ಕೋಲಾರ: ಮುಳಬಾಗಿಲು ತಾಲ್ಲೂಕು, ತಾಯಲೂರು ಹೋಬಳಿ, ಗುಮ್ಮಕಲ್ಲು ಪಂಚಾಯಿತಿ, ಸೂರಕುಂಟೆ ಗ್ರಾಮದಲ್ಲಿ ಸುಮಾರು 100-200 ಮನೆಗಳಿದ್ದು 900-1000ಜನಸಂಖ್ಯೆಯುಳ್ಳ ಈ ಗ್ರಾಮಕ್ಕಿಲ್ಲ ನೆಟವರ್ಕ್ ಭಾಗ್ಯ.
ಟೆಕ್ನಾಲಜಿ ತುಂಬ ಮುಂದೆವರೆದಿದ್ದು ಪ್ರತಿ ಕೆಲಸ ಕಾರ್ಯಕ್ಕೂ ಇಂಟರ್ನೇಟ್ ಮುಖ್ಯವಾಗಿದೆ ವಿಶೇಷವಾಗಿ ಶೈಕ್ಷಣಿಕವಾಗಿ ಶಾಲಾ-ಕಾಲೇಜುಗಳಲ್ಲಿ ನೀಡುವ ಚಟುವಟಿಕೆಗಳಿಗೆ ಇಂಟರ್ನೇಟ್ ಕನೆಕ್ಟಿವಿಟಿ ತುಂಬ ಅವಸರವಿದೆ ಇಂತಹ ಸಂದರ್ಭದಲ್ಲಿ ಈ ಸೂರಕುಂಟೆ ಗ್ರಾಮಕ್ಕೆ ನೆಟವರ್ಕ್ ಭಾಗ್ಯವಿಲ್ಲದಂತಾಗಿದೆ.
ಆರೋಗ್ಯ ಸಮಸ್ಯೆಯೋ ಇಲ್ಲ ಏನಾದರೂ ತೊಂದರೆಯಾದಲ್ಲಿ 108ಗೋ ಅಥವಾ ಪೋಲೀಸ್ ಇಲಾಖೆಯನ್ನು ಸಂಪರ್ಕಿಸಲು ಸಹ ನರಕಯಾತನೆ ಅನುಭವಿಸುತ್ತಿದ್ದಾರೆ ಈ ಗ್ರಾಮದ ಸಾರ್ವಜನಿಕರು.
ಸುಮಾರು ಬಾರಿ Service Providersಗೆ ಮನವಿ ಮಾಡಿದರು ಯಾವುದೇ ರೀತಿ ಅನುಕೂಲವಾಗಲಿಲ್ಲ ಈ ಗ್ರಾಮದ ಶಾಲೆಗೆ ಹಾಗೂ ಇತರೆ ಸರ್ಕಾರಿ ಕೆಲಸಗಳಿಗಾಗಿ ಅಧಿಕಾರಿಗಳು ಬರಲು ಸಹಾ ಹಿಂಜರಿಯುವಂತ ಸ್ಥಿತಿಯಲ್ಲಿದೆ ಈ ಗ್ರಾಮ.
ತಾಲ್ಲೂಕಿನಲ್ಲಿ ಅತಿಹೆಚ್ಚು ಟಮೋಟ ಬೆಳೆಯುವ ಗ್ರಾಮಗಳ ಪಟ್ಟಿಯಲ್ಲಿ ಈ ಗ್ರಾಮವಿದ್ದು ಕೃಷಿ ಮತ್ತು ಹೈನುಗಾರಿಕೆಯನ್ನು ನಂಬಿದರು ರೈತರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕೆಂಬ ಆಶಯದೊಂದಿಗಿರುತ್ತಾರೆ.
ಸಂಭಂದಿಸಿದ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಈ ಗ್ರಾಮಕ್ಕೆ ನೆಟವರ್ಕ್ ಟೌವರ್ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲವಾಗಿಸಲು ಗ್ರಾಮಸ್ಥರು ನೋವನ್ನು ತೋಡಿಕೊಂಡಿರುತ್ತಾರೆ.
ನಮ್ಮ ಸಮಸ್ಯೆ 20ದಿನಗಳಲ್ಲಿ ಪರಿಷ್ಕಾರವಾಗದಿದ್ದಲ್ಲಿ ನಮ್ಮ ಸೂರಕುಂಟೆ ಗ್ರಾಮದಿಂದ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿಗಳ ಕಛೇರಿಗೆ ಹೋಗಿ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿಯನ್ನು ಜಿಲ್ಲಾಧಿಕಾರಿಗಳ ಕಛೇರಿಯ ಮುಂಬಾಗದಲ್ಲಿ ನಡೆಸುವುದಾಗಿ KSRTC ನಿವೃತ್ತ ಮೇಲ್ವಿಚಾರಕರು ಸುಬ್ರಮಣಿ, ರಾಮಚಂದ್ರ, ಮಂಜುನಾಥ್, ಚೇತನ್ ಹಾಗೂ ಗ್ರಾಮಸ್ಥರು, ಯುವಕರು ತಿಳಿಸಿರುತ್ತಾರೆ.