Home ರಾಜ್ಯ ದಾವಣಗೆರೆ ಬಸ್- ಓಮ್ನಿ ನಡುವೆ ಭೀಕರ ಅಪಘಾತ, ಮೂವರ ಬದುಕು ಅಂತ್ಯ

ಬಸ್- ಓಮ್ನಿ ನಡುವೆ ಭೀಕರ ಅಪಘಾತ, ಮೂವರ ಬದುಕು ಅಂತ್ಯ

0

ದಾವಣಗೆರೆ,ಎ.12- KSRTC ಬಸ್ ಮತ್ತು ಓಮ್ನಿ ವ್ಯಾನ್ ನಡುವೆ ನಡೆದ ಭಯಾನಕ ಅಪಘಾತದಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ನ್ಯಾಮತಿ ತಾಲೂಕಿನ ಚಿನ್ನಿಕಟ್ಟಿ ಗ್ರಾಮದ ಬಳಿ ನಡೆದಿದೆ. ವ್ಯಾನಿನಲ್ಲಿದ್ದವರನ್ನು ಶಿವಮೊಗ್ಗ ಗ್ರಾಮಾಂತರ ತಾಲೂಕಿನ ಹರಮಘಟ್ಟ ಗ್ರಾಮದ ನಂಜುಂಡಪ್ಪ (83), ರಾಕೇಶ್ (27), ದೇವರಾಜ್ (30) ಎಂದು ಗುರುತಿಸಲಾಗಿದೆ.

ಕೆಎಸ್‌ಆರ್‌ಟಿಸಿ ಬಸ್ ಶಿಕಾರಿಪುರದ ಕಡೆಯಿಂದ ಬರುತ್ತಿದ್ದರೆ ವ್ಯಾನ್ ಶಿವಮೊಗ್ಗದ ಕಡೆಗೆ ಹೋಗುತ್ತಿತ್ತು ಅಪಘಾತ ರಭಸಕ್ಕೆ ವ್ಯಾನ್ ನಜ್ಜುಗುಜ್ಜಾಗಿದ್ದು ಅದಲಿದ್ದ ಮೂವರ ಗುರುತು ಸಿಗದಂತೆ ತೀವ್ರವಾಗಿ ಗಾಯಗೊಂಡಿದ್ದರು .

ಬಸ್ಸಿನ ಮುಂಭಾಗ ಛಿದ್ರಗೊಂಡಿದೆ. ಘಟನೆಯಲ್ಲಿ ಆರಕ್ಕೂ ಹೆಚ್ಚು ಮಂದಿಗೆ ಗಾಯವಾಗಿದ್ದು, ತೀವ್ರ ಗಾಯಗೊಂಡ ಇಬ್ಬರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸಣ್ಣ ಪುಟ್ಟ ಗಾಯಗೊಂಡವರನ್ನು ನ್ಯಾಮತಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

You cannot copy content of this page

Exit mobile version