು ಒತ್ತಡಯುಕ್ತ ಜೀವನದಲ್ಲಿ ಹಬ್ಬಗಳ ಆಚರಣೆಯೇ ಕಣ್ಮರೆಯಾಗುತ್ತಿರುವುದು ವಿಪರ್ಯಾಸ.

You cannot copy content of this page

Exit mobile version