Monday, June 9, 2025

ಸತ್ಯ | ನ್ಯಾಯ |ಧರ್ಮ

ಬಿಜೆಪಿ ಸೇರಿದ ಸುಳ್ಳು ಸುದ್ದಿಕೋರ ಯೂಟ್ಯೂಬರ್‌‌ ತಿವಾರಿ ಅಲಿಯಾಸ್ ಕಶ್ಯಪ್

ಹೊಸದಿಲ್ಲಿ: ಬಿಹಾರದ ವಿವಾದಿತ ಯೂಟ್ಯೂಬರ್ ತ್ರಿಪುರಾರಿ ಕುಮಾರ್ ತಿವಾರಿ ಅಲಿಯಾಸ್ ಮನೀಶ್ ಕಶ್ಯಪ್ ಅವರು ಗುರುವಾರ ಬಿಜೆಪಿ ಸೇರಿದ್ದಾರೆ. ಬಿಜೆಪಿ ಸಂಸದ ಮನೋಜ್ ತಿವಾರಿ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡ ಮನೀಶ್ ನಂತರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾದರು.

ಕಳೆದ ವರ್ಷ ತಮಿಳುನಾಡಿನ ಬಿಹಾರದಲ್ಲಿ ವಲಸೆ ಕಾರ್ಮಿಕರ ಮೇಲೆ ನಡೆದ ದಾಳಿಗಳ ಬಗ್ಗೆ ಯೂಟ್ಯೂಬ್‌ನಲ್ಲಿ ಸುಳ್ಳು ಸುದ್ದಿಯನ್ನು ಪೋಸ್ಟ್ ಮಾಡಿದ ನಂತರ ಕಶ್ಯಪ್ ಅವರನ್ನು ಬಂಧಿಸಲಾಗಿತ್ತು. ಸುಮಾರು ಒಂಬತ್ತು ತಿಂಗಳ ಕಾಲ ತಮಿಳುನಾಡಿನ ಜೈಲಿನಲ್ಲಿದ್ದ ಅವರು ಕಳೆದ ವರ್ಷ ಡಿಸೆಂಬರ್‌ನಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ತಮಿಳುನಾಡಿನಲ್ಲಿ ಬಿಹಾರದ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಲಾಗುತ್ತಿದೆ ಎಂಬ ಸುಳ್ಳು ಸುದ್ದಿ ಪ್ರಸಾರವಾದಾಗ, ಬಿಜೆಪಿ ಅವರೊಂದಿಗೆ ಸಂಪರ್ಕ ಹೊಂದಿದೆ ಎಂಬ ಟೀಕೆಗಳು ವ್ಯಕ್ತವಾಗಿದ್ದವು.

ಇದೀಗ ಈ ಸುದ್ದಿ ಬಿತ್ತರಿಸಿದ ಕಶ್ಯಪ್ ಬಿಜೆಪಿಗೆ ಸೇರ್ಪಡೆಯಾಗಿದ್ದು, ಆ ಟೀಕೆಗಳು ನಿಜ ಎಂಬುದು ಸ್ಪಷ್ಟವಾಗಿದೆ. ಸಾಮಾಜಿಕ ಜಾಲತಾಣಗಳ ಹೆಸರಿನಲ್ಲಿ ಜನರಿಂದ ಅಕ್ರಮ ವಸೂಲಿ, ಪಶ್ಚಿಮ ಚಂಪಾರಣ್ ಜಿಲ್ಲೆಯ ಮಹಾರಾಣಿ ಜಾನಕಿ ಕುನ್ವಾರ್ ಆಸ್ಪತ್ರೆ ಆವರಣದಲ್ಲಿ ಕಿಂಗ್ ಎಡ್ವರ್ಡ್ ಪ್ರತಿಮೆ ಧ್ವಂಸ, ಪೊಲೀಸರ ಮೇಲೆ ದಾಳಿ, ಪುಲ್ವಾಮಾ ಭಯೋತ್ಪಾದನಾ ದಾಳಿಯ ನಂತರ ಪಾಟ್ನಾದಲ್ಲಿ ಕಾಶ್ಮೀರಿ ಅಂಗಡಿಕಾರರ ಮೇಲೆ ದಾಳಿ ಕುರಿತ ಪ್ರಕರಣಗಳಲ್ಲಿ ಕಶ್ಯಪ್ ಅವರನ್ನು ಪೊಲೀಸರು ಈ ಹಿಂದೆ ಬಂಧಿಸಿದ್ದರು.

ಈತನ ಬಿಹಾರದಲ್ಲಿ 13 ಮತ್ತು ತಮಿಳುನಾಡಿನಲ್ಲಿ 9 ಪ್ರಕರಣಗಳು ವರದಿಯಾಗಿವೆ. ಮುಂದಿನ ವರ್ಷ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕಶ್ಯಪ್ ಅವರನ್ನು ಕಣಕ್ಕಿಳಿಸಲಿದೆ ಎಂಬುದು ಸದ್ಯದ ಸುದ್ದಿ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page