Home ಅಪಘಾತ ಹೈದರಾಬಾದ್: ಶ್ರೀಕೃಷ್ಣ ಜನ್ಮಾಷ್ಟಮಿ ಶೋಭಾಯಾತ್ರೆಯಲ್ಲಿ ದುರಂತ, ವಿದ್ಯುತ್ ತಂತಿ ತಗುಲಿ ಐವರ ಸಾವು

ಹೈದರಾಬಾದ್: ಶ್ರೀಕೃಷ್ಣ ಜನ್ಮಾಷ್ಟಮಿ ಶೋಭಾಯಾತ್ರೆಯಲ್ಲಿ ದುರಂತ, ವಿದ್ಯುತ್ ತಂತಿ ತಗುಲಿ ಐವರ ಸಾವು

0

ಹೈದರಾಬಾದ್: ಹೈದರಾಬಾದ್‌ನ ರಾಮಂತಾಪುರ ಗೋಖಲೆ ನಗರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯ ಸಂದರ್ಭದಲ್ಲಿ ನಡೆದ ಶೋಭಾಯಾತ್ರೆಯಲ್ಲಿ, ರಥವೊಂದು ವಿದ್ಯುತ್ ತಂತಿಗಳಿಗೆ ತಗುಲಿ ಭಾರಿ ದುರಂತ ಸಂಭವಿಸಿದೆ. ಈ ಘಟನೆಯಲ್ಲಿ ಐದು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ರಾತ್ರಿ 9 ಗಂಟೆಗೆ ಆರಂಭವಾದ ಯಾತ್ರೆಯು ಮಳೆಯ ಕಾರಣದಿಂದ ಮಧ್ಯರಾತ್ರಿ 12.30ರವರೆಗೂ ನಡೆದಿತ್ತು. ಈ ವೇಳೆ, ರಥವನ್ನು ಎಳೆಯುತ್ತಿದ್ದ ಜೀಪ್ ಕೆಟ್ಟು ನಿಂತಿದ್ದರಿಂದ, ಆಯೋಜಕರು ರಥವನ್ನು ಕೈಯಿಂದ ತಳ್ಳಲು ಮುಂದಾದರು. ಈ ಸಂದರ್ಭದಲ್ಲಿ ರಥದ ಮೇಲ್ಭಾಗವು ಆಕಸ್ಮಿಕವಾಗಿ ವಿದ್ಯುತ್ ತಂತಿಗಳಿಗೆ ತಗುಲಿ ಎಲ್ಲರೂ ವಿದ್ಯುತ್ ಆಘಾತಕ್ಕೆ ಒಳಗಾದರು.

ಈ ದುರ್ಘಟನೆಯಲ್ಲಿ ಕೃಷ್ಣ ಯಾದವ್ (24), ಶ್ರೀಕಾಂತ್ ರೆಡ್ಡಿ (35), ಸುರೇಶ್ ಯಾದವ್ (34), ರುದ್ರ ವಿಕಾಸ್ (39), ಮತ್ತು ರಾಜೇಂದ್ರ ರೆಡ್ಡಿ (39) ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ನಾಲ್ವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

You cannot copy content of this page

Exit mobile version