Home ಬೆಂಗಳೂರು ಧರ್ಮಸ್ಥಳ ಪ್ರಕರಣ: ‘ಸ್ವಲ್ಪ ದಿನ ಕಾಯಿರಿ, ಷಡ್ಯಂತ್ರ ಬಯಲಾಗಲಿದೆ’ – ಡಿಸಿಎಂ ಡಿ.ಕೆ.ಶಿವಕುಮಾರ್

ಧರ್ಮಸ್ಥಳ ಪ್ರಕರಣ: ‘ಸ್ವಲ್ಪ ದಿನ ಕಾಯಿರಿ, ಷಡ್ಯಂತ್ರ ಬಯಲಾಗಲಿದೆ’ – ಡಿಸಿಎಂ ಡಿ.ಕೆ.ಶಿವಕುಮಾರ್

0

ಬೆಂಗಳೂರು: ಧರ್ಮಸ್ಥಳ ಪ್ರಕರಣದ ಬಗ್ಗೆ ಸರ್ಕಾರದ ನಿಲುವು ಸ್ಪಷ್ಟವಾಗಿದೆ. ಈಚೆಗೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿಯೂ ಈ ಕುರಿತು ಖಚಿತ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ವಿಧಾನಸಭೆಯಲ್ಲಿ ತಮ್ಮ ವಿರುದ್ಧ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾಡಿದ ಆರೋಪಗಳಿಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, “ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾದಾಗ, ಈ ಪ್ರಕರಣಕ್ಕೆ ಸಂಬಂಧಿಸಿ ಯಾರಾದರೂ ಸುಳ್ಳು ಹೇಳಿದ್ದರೆ, ಅವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಹೇಳಿದ್ದಾರೆ. ಪ್ರತಿ ವರ್ಷವೂ ಅವರು ಧರ್ಮಸ್ಥಳದಲ್ಲಿ ಉಳಿದು ನೈಸರ್ಗಿಕ ಚಿಕಿತ್ಸೆ ಪಡೆಯುತ್ತಾರೆ. ಆದರೆ ಈ ಇತ್ತೀಚಿನ ಘಟನೆಗಳ ನಂತರ ಅವರು ಹೋಗಿಲ್ಲ” ಎಂದರು.

“ಸ್ವಲ್ಪ ದಿನ ಕಾಯಿರಿ. ಈ ಪ್ರಕರಣದ ವಿಚಾರದಲ್ಲಿ ತಪ್ಪಿತಸ್ಥರ ಹೆಸರು ಮತ್ತು ಫೋಟೋ ಎಲ್ಲವೂ ಶೀಘ್ರದಲ್ಲಿಯೇ ಬಹಿರಂಗಗೊಳ್ಳಲಿದೆ. ತಪ್ಪಿತಸ್ಥರಿಗೆ ಯಾವುದೇ ರಾಜಿಯಿಲ್ಲದೆ ನಿರ್ದಾಕ್ಷಿಣ್ಯವಾಗಿ ಶಿಕ್ಷೆ ಆಗಲಿದೆ,” ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

You cannot copy content of this page

Exit mobile version