Thursday, August 15, 2024

ಸತ್ಯ | ನ್ಯಾಯ |ಧರ್ಮ

ಉತ್ತರಾಖಂಡ: ದೇವಸ್ಥಾನಕ್ಕೆ ಡೋಲು ಬಾರಿಸಲು ಬರಲಿಲ್ಲ ಎಂದು ಗ್ರಾಮದ ದಲಿತ ಕುಟುಂಬಗಳಿಗೆಲ್ಲ ಬಹಿಷ್ಕಾರ ಹೇರಿಕೆ

ಗೋಪೇಶ್ವರ್:‌ ದಲಿತ ಸಮುದಾಯದ ವ್ಯಕ್ತಿ ಅನಾರೋಗ್ಯದ ಕಾರಣದಿಂದ ದೇವಸ್ಥಾನವೊಂದಕ್ಕೆ ಡೋಲು ಬಾರಿಸಲು ಆಗಮಿಸಲಿಲ್ಲ ಎಂಬ ಒಂದೇ ಕಾರಣಕ್ಕೆ ಇಡೀ ಗ್ರಾಮದ ದಲಿತ ಕುಟುಂಬಗಳಿಗೆ ಸ್ಥಳೀಯ ಪಂಚಾಯತ್‌ ಬಹಿಷ್ಕಾರ ಹೇರಿದ ಘಟನೆ ಉತ್ತರಾಖಂಡದ ಚಮೋಲಿ ಜಿಲ್ಲೆಯ ಸುಭೈ ಎಂಬ ಗ್ರಾಮದಲ್ಲಿ ನಡೆದಿದೆ.

ಭಾರತ-ಚೀನಾ ಗಡಿ ಸಮೀಪದ ನೀತಿ ಕಣಿವೆಯಲ್ಲಿರುವ ಈ ಗ್ರಾಮದಲ್ಲಿ ಸುಮಾರು ಒಂದು ಡಜನ್‌ ದಲಿತ ಕುಟುಂಬಗಳಿವೆ. ಗ್ರಾಮದ ದೇವಸ್ಥಾನ, ಧಾರ್ಮಿಕ ಮತ್ತು ಸಾಂಸ್ಕೃತಿ ಸಮಾರಂಭಗಳಲ್ಲಿ ತಲೆತಲಾಂತರದಿಂದ ದಲಿತರಿಂದ ಡೋಲು ಬಾರಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ.

ಆದರೆ ಅನಾರೋಗ್ಯದ ಕಾರಣದಿಂದ ಪುಷ್ಕರ್‌ ಲಾಲ್‌ ಎಂಬಾತ ಧಾರ್ಮಿಕ ಕಾರ್ಯಕ್ರಮವೊಂದಕ್ಕೆ ಡೋಲು ಬಾರಿಸಲು ಆಗಮಿಸದೇ ಇದ್ದಾಗ ಸ್ಥಳೀಯ ಪಂಚಾಯತ್‌ ಇಡೀ ದಲಿತ ಸಮುದಾಯಕ್ಕೆ ಬಹಿಷ್ಕಾರ ಹಾಕಲಾಗಿದೆ. ಪಂಚಾಯತ್‌ ಸದಸ್ಯನೊಬ್ಬ ಬಹಿಷ್ಕಾರ ಘೋಷಿಸುವ ವೀಡಿಯೋವೊಂದೂ ಹರಿದಾಡುತ್ತಿದೆ ಹಾಗೂ ಆದೇಶ ಪಾಲಿಸಲು ವಿಫಲವಾದರೆ ಇಂತಹುದೇ ಪರಿಣಾಮ ಎದುರಿಸಬೇಕಿದೆ ಎಂದು ಆತ ಎಚ್ಚರಿಸುವುದೂ ಕೇಳಿಸುತ್ತದೆ.ಈ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ.

ಈ ಬಹಿಷ್ಕಾರದ ಭಾಗವಾಗಿ ದಲಿತ ಕುಟುಂಬಗಳು ಅರಣ್ಯ, ಜಲ ಸಂಪನ್ಮೂಲಗಳನ್ನು ಬಳಸುವಂತಿಲ್ಲ, ಅಂಗಡಿಗಳಿಂದ ಆಗತ್ಯ ವಸ್ತುಗಳನ್ನು ಖರೀದಿಸುವಂತಿಲ್ಲ, ವಾಹನಗಳಲ್ಲಿ ಸಾಗುವಂತಿಲ್ಲ ಹಾಗೂ ದೇವಸ್ಥಾನಗಳಿಗೆ ಭೇಟಿ ನೀಡುವಂತಿಲ್ಲ ಎಂದು ತಿಳಿದು ಬಂದಿದೆ. ಬಹಿಷ್ಕಾರ ಕಾರಣಕ್ಕೆ ಊರಿನ ದಲಿತ ಕುಟುಂಬಗಳಲ್ಲಿಯೇ ಜಗಳ ಸಂಪ್ರದಾಯದ ಪರ ಮತ್ತು ವಿರುದ್ಧ ಆರೋಪಗಳು ಕೇಳಿ ಬರುತ್ತಿವೆ ಎಂದು ವರದಿಯಾಗಿದೆ.

.

Related Articles

ಇತ್ತೀಚಿನ ಸುದ್ದಿಗಳು

You cannot copy content of this page