ಕರ್ನಾಟಕದ ಸಂಸ್ಥೆ, ಕರ್ನಾಟಕದ್ದೇ ‘ಸಾಧಕರು’, ಕರ್ನಾಟಕದ್ದೇ ಪ್ರಶಸ್ತಿ ಇದನ್ನು ಪಡೆಯೋಕೆ ಜಪಾನ್ ನ ಟೋಕಿಯೋ ಪಟ್ಟಣಕ್ಕೆ ಹೋಗ್ಬೇಕು. ತಮಾಷೆ ಅಂದುಕೊಂಡರೆ ಅದು ನಿಜನೇ. ಹೌದು. ಈ ಕಥೆ ಬೇರೆ ಯಾರದ್ದೋ ಅಲ್ಲ.. ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ತಮ್ಮ ಪತ್ರಿಕೆಯ ಹೆಸರಲ್ಲಿ “ಗ್ಲೊಬಲ್ ಅಚೀವರ್ಸ್” ಎಂಬ ಹೆಸರಿನಲ್ಲಿ ಪ್ರಶಸ್ತಿ ವಿತರಿಸೋಕೆ ಜಪಾನ್ ನ ಟೋಕಿಯೋಗೆ ಹೋಗಿದ್ದಾರೆ.
ಇನ್ನೊಂದು ತಮಾಷೆ ಅಂದ್ರೆ ಗೊತ್ತು ಗುರಿ ಇಲ್ಲದ ಟೋಕಿಯೋಗೆ ಹೋದ ವಿಶ್ವೇಶ್ವರ ಭಟ್ಟರು ತಮ್ಮ ಫೇಸ್ಬುಕ್ ಖಾತೆಯ ಮೂಲಕ “ಟೋಕಿಯೋ ನಗರದಲ್ಲಿ ಕನ್ನಡಿಗರು ಯಾರಾದರೂ ಇದ್ಥಾರಾ, ದಯವಿಟ್ಟು ಸಂಪರ್ಕಿಸಿ..” ಅಂತ ಪೋಸ್ಟ್ ಹಾಕಿ ಹುಡುಕುತ್ತಿದ್ದಾರೆ. ಅದ್ಯಾರು ಸಿಕ್ಕಿದ್ರೋ ಇಲ್ಲವೋ ಗೊತ್ತಿಲ್ಲ. ಆದರೆ ಇಲ್ಲಿ ಎದ್ದಿರೋ ಪ್ರಶ್ನೆ ಎಂದರೆ ಎಲ್ಲರೂ ಕರ್ನಾಟಕದವರೇ ಆಗಿರುವಾಗ ಟೋಕಿಯೋಗೆ ಹೋಗೋ ಅಗತ್ಯ, ಅನಿವಾರ್ಯತೆ, ಅವಶ್ಯಕತೆಯಾದರೂ ಏನು ಎಂಬುದು.

ಈ ಬಗ್ಗೆ ಪ್ರಶ್ನೆ ಎತ್ತಿರುವ ಶಿವಮೊಗ್ಗ ಜಿಲ್ಲೆಯ ಚಿಂತಕರಾದ ಅರುಣ್ ಪ್ರಸಾದ್ “ಪ್ರಶಸ್ತಿ ಕೊಡುವ ವಿಶ್ವೇಶ್ವರ ಭಟ್ಟರು ಮತ್ತು ಪ್ರಶಸ್ತಿ ಸ್ವೀಕರಿಸುವ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿ ದೊಡ್ಡ ತಂಡ ಒಂದೇ ವಿಮಾನದಲ್ಲಿ ಬೆಂಗಳೂರಿಂದ ಟೋಕಿಯೋಗೆ ಹಾರಿದೆ” ಎಂದು ವ್ಯಂಗ್ಯವಾಡಿದ್ದಾರೆ.
“ಅಷ್ಟೆಲ್ಲ ಕಷ್ಟ ಪಟ್ಟು ಪ್ರಶಸ್ತಿ ಕೊಡೋದು, ಅದನ್ನು ಕಷ್ಟ ಪಟ್ಟು ಪಡೆಯೋರಿಗೆ ನನ್ನ ಕಿವಿ ಮಾತು ನಮ್ಮ ತೀರ್ಥಹಳ್ಳಿಯ ವಿಶ್ವ ಮಾನವ ಕವಿ ಕುವೆಂಪು ಅವರ ಕವಿಶೈಲ ಸಾಕಾಗುತ್ತಿರಲಿಲ್ಲವೇ?” ಎಂದು ಪ್ರಶ್ನೆ ಎತ್ತಿದ್ದಾರೆ.
ಇದು ಅಪಹಾಸ್ಯ ಅನ್ನಿಸದೆ?
ಪ್ರಶಸ್ತಿಗಳು ಮಾರಾಟದ ಸರಕು ಆಗಿದೆ ಅದನ್ನು ಮಾರುವ ವ್ಯಾಪಾರಿ ಅದಕ್ಕೊಂದು ಹೊಸ ಹೆಸರು, ಹೊಸ ರೂಪ ಕೊಟ್ಟು ಆಕರ್ಷವಾದ ಪ್ಯಾಕೇಜ್ ಮಾಡಿ ಮಾರಾಟ ಮಾಡುತ್ತಾನೆ ಅದನ್ನು ಖರೀದಿಸುವ ಮಿಕಗಳಿಗೆ ಹುಡುಕುತ್ತಾನೆ. ಹಣ ಇಲ್ಲದ, ಅಧಿಕಾರ ಇಲ್ಲದ ಸಾದಕರು ಇವರಿಗೆ ಬೇಕಾಗಿಲ್ಲ ಯಾಕೆಂದರೆ ವಿದೇಶಕ್ಕೆ ಹೋಗಿ ಅಲ್ಲಿ ಇವರು ಪ್ರಶಸ್ತಿ ನೀಡುವುದನ್ನ ಸ್ವೀಕರಿಸುವ ಪ್ಯಾಕೇಜ್ ಪ್ರಶಸ್ತಿ ಇದು ಅದಕ್ಕೆ ನಿಮ್ಮ ಪಾಕೇಟ್ ದೊಡ್ಡದಿರಬೇಕು.. ಎಂದು ಅರುಣ್ ಪ್ರಸಾದ್ ಹೇಳಿದ್ದಾರೆ.
ನಿಜ ಸಾಧನೆ ಮಾಡಿದ ಕನ್ನಡಿಗ ಸಾದಕ ಬಡ ಬೋರೆ ಗೌಡನಾದರೆ ಲಾಭವಿಲ್ಲ. ವಿಶ್ವವಾಣಿ ಕನ್ನಡ ದಿನಪತ್ರಿಕೆ ಸಂಸ್ಥೆವತಿಯಿಂದ ಸಂಪಾದಕರಾದ ವಿಶ್ವೇಶ್ವರ ಭಟ್ “ಗ್ಲೋಬಲ್ ಅಚೀವರ್ಸ್ ಎಂಬ ಪ್ರಶಸ್ತಿಗೆ ಕೆಲವರು ಅರ್ಹರನ್ನ ಆಯ್ದುಕೊಂಡಿದಾರೆ. ಈ ಪ್ರಶಸ್ತಿ ಕೊಡೋರು ಮತ್ತು ಪಡೆದುಕೊಂಡವರು ಒಟ್ಟಾಗಿ ವಿಮಾನದಲ್ಲಿ ಜಪಾನ್ ಗೆ ಹೋಗಿದ್ದಾರೆ. ನಾಳೆ ಟೋಕಿಯೋದಲ್ಲಿ ಖಾಸಗಿ ಹೋಟೆಲ್ ನಲ್ಲಿ ಇವೆಂಟ್ ನಿಗದಿ ಆಗಿದೆ. ಸ್ವೀಕರಿಸುವ ತಂಡದಲ್ಲಿ ಮಾಜಿ ಗೃಹ ಸಚಿವ ನಮ್ಮ ಜಿಲ್ಲೆಯ ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರ ಕೂಡ ಇದ್ದಾರೆ ಎಂದು ಅರುಣ್ ಪ್ರಸಾದ್ ವ್ಯಂಗ್ಯವಾಡಿದ್ದಾರೆ.