Saturday, June 21, 2025

ಸತ್ಯ | ನ್ಯಾಯ |ಧರ್ಮ

ಆಳುವ ವರ್ಗಗಳಿಂದ ಸಾಮಾನ್ಯ ವರ್ಗಗಳ ಸಂಪೂರ್ಣ ನಿರ್ಲಕ್ಷ್ಯ – ಕಾ. ಎಸ್ ವರಲಕ್ಷ್ಮಿ

ಹಾಸನ: ಜನತೆಯ ಅಭಿವೃದ್ಧಿಯ ವಿಚಾರಗಳಿಂದ ಆಳುವ ಸರ್ಕಾರಗಳು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತಿರುವುದರಿಂದ ಜನತೆ ಸಂಕಷ್ಟದೆಡೆಗೆ ದೂಡಲ್ಪಡುತ್ತಿದ್ದಾರೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)ದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯೆ ಎಸ್.ವರಲಕ್ಷ್ಮಿ ದೂರಿದರು.

ಹಾಸನ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಒತ್ತಾಯಿಸಿ ಕಾಂ. ಸೀತಾರಾಂ ಯೆಚೂರಿ ನಗರ ಕಾಂ. ಬುದ್ದದೇವ ಸಭಾಂಗಣದಲ್ಲಿ ಕಾಂ. ಜಿ.ವಿ.ಶ್ರೀರಾಮರೆಡ್ಡಿ ವೇದಿಕೆಯಲ್ಲಿ ಸಿಪಿಎಂ ಹಾಸನ ಜಿಲ್ಲಾ ಘಟಕದ 12ನೇ ಸಮ್ಮೇಳನದ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡುತ್ತಿದ್ದರು. ಮೂರನೇ ಅವಧಿಗೆ ದೇಶದ ಪ್ರಧಾನಿಯಾದ ನರೇಂದ್ರ ಮೋದಿ ಅವರು ಆರಂಭದ ದಿನದಿಂದಲೂ ತಾನು ತಿನ್ನಲ್ಲ ತಿನ್ನಲೂ ಬಿಡುವುದಿಲ್ಲ ಮತ್ತು ಜನತೆಯ ಪ್ರಧಾನ ಸೇವಕ ಎಂಬ ಜನಪ್ರಿಯ ಘೋಷಣೆಗಳನ್ನು ಹೇಳಿತ್ತಲೇ ಬರುತ್ತಿದ್ದಾರೆ. ಆದರೆ ರಾಜ್ಯ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ನಡೆಸಿದ ಕೋವಿಡ್ ಹಗರಣಕ್ಕೆ ಶಿಕ್ಷೆ ಕೊಡಿಸುತ್ತಾರಾ? ಕೊರೊನಾ ಚಿಕಿತ್ಸೆಗಾಗಿ ಒಂದು ಪಿಪಿಇ ಕಿಟ್‌ಗೆ ಮಾರುಕಟ್ಟೆಯಲ್ಲಿ 317 ಇದ್ದರೆ ಬಿಜೆಪಿಯವರು 2500 ರೂ ನೀಡಿದ್ದಾರೆ, ಅದೇ ರೀತಿ ಐಸಿಯು ಬೆಡ್‌ಗೆ ಮಾರುಕಟ್ಟೆಯಲ್ಲಿ 98000 ರೂ ಇದ್ದರೆ ಇವರು 2 ಲಕ್ಷ ನೀಡಿದ್ದಾರೆ ಎಂದು ತನಿಖಾ ಏಜೆನ್ಸಿಗಳ ಮಾಹಿತಿ ಆಧರಿಸಿ ಮಾಧ್ಯಮಗಳು ವರದಿ ಮಾಡಿವೆ. ಇದಕ್ಕೆ ದೇಶದ ಚುಕ್ಕಾಣಿ ಹಿಡಿದಿರುವ ಮೋದಿಯವರು ಏನು ಹೇಳುತ್ತಾರೆ? ಜನತೆ ಕ್ಷಮಿಸಲಾರದ ಈ ತಪ್ಪಿಗೆ ಶಿಕ್ಷೆ ಏನು ಎಂದು ವರಲಕ್ಷ್ಮಿ ಪ್ರಶ್ನಿಸಿದರು.

ದೇಶ ಕಂಡ ಬೃಹತ್ ಹಗರಣವಾದ ಎಲೆಕ್ಟ್ರೊ ಬಾಂಡ್ ಮೂಲಕ ಅಪಾರ ಪ್ರಮಾಣದ ಹಣ ಸಂಗ್ರಹಿಸಿರುವ ಬಿಜೆಪಿ ದೇಶದಲ್ಲಿ ಅಪ್ರಜಾಸತ್ತಾತ್ಮಕವಾಗಿ ಚುನಾವಣೆ ನಡೆಸುವ ಮೂಲಕ ಅಧಿಕಾರಕ್ಕೆ ಬರುತ್ತಿದೆ. ಜನತೆಗೆ ವಿರೋಧವಾದ ಕಾನೂನುಗಳನ್ನು ಮತ್ತು ನೀತಿಗಳನ್ನು ಜಾರಿ ಮಾಡುತ್ತಿದೆ. ರೈತರ ಭೂಮಿಯ ಮೇಲೆ ಕಣ್ಣು ಹಾಕಿರುವ ಸರ್ಕಾರಗಳು ಪ್ರತಿ ತಾಲೂಕುಗಳಲ್ಲಿ ಕನಿಷ್ಟ 10 ಎಕರೆಯನ್ನು ಕೈಗಾರಿಕಾ ಉದ್ದೇಶಕ್ಕಾಗಿ ಮೀಸಲಿಡುವ ಆದೇಶ ಹೊರಡಿಸಿದೆ. ಇದನ್ನು ವಿರೋಧಿಸಿ ರೈತರು ನಮ್ಮ ಭೂಮಿಯನ್ನು ನಮಗೆ ಬಿಡಿ ಎಂಬ ಹೋರಾಟವನ್ನು ಸಂವಿಧಾನ ಸಮರ್ಪಣಾ ದಿನವಾದ ನ.26ರಿಂದ ಹೋರಾಟ ನಡೆಸಲಿದ್ದಾರೆ. ಇದಕ್ಕೆ ಸಿಪಿಎಂ ಬೆಂಬಲ ನೀಡಲಿದೆ ಎಂದು ಹೇಳಿದರು.

ಐಎಂಎಫ್‌£ ವರದಿಯಂತೆ ಗ್ರಾಮೀಣ ಪ್ರದೇಶಗಳು ಮೂಲ ಸೌಕರ್ಯ ಕೊರತೆಯಿಂದ ಬಳಲುತ್ತಿವೆ. ಗ್ರಾಮೀಣ ಜನತೆ ಕೂಡ ಅಪೌಷ್ಟಿಕತೆ ಸೇರಿದಂತೆ ವಿವಿಧ ಕಾರಣಗಳಿಂದ ಜೀವಿತಾವಧಿ 60 ವರ್ಷಕ್ಕೆ ಇಳಿದಿದೆ. ಇದಕ್ಕೆ ಬೆಲೆ ಏರಿಕೆ ಮತ್ತು ದುಡಿಮೆಯ ಕೂಲಿ ಕಡಿಮೆಯಾಗಿರುವುದು ಕಾರಣವಾಗಿದೆ. ಹಾಗಾಗಿ ವಿವಿಧ ದುಡಿಯುವ ವರ್ಗಗಳ ಕನಿಷ್ಟ ಕೂಲಿಯನ್ನು ಕನಷ್ಟ 36 ಸಾವಿರಕ್ಕೆ ಏರಿಸಬೇಕು ಎಂದು ಡಿಸೆಂಬರ್‌ನಲ್ಲಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದದರು.

ದೇಶದಲ್ಲಿ ಉದ್ಯೋಗ ನಷ್ಟ ತೀವ್ರಗತಿಯಲ್ಲಿ ಏರುತ್ತಿದೆ. ಸರ್ಕಾರಗಳೂ ಕೂಡ ಅಧೆ ದಾರಿಯಲ್ಲಿ ಸಾಗುತ್ತಿದೆ. ಅದಕ್ಕೆ ಉದಾಹರಣ ಎಂಬಂತೆ ಕರ್ನಾಟಕ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ನಿರ್ವಹಕ ರಹಿತ 5000 ಬಸ್‌ಗಳನ್ನು ಕಾರ್ಯಾಚರಣೆಗೆ ಇಳಿಸುವ ಬಗ್ಗೆ ಹೇಳಿದ್ದಾರೆ. ಇದರ ಜೊತೆಗೆ ಹೊರಗುತ್ತಿಗೆ , ಸ್ಕೀಂ, ಮತ್ತಿತರ ಮಾದರಿ ಮೀಊಲಕ ಶೇ.95 ಭಾಗ ಖಾತ್ರಿ ಇಲ್ಲದ ಉದ್ಯೋಗಗಳಿಗೆ. ಜೊತೆಗೆ ರಾಜ್ಯವೊಂದರಲ್ಲೇ 11 ಲಕ್ಷ ಉದ್ಯೋಗಗಳು ಖಾಲಿ ಇವೆ. ಹಾಗಾಗಿ ಸರ್ಕಾರಗಳೇ ಜನರನ್ನು ಸಂಕಷ್ದಕ್ಕೆ ದೂಡುತ್ತಿವೆ ಎಂದು ಆರೋಪಿಸಿದರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಧರ್ಮೇಶ್, ಕಾರ್ಯದರ್ಶಿ ಮಂಡಳಿ ಸದಸ್ಯ ನವೀನ್‌ಕುಮಾರ್ ಮತ್ತು ಹಾಸನ ಸ್ಥಳೀಯ ಸಮಿತಿ ಕಾರ್ಯದರ್ಶಿ ಪೃಥ್ವಿ ಮಾತನಾಡಿದರು. ಜಿ.ಪಿ.ಸತ್ಯನಾರಾಯಣ ಅಧ್ಯಕ್ಷತೆವಹಿಸಿದ್ದರು.

ಆಕರ್ಷಕ ಮೆರವಣಿಗೆ
ಬಹಿರಂಗ ಸಭೆಗೂ ಮೂನ್ನು ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಮಹಾವೀರ ವೃತ್ತದ ಮೂಲಕ ಸಾಲಗಾಮೆ ಗೇಟ್ ಬಳಿಯಿಂದ ನೀಲಕಂಠೇಶ್ವರ ಸಮುದಾಯ ಭವನದವರೆಗೂ ಕೆಂಪು ಸೀರೆಯುಟ್ಟ ಮಹಿಳೆಯರು ಮತ್ತು ಕೇಂಪು ಶರ್ಟ್ ಧರಿಸಿದ ಪುರುಷ ಸದಸ್ಯರು ಆಕರ್ಷಕ ಮೆರವಣಿಗೆ ನಡೆಸಿದರು. ಈ ವೇಳೆ ಸರ್ಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸಿ ಘೋಷಣೆ ಕೂಗಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page