Thursday, June 19, 2025

ಸತ್ಯ | ನ್ಯಾಯ |ಧರ್ಮ

ಗಂಡಸುತನದ ಕೊಚ್ಚೆಯಲ್ಲಿ ಬಿದ್ದು ಆನಂದಿಸುತ್ತಿರುವ ಯಶ್‌ ಪಾಲ್‌ ಸುವರ್ಣ

ಗಂಡಸುತನದ ಕೊಚ್ಚೆಯಲ್ಲಿ ಹೊರಳಾಡುತ್ತ ಆನಂದಿಸುತ್ತಿರುವ ಯಶ್‌ ಪಾಲ್‌ ಅವರ ಬಗ್ಗೆ ಕನಿಕರ ಹುಟ್ಟುವುದಿಲ್ಲ. ಹೇಸಿಗೆ ಎನಿಸುತ್ತದೆ. ಲಿಂಗ ಬದಲಾವಣೆ ಪ್ರಕ್ರಿಯೆ ಏನೆಂದು ಪರಮೇಶ್ವರಅವರ ಮಗಳಿಗು ತಿಳಿದಿದೆ, ನಮಗು ತಿಳಿದಿದೆ. ಯಶ್ ಪಾಲ್ ಅವರ ಎಡಬಿಡಂಗಿತನ ನಮಗೇನನ್ನೂ ಹೇಳಿಕೊಡುವ ಅವಶ್ಯಕತೆ ಇಲ್ಲ. ನಮಗೆ ನಮ್ಮ ಜೆಂಡರ್ ಕುರಿತು ಅಭಿಮಾನವೆ ಇದೆ – ರೂಮಿ ಹರೀಶ್‌, ಕ್ವಿಯರ್ ಟ್ರಾನ್ಸ್ ಮ್ಯಾನ್

ಬಿಜೆಪಿ ಪಕ್ಶದವರಿಗೆ ಯಾವಾಗಲೂ ಎರಡು ನಿಲುವುಗಳನ್ನು ಪಾಲಿಸುವುದು ಬಹಳ ಸುಲಬ. ಅಂಚಿಗೆ ತಳ್ಳಲ್ಪಟ್ಟ ಸಮುದಾಯವನ್ನು ದೊಡ್ಡದಾಗಿ ಉದ್ದರಿಸುವ ಕೆಲಸ ಮಾತುಗಳಲ್ಲಿ ಮಾತ್ರ ತೋರಿಸಿಕೊಳ್ಳುತ್ತಲೇ, ಅದೇ ಸಮುದಾಯಗಳನ್ನು ಬಳಸಿ ತಮ್ಮ ವಿರೋದಿಗಳನ್ನು ಟೀಕಿಸುವ ಕಳಪೆ ಗೀಳಿಗೆ ಬೀಳುತ್ತಾರೆ. ಅದೂ “ಗಂಡಸುತನವಿದೆಯೆ” ಎಂದು ನೇರವಾಗಿ ಪರೋಕ್ಶವಾಗಿ ವಿಕ್ರುತ ವಾಕ್ಯಗಳಲ್ಲಿ ಯಾವ ಸಾಕ್ಶಿ ಪ್ರಜ್ನೆಯೇ ಇಲ್ಲದೇ, ಅರ್ತವೇ ಇಲ್ಲದೆ ಯಾವ ವಿಶಯಕ್ಕೆ ಏನು ಉತ್ತರ ಕೊಡುತ್ತಿದ್ದೇವೆ ಎಂಬ ಅರಿವೇ ಇಲ್ಲದೇ ಬಾಯಿಗೆ ಬಂದದ್ದನ್ನು ಕಕ್ಕುತ್ತಾರೆ. 

ಉಡುಪಿಯ ಶಾಸಕ ಯಶ್​ ಪಾಲ್​​ ಸುವರ್ಣ ಅವರು ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ಯುವತಿಯರ ವಿಡಿಯೋ ರೆಕಾರ್ಡ್ ಮಾಡಿದ್ದನ್ನು ಖಂಡಿಸುತ್ತಾ ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲೇಬೇಕು. ಗೃಹ ಸಚಿವರ ಮಗ ಲಿಂಗ ಪರಿವರ್ತನೆ ಮಾಡಿಕೊಂಡಿದ್ದು ತಮಾಷೆ ಆಗಿರಬಹುದು. ಆದರೆ, ವಿಡಿಯೋ ರೆಕಾರ್ಡ್​ ಮಾಡಿದ್ದು ತಮಾಷೆ ವಿಚಾರವಲ್ಲ ಎಂದಿದ್ದರು.ಪರಮೇಶ್ವರ್ ಮಗ ಲಿಂಗ ಬದಲಾಯಿಸಿಕೊಂಡಿದ್ದು ಮಕ್ಕಳಾಟವೇ? ಇಂದು ಶೌಚಾಲಯದಲ್ಲಿ ಕ್ಯಾಮೆರಾ ಇಟ್ಟ ವಿದ್ಯಾರ್ಥಿಗಳು ನಾಳೆ ಬಾಂಬ್ ಇಡಲು ಹಿಂಜರಿಯುವುದಿಲ್ಲ ಎಂದೂ ಹೇಳಿದ್ದರು.

ಗಂಡಸುತನ ಹೆಂಗಸುತನ ಎನ್ನುವ ವಿಶಯಕ್ಕೆ ಯಾರೇ ಆಗಲೀ ಸುಲಬವಾಗಿ ಆಟ ಆಡಲು ಹೋಗುವುದಿಲ್ಲ. ನಮ್ಮ ದೇಹದ ಬಗ್ಗೆ ನಮ್ಮ ಮನಸ್ಸಿಗೆ ಸಮಾದಾನ ಇರುವುದು ಎಲ್ಲರಿಗೂ ಸಮಾನವಾಗಿ ಆಗುವ ಪ್ರಕ್ರಿಯೆ ಅಲ್ಲ. ದೇಹದ ಬಗ್ಗೆ ಯಾವುದೇ ರೀತಿಯ ಡಿಸ್ಫೋರಿಯ (ತೀವ್ರ ಅಸಮಾದಾನ) ಹೊತ್ತು ಓಡಾಡುವ ಪ್ರತಿಯೊಬ್ಬರೂ ಪಡುವ ಪಾಡು ಚಿಕ್ಕ ವಯಸ್ಸಿನಿಂದ ಶುರುವಾಗಿರುತ್ತದೆ. ಗಂಡಸುತನದ ಬಗ್ಗೆ ಸಮಾಜ ಕಟ್ಟಿರುವ ಗೋಪುರಗಳನ್ನು ಒಡೆದು, ಈಗೋಗಳನ್ನೂ ಒಡೆದು “ನಾನು ಗಂಡಸಲ್ಲ, ನಾನು ಮಹಿಳೆ, ನಾನು ಹೀಗೆ..” ಎಂದು ನಮಗೆ ನಾವೇ ತಿಳಿಯಲು ಅತವಾ ಆಚೆ ಜಗತ್ತಿಗೆ ಹೇಳಲು ಸುಲಬವಲ್ಲ, ಅದೂ “ಬೇರೆ” ಎನ್ನುವ ಯಾವುದೇ ಅಬಿವ್ಯಕ್ತಿಗಳು ಜೀವಿಸಲು ನೆಲೆ ಸಿಗಲು ಸಾದ್ಯವಿಲ್ಲದ ಈ ನಂಜಿನ ಪುರುಶಪ್ರದಾನ ಸಮಾಜದಲ್ಲಿ. ಗಂಡಸುತನವನ್ನು ವಿಜ್ರುಂಬಿಸಿ ಆ ಕ್ರುತಕದಲ್ಲಿ “ತಾಕತ್ತಿದ್ರೆ, ಗಂಡಸಾಗಿದ್ರೆ, ಎದೆಗಾರಿಕೆ ಇದ್ರೆ” ಎಂದು ಮಾಡುವ ಹೇಳಿಕೆಗಳಿಗೆ ಯಾವ ಕೊರತೆಯೂ ಇಲ್ಲ ಈ ಜನಕ್ಕೆ.

ಉಡುಪಿಯ  ಯಶ್ ಪಾಲ್ ಸುವರ್ಣ ಅವರ ಹೇಳಿಕೆ ಅತವಾ ಪ್ರತಿಕ್ರಿಯೆ ಎಂತಾ ಅವಿವೇಕದ ಹೇಳಿಕೆ ಎಂದ್ರೆ ಸಂಬಂದವೇ ಇಲ್ಲದ ಎರಡು ವಿಶಯಗಳನ್ನು ಸೇರಿಸಿ ಏನೋ ಜಗತ್ತು ಗೆದ್ದ ಅನುಬವದಲ್ಲಿದ್ದು ಅದಕ್ಕೆ ನಮ್ ಅಕ್ಕೈಯವರ ಪ್ರತಿಕ್ರಿಯೆಗಳು ಬಂದಾಗ ಅದನ್ನೂ ಏನೋ ರಾಡಿ ಮಾಡಿದ್ದಾರೆ. ಗ್ರುಹಮಂತ್ರಿ ಪರಮೇಶ್ವರ್ ಅವರು ಹೇಳಿದ್ದೇನು? ಈ ಪ್ರಕರಣ ಹೆಣ್ಣು ಮಕ್ಕಳ ನಡುವೆ ನಡೆದ ಮಕ್ಕಳಾಟ ಅಂತ. ಅದು ಹಾಗಲ್ಲ ಹೀಗೆ ಎಂದು ತಮಗನಿಸಿದ್ದನ್ನು ಹೇಳುವ ಬದಲು ಚೀಪಾಗಿ ಪರಮೇಶ್ವರ್ ಅವರಿಗೆ ಅವರ ಮಾನಕ್ಕೆ ದಕ್ಕೆ ಬರತ್ತೆ ಅಂದುಕೊಂಡು ಅವರ ಮಗಳ ಲಿಂಗ ಬದಲಾವಣೆ ಬಗ್ಗೆ ಮಾತಾಡಿರುವುದು ಯಶ್ ಪಾಲ್ ಸುವರ್ಣ ಅವರ ಪೂರ್ವಗ್ರಹವನ್ನು ತೋರಿಸುತ್ತದೆ. ಇದು ಪೂರ್ವಗ್ರಹ ಮಾತ್ರ ಅಲ್ಲ. ಏನೊ ದೊಡ್ಡ ಕದನ ಗೆದ್ದ ಅಮಲಂತೆ ಅವರು ನಡೆದುಕೊಂಡಿದ್ದಾರೆ. 

ಗಂಡಸುತನದ ಅಮಲು ಬಲಪಂಥೀಯ ಸಿದ್ಧಾಂತದಲ್ಲಿ ಒಂದು ಮುಖ್ಯ ಸ್ವಯಂ ರಕ್ಷಣೆಯಾಗಿ ಬಳಕೆಯಾಗುತ್ತದೆ. ಇದು ಮನು ಮತ್ತು ಇತರ ನಾಯಕರ ದೇಣಿಗೆಯಾಗಿ ನಿಂತು ಹೆಜ್ಜೆ ಹೆಜ್ಜೆಗು ಅವಮಾನಿಸುವ ಗೀಳಿಗೆ ಅವರು ಬೀಳುತ್ತಾರೆ. ಜಗತ್ತು, ಅಕಡೆಮಿಕ್ ಅಧ್ಯಯನಗಳು, ಬದುಕುಗಳು ಲಿಂಗತ್ವದ ಮಾದರಿಗಳನ್ನು ಮೀರಿ ಸಮಸಮಾಜದ ಬಗ್ಗೆ ಚಿಂತಿಸುತ್ತಿರುವಾಗ, ಸಂಬಂದವೆ ಇಲ್ಲದ ಪರಮೇಶ್ವರ  ಅವರ ಮಗಳ ವಿಷಯವನ್ನು ಎತ್ತಿಕೊಂಡು ಬರುವುದು ಅವರ ಅಭದ್ರತೆಯನ್ನು ತೋರಿಸುತ್ತದೆ. ಇತ್ತೀಚೆಗಂತು ಇವೆಲ್ಲ ಒಂದಕ್ಕೊಂದು ತಳಕು ಹಾಕಿಕೊಂಡಿವೆ. ಗಂಡಸುತನ, ಧರ್ಮ ಅಧರ್ಮದ ಜಾತಿ ಅಸೂಕ್ಷ್ಮಗಳು ಒಂದು ರೀತಿಯ ಪ್ಲೇಗ್ ಮಾರಿಯಂತೆ ಜನರ ಪ್ರಗ್ನೆಯನ್ನು ತಿನ್ನುತ್ತಿದೆ. ಈ ಗಂಡಸುತನದ ಕೊಚ್ಚೆಯಲ್ಲಿ ಹೊರಳಾಡುತ್ತ ಆನಂದಿಸುತ್ತಿರುವ ಯಶ್ ಪಾಲ್ ಅವರ ಬಗ್ಗೆ ಕನಿಕರ ಹುಟ್ಟುವುದಿಲ್ಲ. ಹೇಸಿಗೆ ಎನಿಸುತ್ತದೆ. ಲಿಂಗ ಬದಲಾವಣೆ ಪ್ರಕ್ರಿಯೆ ಏನೆಂದು ಪರಮೇಶ್ವರ   ಅವರ ಮಗಳಿಗು ತಿಳಿದಿದೆ, ನಮಗು ತಿಳಿದಿದೆ. ಯಶ್ ಪಾಲ್ ಅವರ ಡಬಲ್ ಸ್ಟ್ಯಾಂಡರ್ಡ್ ನಮಗೇನು ಹೇಳಿಕೊಡುವ ಅವಶ್ಯಕತೆ ಇಲ್ಲ. ನಮಗೆ ನಮ್ಮ ಜೆಂಡರ್ ಕುರಿತು ಅಭಿಮಾನವೇ ಇದೆ.

(ಈ ಲೇಖನ ಎಲ್ಲರ ಕನ್ನಡದಲ್ಲಿದೆ)

ರೂಮಿ ಹರೀಶ್

ಕ್ವಿಯರ್ ಟ್ರಾನ್ಸ್ ಮ್ಯಾನ್

ಇದನ್ನೂ ಓದಿ-ಉಡುಪಿ ನೇತ್ರ ಜ್ಯೋತಿ ಕಾಲೇಜು ಪ್ರಕರಣ; SIT ಗೆ ವಹಿಸುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ

Related Articles

ಇತ್ತೀಚಿನ ಸುದ್ದಿಗಳು

You cannot copy content of this page