Home Uncategorized ಆರ್‌ಎಸ್‌ಎಸ್ ಸಾವಿರ ಹೆಡೆಗಳ ವಿಷನಾಗರ: ಸಂಘ ಪರಿವಾರ ಕ್ಷಮೆಯಾಚಿಸುವವರೆಗೆ ಹೋರಾಟಕ್ಕೆ ಯತೀಂದ್ರ ಸಿದ್ದರಾಮಯ್ಯ ಕರೆ

ಆರ್‌ಎಸ್‌ಎಸ್ ಸಾವಿರ ಹೆಡೆಗಳ ವಿಷನಾಗರ: ಸಂಘ ಪರಿವಾರ ಕ್ಷಮೆಯಾಚಿಸುವವರೆಗೆ ಹೋರಾಟಕ್ಕೆ ಯತೀಂದ್ರ ಸಿದ್ದರಾಮಯ್ಯ ಕರೆ

0

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್‌ಎಸ್‌ಎಸ್) ಸಾವಿರ ಹೆಡೆಗಳಿರುವ ವಿಷನಾಗರವಾಗಿದ್ದು, ಇಡೀ ಸಮಾಜಕ್ಕೆ ವಿಷ ಉಣಿಸುತ್ತಿದೆ ಎಂದು ಕರ್ನಾಟಕ ಸರ್ಕಾರದ ಸಚಿವ ಯತೀಂದ್ರ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಆರ್‌ಎಸ್‌ಎಸ್‌ನೊಳಗೆ ಜಾತೀಯತೆ, ಕೋಮುವಾದ ಮತ್ತು ಮನುವಾದದ ವಿಷ ತುಂಬಿಕೊಂಡಿದ್ದು, ಇದು ಸಮಾಜ ಹಾಗೂ ದೇಶದ ಸಾಮರಸ್ಯಕ್ಕೆ ಮಾರಕವಾಗಿದೆ ಎಂದು ಅವರು ಕಿಡಿಕಾರಿದ್ದಾರೆ. ಜಾತಿ ವ್ಯವಸ್ಥೆಯನ್ನು ಬುಡಸಮೇತ ಕಿತ್ತೊಗೆಯಲು ಶ್ರಮಿಸುವ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರೂ ಆರ್‌ಎಸ್‌ಎಸ್‌ನ ಇಂತಹ ಹೀನ ಮನಸ್ಥಿತಿಯನ್ನು ಒಕ್ಕೊರಲಿನಿಂದ ಖಂಡಿಸಬೇಕು ಹಾಗೂ ಇದರ ವಿರುದ್ಧ ಪ್ರತಿಭಟನೆಗೆ ಧುಮುಕಬೇಕು ಎಂದು ಕರೆ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಳಿ ಆರ್‌ಎಸ್‌ಎಸ್, ಬಿಜೆಪಿ ಹಾಗೂ ಶ್ರೀರಾಮ ಸೇನೆಯ ನಾಯಕರು ಬೇಷರತ್ತಾಗಿ ಸಾರ್ವಜನಿಕ ಕ್ಷಮೆಯಾಚಿಸಲೇಬೇಕು. ಅಲ್ಲಿಯವರೆಗೆ ಪಕ್ಷದ ಕಾರ್ಯಕರ್ತರು ಪ್ರತಿಭಟನೆಯನ್ನು ನಿರಂತರವಾಗಿ ಮುಂದುವರಿಸಬೇಕೆಂದು ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

You cannot copy content of this page

Exit mobile version