ಬೇಲೂರು: ಬೇಲೂರು ತಾಲೂಕಿನ ಗೋವಿನಹಳ್ಳಿಯಲ್ಲಿ ಅಂಬೇಡ್ಕರ್ ಭವನದ ಕಾಮಗಾರಿ ತುಂಬಾ ಕಳಪೆಯಾಗಿದ್ದು ಆರು-ಏಳು ತಿಂಗಳುಗಳಿಗೆ ಉಪಯೋಗಕ್ಕೆ ಬಾರದ ರೀತಿ ಬದಲಾಗಿದೆ, ಇದರಿಂದ ಸಾರ್ವಜನಿಕರಿಗೆ ಏನೂ ಪ್ರಯೋಜನವಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ʻಪೀಪಲ್ ಮೀಡಿಯಾʼ ಜೊತೆ ಮಾತನಾಡಿದ ಸ್ಥಳೀಯರಾದ ಇಂದ್ರೇಶ್ ಜಿ.ಎಸ್, ಸರ್ಕಾರ 10 ರಿಂದ 15 ಲಕ್ಷ ಹಣ ಖರ್ಚು ಮಾಡಿ ಗ್ರಾಮೀಣ ಜನರ ಉಪಯೋಗಕ್ಕೆ ಸಮುದಾಯ ಭವನಗಳನ್ನು ನಿರ್ಮಾಣ ಮಾಡುತ್ತದೆ, ಆದರೆ ಆ ಭವನಗಳ ಕಾಮಗಾರಿ ತುಂಬಾ ಕಳಪೆ ಮಟ್ಟದಲ್ಲಿದ್ದು ಕೆಲವೇ ತಿಂಗಳುಗಳಲ್ಲಿ ಉಪಯೋಗಕ್ಕೆ ಬಾರದೆ ಪಾಳು ಬೀಳುತ್ತಿವೆ, ಇದರಿಂದ ಒಳ್ಳೆಯ ಕೆಲಸಗಳಿಗೆ ಉಪಯೋಗವಾಗುವಂತಹ ಸಮುದಾಯ ಭವನಗಳು ಪೋಲಿ ಹುಡುಗರ ತಾಣಗಳಾಗಿ ಬದಲಾಗಿವೆ. ಇದರಿಂದ ಸಾರ್ವಜನಿಕರಿಗೆ ಯಾವುದೇ ರೀತಿ ಉಪಯೋಗವಿಲ್ಲ, ಬದಲಾಗಿ ಕಂಟ್ರಾಕ್ಟರ್ ಮತ್ತು ರಾಜಕೀಯ ವ್ಯಕ್ತಿಗೆ ಲಾಭ ಆಗಿರಬಹುದೇ ಹೊರತು ಸಾರ್ವಜನಿಕರಿಗೆ ಇದರ ಲಾಭ ಶೂನ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದು ಬೇಲೂರು ತಾಲೂಕಿನ ಗೋವಿನ ಹಳ್ಳಿ ಗ್ರಾಮದ ಕಥೆ ಮಾತ್ರವಲ್ಲ, ಇಡೀ ರಾಜ್ಯದಲ್ಲಿನ ಸಮುದಾಯ ಭವಗಳ ಕಥೆ ಕೂಡ ಇದೆ ಆಗಿದೆ, ಇದರ ಬಗ್ಗೆ ಒಂದು ಅಭಿಯಾನ ನಡೆಯಬೇಕಿದೆ, ಈ ಮೂಲಕ ಸರ್ಕಾರ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಎಚ್ಚರವಹಿಸಬಹುದು. ಇದರಿಂದ ಸಾರ್ವಜನಿಕರ ಹಣ ಪೋಲಾಗುವುದನ್ನು ತಡೆಗಟ್ಟಬಹುದು ಎಂದು ಇಂದ್ರೇಶ ಹೇಳಿದ್ದಾರೆ.
ವರದಿ: ನಾಗಾರ್ಜುನ ಎಂ.ವಿ