“ವೋಟ್ ಚೋರಿ” ಆರೋಪದ ಹಿನ್ನೆಲೆಯಲ್ಲಿ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಯುತ್ತಿರುವ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಶಕ್ತಿಶಾಲಿ ಆಂದೋಲನಕ್ಕೆ ತಯಾರಾಗುತ್ತಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ 18ರಂದು ಬೆಳಿಗ್ಗೆ 10.30ಕ್ಕೆ ದೆಹಲಿಯ ಇಂದಿರಾ ಭವನದಲ್ಲಿ ಪಕ್ಷದ ನಾಯಕತ್ವದ ಸಭೆ ನಡೆಯಲಿದೆ.
ಈ ಸಭೆಗೆ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಘಟಕಗಳ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರು, ಉಸ್ತುವಾರಿಗಳು ಮತ್ತು ಎಐಸಿಸಿ ಕಾರ್ಯದರ್ಶಿಗಳನ್ನು ಕರೆಯಲಾಗಿದೆ.ಸಭೆಯಲ್ಲಿ ನಡೆಯುತ್ತಿರುವ SIR ಪ್ರಕ್ರಿಯೆಯ ಪ್ರಗತಿಯಿಂದ ಹಿಡಿದು, ರಾಜ್ಯಗಳ ಮಟ್ಟದಲ್ಲಿ ಪಕ್ಷದ ಸಕ್ರಿಯತಾ ವರದಿ ಪರಿಶೀಲನೆ ನಡೆಯಲಿದೆ.
ಚುನಾವಣಾ ಆಯೋಗದ ಪ್ರಕಾರ, ನವೆಂಬರ್ 4ರಿಂದ ಆರಂಭವಾದ ಗಣತಿ ನಮೂನೆಗಳ ವಿತರಣೆಯು ಈಗಾಗಲೇ 97.52% ಪೂರ್ಣಗೊಂಡಿದೆ. ಬಿಹಾರದ ಬಳಿಕ ಅಂಡಮಾನ್ ಮತ್ತು ನಿಕೋಬಾರ್, ಛತ್ತೀಸ್ಗಢ, ಗೋವಾ, ಗುಜರಾತ್, ಕೇರಳ, ಲಕ್ಷದ್ವೀಪ, ಮಧ್ಯಪ್ರದೇಶ, ಪುದುಚೇರಿ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳಗಳಲ್ಲಿ SIRದ ಎರಡನೇ ಹಂತ ಪ್ರಾರಂಭವಾಗಿದೆ. ಮುಂದಿನ ವರ್ಷ ಚುನಾವಣೆ ನಡೆಯಲಿರುವ ಕೇರಳ, ತಮಿಳುನಾಡು, ಪುದುಚೇರಿ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಈ ಪ್ರಕ್ರಿಯೆಗೆ ವಿಶೇಷ ಗಮನ ನೀಡಲಾಗಿದೆ.
ಬಿಹಾರದಲ್ಲಿ ಸೋಲಿನ ಹಿನ್ನೆಲೆ, ಕಾಂಗ್ರೆಸ್ ಮತ್ತು CPI(ML) ಪಕ್ಷಗಳು ಮತದಾರರ ಪಟ್ಟಿಯ ದೋಷಗಳನ್ನು ಕಾರಣವೆಂದು ಆರೋಪಿಸಿವೆ. ವಿರೋಧ ಪಕ್ಷಗಳು ಪ್ರಕ್ರಿಯೆಯ ಮೇಲಿನ ಆಕ್ಷೇಪ ಹೊರಹಾಕಿದರೂ, ತಮ್ಮ ಹಿತಾಸಕ್ತಿಗಾಗಿ ತಳಮಟ್ಟದಲ್ಲಿ ಕಾಂಗ್ರೆಸ್ ಗೆ ಸಹಕಾರ ನೀಡುತ್ತಿವೆ.
ಸಭೆಯಲ್ಲಿ ನಾಯಕರಿಗೆ ತಮ್ಮ ರಾಜ್ಯಗಳಲ್ಲಿ ಎಸ್ಐಆರ್ ವಿರುದ್ಧ ಪ್ರಚಾರ ಮತ್ತು ಚಟುವಟಿಕೆ ಹೇಗೆ ವಿಸ್ತರಿಸಬೇಕು ಎಂಬ ಕುರಿತು ಮಾರ್ಗದರ್ಶನ ನೀಡಲಾಗುವ ಸಾಧ್ಯತೆ ಇದೆ.
