ಹಾಸನ : ಜಿಲ್ಲೆಯ ಸಕಲೇಶಪುರ-ಸುಬ್ರಹ್ಮಣ್ಯ ರೈಲು ಮಾರ್ಗದಲ್ಲಿ ಸುರಕ್ಷತೆ ಮತ್ತು ವಿದ್ಯುದ್ದೀಕರಣ ಕಾಮಗಾರಿಗಳ ಹಿನ್ನೆಲೆಯಲ್ಲಿ ಜೂನ್ 1 ರಿಂದ ನವೆಂಬರ್ 1 ರವರೆಗೆ ಹಲವು ಪ್ರಮುಖ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ
ರದ್ದಾಗಿರುವ ರೈಲುಗಳ ವಿವರಗಳು ಹೀಗಿವೆ:
- ಯಶವಂತಪುರ-ಮಂಗಳೂರು ಎಕ್ಸ್ಪ್ರೆಸ್ (16539): ರದ್ದಿನ ಅವಧಿ ಮೇ 31, 2025 ರಿಂದ ನವೆಂಬರ್ 1, 2025; ಪ್ರತಿ ಶನಿವಾರ ರದ್ದು.
- ಮಂಗಳೂರು-ಯಶವಂತಪುರ ಸಾಪ್ತಾಹಿಕ ಎಕ್ಸ್ಪ್ರೆಸ್ (16540): ಜೂನ್ 1, 2025 ರಿಂದ ನವೆಂಬರ್ 2, 2025; ಪ್ರತಿ ಭಾನುವಾರ ರದ್ದು.
- ಯಶವಂತಪುರ-ಮಂಗಳೂರು ಜಂಕ್ಷನ್ ಟ್ರೈ-ವೀಕ್ಲಿ ಎಕ್ಸ್ಪ್ರೆಸ್ (16575): ಜೂನ್ 1, 2025 ರಿಂದ ಅಕ್ಟೋಬರ್ 30, 2025; ಮಂಗಳವಾರ, ಗುರುವಾರ, ಭಾನುವಾರ ರದ್ದು.
- ಮಂಗಳೂರು-ಯಶವಂತಪುರ ಟ್ರೈ-ವೀಕ್ಲಿ ಎಕ್ಸ್ಪ್ರೆಸ್ (16576): ಜೂನ್ 2, 2025 ರಿಂದ ಅಕ್ಟೋಬರ್ 31, 2025; ಸೋಮವಾರ, ಬುಧವಾರ, ಶುಕ್ರವಾರ ರದ್ದು.
- ಯಶವಂತಪುರ-ಕಾರವಾರ ಟ್ರೈ-ವೀಕ್ಲಿ ಎಕ್ಸ್ಪ್ರೆಸ್ (16515): ಜೂನ್ 2, 2025 ರಿಂದ ಅಕ್ಟೋಬರ್ 31, 2025; ಸೋಮವಾರ, ಬುಧವಾರ, ಶುಕ್ರವಾರ ರದ್ದು.
- ಕಾರವಾರ-ಯಶವಂತಪುರ ಟ್ರೈ-ವೀಕ್ಲಿ ಎಕ್ಸ್ಪ್ರೆಸ್ (16516): ಜೂನ್ 3, 2025 ರಿಂದ ನವೆಂಬರ್ 1, 2025; ಮಂಗಳವಾರ, ಗುರುವಾರ, ಶನಿವಾರ ರದ್ದು.
ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆಯಲು ಹತ್ತಿರದ ರೈಲ್ವೆ ನಿಲ್ದಾಣವನ್ನು ಸಂಪರ್ಕಿಸುವಂತೆ ತಿಳಿಸಿದೆ. ಈ ತಾತ್ಕಾಲಿಕ ತೊಂದರೆಗೆ ಇಲಾಖೆ ಕ್ಷಮೆಯಾಚಿಸಿದೆ.