Home ದೆಹಲಿ ರಸ್ತೆ ಇದ್ದರೆ.. ಫುಟ್‌ಪಾತ್ ಇರಲೇಬೇಕು!: ಕೇಂದ್ರ ಸರ್ಕಾರಕ್ಕೆ ಉನ್ನತ ನ್ಯಾಯಾಲಯದ ಆದೇಶ

ರಸ್ತೆ ಇದ್ದರೆ.. ಫುಟ್‌ಪಾತ್ ಇರಲೇಬೇಕು!: ಕೇಂದ್ರ ಸರ್ಕಾರಕ್ಕೆ ಉನ್ನತ ನ್ಯಾಯಾಲಯದ ಆದೇಶ

0

ದೆಹಲಿ: ದೇಶದ ಪ್ರತಿಯೊಂದು ರಸ್ತೆಯಲ್ಲೂ ಪಾದಚಾರಿಗಳಿಗಾಗಿ ಪ್ರತ್ಯೇಕ ಮಾರ್ಗವಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಉನ್ನತ ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ. ರಸ್ತೆ ಅಪಘಾತ ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯಪೀಠವು ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ಅವರಿಗೆ ಈ ಸೂಚನೆ ನೀಡಿದೆ.

‘ದೊಡ್ಡ ಮಟ್ಟದ ಹೂಡಿಕೆ ಅಥವಾ ನಿರ್ಮಾಣಗಳ ಅಗತ್ಯವಿಲ್ಲದೆಯೇ ಪಾದಚಾರಿಗಳಿಗಾಗಿ ಕಾಯ್ದಿರಿಸಿದ ಜಾಗವನ್ನು ಪ್ರತ್ಯೇಕವಾಗಿ ಗುರುತಿಸಿ. ಎಲ್ಲಿ ರಸ್ತೆ ಇರುತ್ತದೆಯೋ.. ಅಲ್ಲಿ ಪಾದಚಾರಿಗಳಿಗಾಗಿ ಪ್ರತ್ಯೇಕ ಸ್ಥಳ ಇರಲೇಬೇಕು. ಅದು ಹಗ್ಗದಿಂದಾಗಲಿ ಅಥವಾ ಇನ್ನಾವ ರೀತಿಯಲ್ಲಾದರೂ ಸರಿ, ರಸ್ತೆಯಲ್ಲಿ ಪಾದಚಾರಿಗಳಿಗೆ ಪ್ರತ್ಯೇಕ ಮಾರ್ಗವಿರಬೇಕು ಮತ್ತು ಆ ಜಾಗ ಆಕ್ರಮಣಕ್ಕೆ ಒಳಗಾಗದಂತೆ ನೋಡಿಕೊಳ್ಳಬೇಕು’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲು ಕೇಂದ್ರ ಸರ್ಕಾರಕ್ಕೆ ಎರಡು ವಾರಗಳ ಕಾಲಾವಕಾಶ ನೀಡಲಾಗಿದೆ.

You cannot copy content of this page

Exit mobile version