Wednesday, May 1, 2024

ಸತ್ಯ | ನ್ಯಾಯ |ಧರ್ಮ

ಕೊಪ್ಪಳ: ಮಹಿಳೆಯೊಂದಿಗೆ ಅಸಭ್ಯ ವರ್ತನೆ, ಸಮಾ ಪೆಟ್ಟು ತಿಂದ ಮೈಕ್ರೋ ಫೈನಾನ್ಸ್‌ ಸಿಬ್ಬಂದಿ

ಕೊಪ್ಪಳ: ಜಿಲ್ಲೆಯ ಹಳೇಬಂಡಿಹರ್ಲಾಪುರ ಗ್ರಾಮದಲ್ಲಿ ವಿವಾಹಿತ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಮೈಕ್ರೋ ಫೈನಾನ್ಸ್ ಕಂಪನಿಯ ಸಿಬ್ಬಂದಿಗೆ ಥಳಿಸಿದ ಘಟನೆ ಶನಿವಾರ ನಡೆದಿದೆ.

ಆರೋಪಿಯನ್ನು ಯಮನೂರಪ್ಪ ಎಂದು ಗುರುತಿಸಲಾಗಿದ್ದು, ಗೋದಾವರಿ ಮೈಕ್ರೋ ಫೈನಾನ್ಸ್ ಕಂಪನಿಯ ಸಿಬ್ಬಂದಿ. ಆರೋಪಿ ನಾಗಮ್ಮನ ಮೇಲೆ ಕಣ್ಣಿಟ್ಟು ಆಕೆಗೆ ಆಮಿಷವೊಡ್ಡಲು ಯೋಜನೆ ರೂಪಿಸಿದ್ದ ಎನ್ನಲಾಗಿದೆ.

ನಾಗಮ್ಮ ಅವರಿಗೆ ಸಂಸ್ಥೆಯ ಪ್ರಕ್ರಿಯೆಯ ಪ್ರಕಾರ ಸಾಲ ಮಂಜೂರಾದಾಗ ಅದನ್ನು ತಡೆಹಿಡಿದು, ಯಮನೂರಪ್ಪ ಆಕೆಗೆ ತನ್ನೊಡನೆ ಒಂದು ದಿನ ಕಳೆದರೆ ಲೋನ್‌ ಕೊಡಿಸುವುದಾಗಿ ಹೇಳಿದ್ದಾನೆಂದು ಸಂತ್ರಸ್ಥೆ ಹೇಳಿದ್ದಾರೆ.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಆಕೆಯ ತಾಯಿ ನಾಗಮ್ಮ ಊರಿಗೆ ಬಂದಿದ್ದ ಯಮನೂರಪ್ಪನಿಗೆ ಮೆಟ್ಟಿನಲ್ಲಿ ಹೊಡೆದಿದ್ದಾಳೆ.

ಘಟನೆಯಿಂದ ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಸ್ಥಳೀಯ ಪೊಲೀಸರು ಇದುವರೆಗೆ ಪ್ರಕರಣ ದಾಖಲಿಸಿಕೊಂಡಿಲ್ಲ.

ಈಗ ಮೈಕ್ರೋ ಫೈನಾನ್ಸ್ ಕಂಪನಿಯ ಸಿಬ್ಬಂದಿಯ ಮೇಲೆ ನಾಗಮ್ಮ ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Related Articles

ಇತ್ತೀಚಿನ ಸುದ್ದಿಗಳು