Wednesday, June 25, 2025

ಸತ್ಯ | ನ್ಯಾಯ |ಧರ್ಮ

ವಿಜಯಪುರ: ಹಂದಿಗಳ ಪ್ರವಾಸ ತಾಣವಾಗಿರುವ ಜಿಲ್ಲಾಸ್ಪತ್ರೆ ಆವರಣ!!

ವಿಜಯಪುರ, ಅ 21: ಇಲ್ಲಿನ ಜಿಲ್ಲಾಸ್ಪತ್ರೆಯ ಆವರಣವು ಅಕ್ಷರಶಃ ಹಂದಿಗಳ ಮೋಜುದಾಣವಾಗಿ ಮಾರ್ಪಟ್ಟಿದ್ದು, ಈ ಆವರಣದೊಳಗೆ ಹಂದಿಗಳು ಕೆಸರಿನಲ್ಲಿ ಬಿದ್ದು ಒದ್ದಾಡುತ್ತಿರುವುದು ಸರಕಾರಿ ಆಸ್ಪತ್ರೆಗಳ ನಿರ್ವಹಣಾ ವ್ಯವಸ್ಥೆಗೆ ಹಿಡಿದ ಕನ್ನಡಿಯಂತಿದೆ.

ಆಸ್ಪತ್ರೆಯ ಆವರಣದಲ್ಲಿ ವಿಹಾರದ ಮೋಜು ಅನುಭವಿಸುತ್ತಿರುವ ಹಂದಿಗಳು

ಈ ಜಿಲ್ಲಾಸ್ಪತ್ರೆಗೆ ಇತ್ತೀಚಿನ ದಿನಗಳಲ್ಲಿ ಜನರಿಗಿಂತಲೂ ಹೆಚ್ಚು ಹಂದಿಗಳೇ ಭೇಟಿ ನೀಡುತ್ತಿರುವುದರಿಂದಲೋ ಏನೋ, ಈ ಆ ಸ್ಪತ್ರೆಯ ಆವರಣದಲ್ಲಿ ಮಳೆ ಬಂದರೆ ಹಂದಿಗಳಿಗೆ ಈಜುಕೊಳವೇ ನಿರ್ಮಾಣವಾಗಿಬಿಡುತ್ತದೆ.

ವಿಜಯ ಜಿಲ್ಲಾಸ್ಪತ್ರೆಯ ನೋಟ

ಅಲ್ಲಿನ ಸ್ಥಳೀಯರ ಮಾಹಿತಿ ಪ್ರಕಾರ, ಈ ಆಸ್ಪತ್ರೆಯ ಬಳಿ ಹಂದಿಗಳ ಉಪಟಳ ನಿನ್ನೆ ಮೊನ್ನೆಯದಲ್ಲ. ಈ ಸಂಬಂಧ ಆಸ್ಪತ್ರೆಯ ಡೀನ್‌ ಆಗಲೀ, ಆರೋಗ್ಯ ಇಲಾಖೆಯಾಗಲೀ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆಸ್ಪತ್ರೆಯ ಶುಚಿತ್ವ ಮತ್ತು ರೋಗಿಗಳ ಆರೋಗ್ಯದ ದೃಷ್ಟಿಯಿಂದ ಆಸ್ಪತ್ರೆಯ ಆವರಣವನ್ನು ಗುಂಡಿಮುಕ್ತ ಮಾಡಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page