Home ರಾಜಕೀಯ ಮನೀಶ್ ಸಿಸೋಡಿಯ ಮೇಲೆ ಅಪಪ್ರಚಾರ ; ಬಿಜೆಪಿ ಪಕ್ಷದ ಹತಾಶೆಯ ಸಂಕೇತ : ಕರ್ನಾಟಕ ಎಎಪಿ

ಮನೀಶ್ ಸಿಸೋಡಿಯ ಮೇಲೆ ಅಪಪ್ರಚಾರ ; ಬಿಜೆಪಿ ಪಕ್ಷದ ಹತಾಶೆಯ ಸಂಕೇತ : ಕರ್ನಾಟಕ ಎಎಪಿ

0

ದೇಶ ವಿದೇಶಗಳೇ ಹೆಮ್ಮೆ ಪಡುವಂತಹ ಶಿಕ್ಷಣ ಕ್ರಾಂತಿಯನ್ನು ದೆಹಲಿ ರಾಜ್ಯದಲ್ಲಿ ಮಾಡಿರುವಂತಹ ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯ ಅವರ ಮೇಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ಜಾರಿ ನಿರ್ದೇಶನಾಲಯದ ಮೂಲಕ ಸುಳ್ಳು ಕೇಸಿನಲ್ಲಿ ಬಂದಿಸಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಬಿ ಟಿ ನಾಗಣ್ಣ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಆಮ್ಆದ್ಮಿ ಪಕ್ಷದ ಮಾಧ್ಯಮ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಕೇಸಿನಲ್ಲಿ ನಿನ್ನೆ ಜಪ್ತಿ ಮಾಡಿರುವಂತಹ 54 ಕೋಟಿ ಮೌದ್ಯದ ಆಸ್ತಿ ಕೇವಲ ಮನೀಶ್ ಸಿಸೋಡಿಯ ರವರಿಗೆ ಮಾತ್ರ ಸಂಬಂಧ ಪಟ್ಟದ್ದು ಎಂಬಂತೆ ರಾಷ್ಟ್ರದಾದ್ಯಂತ ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡುತ್ತಿವೆ. ಇದು ಬಿಜೆಪಿಯವರ ಹತಾಶೆಯ ಸಂಕೇತ ಎಂದು ದೂರಿದ್ದಾರೆ.

ಈಗಾಗಲೇ ಎರಡು ರಾಜ್ಯಗಳಲ್ಲಿ ಅಧಿಕಾರವನ್ನು ಹಾಗೂ ಗೋವಾ, ಪಂಜಾಬ್, ಉತ್ತರಪ್ರದೇಶ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಜನಪ್ರತಿನಿಧಿಗಳನ್ನು ಹೊಂದಿರುವಂತಹ ಆಮ್ ಆದ್ಮಿ ಪಕ್ಷದ ಉನ್ನತ ನಾಯಕರುಗಳನ್ನು ಸದೆ ಬಡಿದು ಈ ರೀತಿಯ ರಾಜಕೀಯ ಆಂದೋಲನವನ್ನು ಮಟ್ಟ ಹಾಕಬೇಕೆಂಬುದೇ ಕೇಂದ್ರ ಬಿಜೆಪಿ ಸರ್ಕಾರದ ಉದ್ದೇಶವಾಗಿದೆ. ಈ ರೀತಿಯ ಕುತಂತ್ರಗಳಿಂದ ಆಮ್ಆದ್ಮಿ ಪಕ್ಷ ಯಾವುದೇ ಕಾರಣಕ್ಕೂ ಜಗ್ಗುವುದಿಲ್ಲ” ಎಂದು ಎಚ್ಚರಿಕೆ ನೀಡಿದರು.

“ಮನೀಶ್ ಸಿಸೋಡಿಯಾ ಅವರು ಈ ಹಿಂದೆ ಪತ್ರಕರ್ತರಾಗಿದ್ದಾಗ 5-2-2005 ರಲ್ಲಿ ಗಾಜಿಯಾಬಾದ್ ನಲ್ಲಿ 5 ಲಕ್ಷಕ್ಕೆ ಮನೆಯನ್ನು ಖರೀದಿಸಿದ್ದರು. 27-7-2018 ರಲ್ಲಿ ತಮ್ಮ ಹೆಂಡತಿಯ ಹೆಸರಿನಲ್ಲಿ ದೆಹಲಿಯಲ್ಲಿ 65 ಲಕ್ಷದ ಒಂದು ಫ್ಲಾಟ್ ಅನ್ನು ಖರೀದಿಸಿದ್ದರು. ಬ್ಯಾಂಕ್ ಆಫ್ ಬರೋಡದ ಖಾತೆಯಲ್ಲಿ 11,49,738 ರೂಗಳು ಮಾತ್ರ ಇದೆ. ಆದರೆ ಮನೀಶ್ ಸಿಸೋಡಿಯಾ ರವರ ಮೇಲಿನ ಮೊಕದ್ದಮೆ 2021 ರಲ್ಲಿ ಆಗಿದೆ. ಈ ಸುಳ್ಳು ಮೊಕದ್ದಮೆಗೂ ಅವರು ಖರೀದಿಸಿರುವ ಎರಡು ಆಸ್ತಿಗಳಿಗೂ ಯಾವುದೇ ಸಂಬಂಧವಿಲ್ಲವೆಂಬುದು ಇದರಿಂದ ಸಾಬೀತಾಗುತ್ತಿದೆ.

ಮಾಜಿ ಪತ್ರಕರ್ತನಾಗಿ ಎರಡು ಬಾರಿ ದೆಹಲಿಯ ಉಪಮುಖ್ಯಮಂತ್ರಿಯಾಗಿ, 18 ಖಾತೆಗಳನ್ನು ನಿರ್ವಹಣೆ ಮಾಡುತ್ತಿದ್ದ ಇವರು ತಮ್ಮ ವಾಸಕ್ಕಾಗಿ ಇಷ್ಟು ಸಣ್ಣ ಮಟ್ಟದ ಆಸ್ತಿಯನ್ನು ಸಹ ಹೊಂದಬಾರದೆ?” ಎಂದು ನಾಗಣ್ಣ ಪ್ರಶ್ನಿಸಿದರು.

“ಜಾರಿ ನಿರ್ದೇಶನಾಲಯ ಜಪ್ತಿ ಮಾಡಿರುವ 54 ಕೋಟಿ ಮೌಲ್ಯದ ಆಸ್ತಿ ಚಾರಿಯೇಟ್ ಮೀಡಿಯಾ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್, ಬ್ರಿಂಡ್ ಕೋ ಸೇಲ್ಸ್ ಪ್ರೈವೇಟ್ ಲಿಮಿಟೆಡ್, ಗೌತಮ್ ಮಲ್ಹೋತ್ರ, ನೋವಾ ಗಾರ್ಮೆಂಟ್ಸ್, ಗೌತಮ್ ಮಲ್ಹೋತ್ರರವರುಗಳಿಗೆ ಸಂಬಂಧಿಸಿದ ಆಸ್ತಿಗಳು” ಎಂದು ನಾಗಣ್ಣ ದಾಖಲೆ ಸಮೇತ ಪ್ರದರ್ಶಿಸಿದರು.

ರಾಷ್ಟ್ರೀಯ ಹಾಗೂ ಸ್ಥಳೀಯ ಮಾಧ್ಯಮಗಳು ಸರಿಯಾಗಿ ಅರ್ಥೈಸಿಕೊಂಡು ಸುದ್ದಿ ಪ್ರಸಾರ ಮಾಡಬೇಕು. ಬಿಜೆಪಿ ಕೃಪೆ ಹೊಂದಿದಂತೆ ಮಾಡುವ ಸುದ್ದಿಗಳು ಜನರಿಗೆ ಅರಿವಾಗದೇ ಇರುವುದಿಲ್ಲ. ಈ ಮೂಲಕ ಮನೀಶ್ ಸಿಸೋಡಿಯಾ ರವರ ಬಗ್ಗೆ ಅಪಪ್ರಚಾರ ಮಾಡಬಾರದೆಂದು ಮನವಿ ಮಾಡಿಕೊಂಡರು.

‘ಬಿಜೆಪಿಯವರು ಜಾರಿ ನಿರ್ದೇಶನಾಲಯದ ಇತ್ತೀಚಿನ ತಿದ್ದುಪಡಿ ಕಾನೂನನ್ನು ಕೇವಲ ಆಮ್ ಆದ್ಮಿ ಪಕ್ಷದ ನಾಯಕರುಗಳನ್ನು ಮಾತ್ರ ಹಣಿಯಲು ಬಳಸುತ್ತಿದೆ. ಹಾಗೂ ಬೇರೆ ಬೇರೆ ರಾಜ್ಯಗಳಲ್ಲಿ ತಮ್ಮ ಸರ್ಕಾರಗಳನ್ನು ಅಕ್ರಮ ಮಾರ್ಗಗಳಲ್ಲಿ ಸ್ಥಾಪಿಸಲು ಬಳಸಿಕೊಳ್ಳುತ್ತಿದ್ದಾರೆ. ಬಿಜೆಪಿಗೆ ರಾಷ್ಟ್ರದಲ್ಲಿ ಭ್ರಷ್ಟಾಚಾರವನ್ನು ಕಿತ್ತೆಸೆಯುವ ಯಾವುದೇ ಮಹಾ ಉದ್ದೇಶವಿಲ್ಲ” ಎಂದು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ ತಿಳಿಸಿದರು.

You cannot copy content of this page

Exit mobile version