ತೆಲಂಗಾಣ | ಕಾರ್ಖಾನೆ ಸ್ಫೋಟ: 42ಕ್ಕೆ ಏರಿದ ಸಾವಿನ ಸಂಖ್ಯೆ; ಇನ್ನೂ ಸಿಗದ 8 ಜನರ ಸುಳಿವು

ಹೈದರಾಬಾದ್: ಸಂಗಾರೆಡ್ಡಿ ಜಿಲ್ಲೆಯ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸಾವಿನ ಸಂಖ್ಯೆ 42ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೂನ್ 30 ರಂದು ಸಂಭವಿಸಿದ ಸ್ಫೋಟದ ನಂತರ ಕಾಣೆಯಾಗಿರುವ ಎಂಟು ಜನರಿಗೆ ಸಂಬಂಧಿಸಿದ ಶವದ ತುಣುಕುಗಳು ಮತ್ತು ಸಾಕ್ಷ್ಯಾಧಾರಗಳನ್ನು ಹುಡುಕಲು ಸೋಮವಾರವೂ ಸ್ಫೋಟದ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.

ರಕ್ಷಣಾ ತಂಡಗಳು ಸ್ಥಳದಿಂದ ಸುಮಾರು 100 ವಿರೂಪಗೊಂಡ ದೇಹದ ಭಾಗಗಳನ್ನು ವಶಪಡಿಸಿಕೊಂಡಿವೆ.

ಈ ಶವದ ತುಣುಕುಗಳನ್ನು, ಜೊತೆಗೆ ಸಂಬಂಧಿಕರ ರಕ್ತದ ಮಾದರಿಗಳನ್ನು, ಕಾಣೆಯಾದ ಎಂಟು ಜನರ ಗುರುತನ್ನು ದೃಢೀಕರಿಸಲು ಕೇಂದ್ರೀಯ ಫಾರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ (ಸಿಎಫ್‌ಎಸ್‌ಎಲ್)ಗೆ ಡಿಎನ್‌ಎ ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ.

ರಕ್ತದ ಮಾದರಿಗಳನ್ನು ಭಾನುವಾರ ಸಂಗ್ರಹಿಸಿ, ಪರೀಕ್ಷೆಗಾಗಿ ಸಿಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ.

ಕಾಣೆಯಾದ ಎಂಟು ವ್ಯಕ್ತಿಗಳನ್ನು ರಾಹುಲ್ ಕುಮಾರ್ ಶರ್ಮಾ (ಉತ್ತರ ಪ್ರದೇಶ), ಜಿ ವೆಂಕಟೇಶ್ (ಆಂಧ್ರ ಪ್ರದೇಶ), ಎಸ್ ರವಿ (ತೆಲಂಗಾಣ), ಎಸ್ ಜಸ್ಟಿನ್ (ತೆಲಂಗಾಣ), ವಿಜಯ್ ಕುಮಾರ್ ನಿಶಾದ್ (ಬಿಹಾರ), ಅಕಿಲೇಶ್ ಕುಕಾ ನಿಶಾದ್ (ಬಿಹಾರ), ಇರ್ಫಾನ್ ಅನ್ಸಾರಿ (ಝಾರ್ಖಂಡ್), ಮತ್ತು ಶಿವಾಜಿ ಕುಮಾರ್ (ಬಿಹಾರ) ಎಂದು ಗುರುತಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು