Monday, July 28, 2025

ಸತ್ಯ | ನ್ಯಾಯ |ಧರ್ಮ

ಸ್ವಾತಂತ್ರ್ಯ ಸತ್ಯಾಗ್ರಹದ ದಕ್ಷ ಸತ್ಯಾಗ್ರಹಿ ಸ್ನೇಹಲತಾ ವರ್ಮಾ

ಸ್ವಾತಂತ್ರ್ಯ ಹೋರಾಟಗಾರ ಶ್ರೀ ಮಾಣಿಕ್ಯಲಾಲ್ ವರ್ಮಾರವರ ಪುತ್ರಿ ಶ್ರೀಮತಿ. ಸ್ನೇಹಲತಾ ವರ್ಮಾಅವರು ತಮ್ಮ ಅಜ್ಜಿಯೊಂದಿಗೆ, ತಂದೆಯವರ ನೇತೃತ್ವದ ಬಿಜೋಲಿಯಾ ರೈತ ಚಳವಳಿಯಲ್ಲಿ ಭಾಗವಹಿಸಿದ್ದರು. ತಮ್ಮ ತಂದೆಯ ದಾರಿಯಲ್ಲಿಯೇ ಸಾಗಿದ ಸ್ನೇಹಲತಾರವರು, ಇದೇ ಕಾರಣಕ್ಕಾಗಿ ಎಷ್ಟೋ ಬಾರಿ ದೌರ್ಜನ್ಯವನ್ನು ಎದುರಿಸಬೇಕಾಯಿತು. ಆಕೆಯ ಈ ಪ್ರಯತ್ನಕ್ಕೆ, ಪತಿ ಶ್ರೀ ಹರೀಶ್ ಚಂದ್ರ ಪ್ರವಾಸಿಯವರ ಸಂಪೂರ್ಣ ಸಹಕಾರವಿತ್ತು. ಉದಯಪುರದಲ್ಲಿ ನಡೆದ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಕ್ಕಾಗಿ ಆಕೆಯನ್ನು ಬಂಧಿಸಲಾಯಿತು. ಅವರ ತಾಯಿ ‘ಮಹಿಳಾ ಸಂಘಟನೆ’ಯನ್ನು ಸ್ಥಾಪಿಸಿದರು. ಮುಂದೆ, ಸ್ವಾತಂತ್ರ್ಯ ಚಳುವಳಿಯಲ್ಲಿ ಮಹಿಳೆಯರನ್ನು ತೊಡಗಿಸಿಕೊಳ್ಳಲು ಸ್ನೇಹಲತಾ ವರ್ಮಾರವರು ಈ ಸಂಘಟನೆಯನ್ನು ಹೋರಾಟದ ವೇದಿಕೆಯನ್ನಾಗಿ ಮಾಡಿಕೊಂಡರು. ಮಹಿಳೆಯರ ಅಭಿವೃದ್ಧಿಗಾಗಿ ಹಲವಾರು ಕಾರ್ಯಗಳನ್ನು ನಿರ್ವಹಿಸಿದರು.  ಸ್ವಾತಂತ್ರ್ಯದ ಅಗತ್ಯದ ಬಗ್ಗೆ ಮತ್ತು ಮೇವಾರದ ಅಭಿವೃದ್ಧಿಯ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page