Home ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ ಶಿವಮೊಗ್ಗದಲ್ಲಿ ಶಾಂತಿ ಕಾಪಾಡಲು ಸೌಹಾರ್ದ ಮನಸ್ಸುಗಳ ಮನವಿ

ಶಿವಮೊಗ್ಗದಲ್ಲಿ ಶಾಂತಿ ಕಾಪಾಡಲು ಸೌಹಾರ್ದ ಮನಸ್ಸುಗಳ ಮನವಿ

0

ಶಿವಮೊಗ್ಗದಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ, ಯಾವುದೇ ಅಹಿತಕರ ಘಟನೆ ನಡೆಯಲು ಆಸ್ಪದ ಕೊಡದಂತೆ ನಾಗರೀಕರು ಸಹಕರಿಸಬೇಕು ಎಂದು ಸೌಹಾರ್ದ ಹಬ್ಬ, ಶಾಂತಿಯ ನಡುಗೆ ಸಮಿತಿ ಕರೆ ನೀಡಿದೆ.

“ಶಿವಮೊಗ್ಗ ಶಾಂತಿ ಮತ್ತು ಸೌರ್ಹಾದತೆಗೆ ಹೆಸರಾದ ಊರು, ಗಣಪತಿ ಮೆರವಣಿಗೆ ಈದ್ ಮಿಲಾದ್ ಮೆರವಣಿಗೆ ಒಂದೇ ದಿನಕ್ಕೆ ಬಂದಂತಹ ಸಂದರ್ಭದಲ್ಲಿ ಸೌಹಾರ್ದದ ದೃಷ್ಟಿಯಿಂದ ದಿನ ಬದಲಿಸಿಕೊಂಡು ಮೆರವಣಿಗೆ ಮಾಡಿ ಸೌಹಾರ್ದವನ್ನು ಸಾರಿರುವುದು, ಶಿವಮೊಗ್ಗದ ಗೌರವವನ್ನು ಹೆಚ್ಚಿಸಿದ್ದು, ಇದು ಹೊಸ ಬೆಳವಣಿಗೆ. ಇದಕ್ಕೆ ಸಹಕರಿಸಿದ್ದು ಹಿಂದೂ ಮಹಾಸಭಾ ಜಾಮೀಯ ಮಸೀದಿ ಮತ್ತು ಮುಸ್ಲಿಂ ಸಂಘಟನೆ ಹಾಗೂ ಓಂ ಗಣಪತಿ ಕಮೀಟಿಗಳು, ಜಿಲ್ಲಾಡಾಳಿತ ಅದರಲ್ಲು ಮುಖ್ಯವಾಗಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳ ಪಾತ್ರ ಮಹತ್ವದ್ದಾಗಿತ್ತು”.

ಶಿವಮೊಗ್ಗ ನಗರ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲೊಂದು, ಶಿವಮೊಗ್ಗ ಅತ್ಯಂತ ಸೂಕ್ಷ್ಮವಾದ ಪ್ರದೇಶವಾಗಿದ್ದು, ಇಲ್ಲಿ ಚಿಕ್ಕ ಘಟನೆಗಳು ದೊಡ್ಡ ಸುದ್ದಿಯಾಗುತ್ತವೆ. ಯಾರೋ ಕೆಲವು ಕಿಡಿಗೇಡಿಗಳು ಮಾಡುವ ತಪ್ಪುಗಳು ಇಡೀ ನಗರದ ಜನರ ನೆಮ್ಮದಿಯನ್ನು, ವ್ಯಾಪಾರ ವಹಿವಾಟನ್ನು, ಮಕ್ಕಳ ಶಿಕ್ಷಣವನ್ನು ಹಾಳುಮಾಡುತ್ತದೆ. ಆ ದಿನ ದುಡಿಮೆ ಮಾಡಿ ಆ ದಿನ ಜೀವನ ನಡೆಸುವ ಬೀದಿ ಬದಿ ವ್ಯಪಾರಿಗಳು, ಬದುಕು ನಡೆಸುವುದೇ ಕಷ್ಟಕರವಾಗುತ್ತಿದೆ. ನಗರ ಶಾಂತವಾಗಿದ್ದರೆ ಎಲ್ಲರೂ ನೆಮ್ಮದಿಯಿಂದ ಬದುಕಬಹುದು.

ಸೌಹಾರ್ದವೇ ಹಬ್ಬ ನಾಡಿಗೆಮೀತಿಯು ಶಿವಮೊಗ್ಗ ನಗರದ ಶಾಂತಿ ಬಯಸುತ್ತದೆ, ಈ ಮೂಲಕ ನಗರದ ಜನರಲ್ಲಿ ಕೇಳಿಕೊಳ್ಳುವುದೇನೆಂದರೆ, ಯಾವುದೇ ಉಹಾಪೋಹ ಕಿವಿಗೊಡದೆ ನಗರದ ಶಾಂತಿ ಸುವ್ಯವಸ್ಥೆಯ ಕಾರ್ಯದಲ್ಲಿ ನಾವೆಲ್ಲರು ಶಾಂತಿಯುತವಾಗಿ ಶಿವಮೊಗ್ಗ ನಗರವನ್ನು ಶಾಂತಿಯ ತಾಣವಾಗಿ ಮಾಡೋಣ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮತ್ತು ಸಾಮಾಜಿಕ ತಾಣಗಳು ಮತ್ತು ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಗಳು ಸತ್ಯವಾಗಿರುವುದಿಲ್ಲ. ಇಂತಹ ಸಂದರ್ಭವನ್ನು ಬಂಡವಾಳ ಮಾಡಿಕೊಂಡ ರಾಜಕೀಯ ಮಾಡುವುದು ಹೊಸದೇನು ಅಲ್ಲ. ಇಲ್ಲ ನಗರದ ನಾಗರೀಕರು ಅತ್ಯಂತ ಪ್ರಜ್ಞಾವಂತರಿದ್ದು, ಈ ತರದ ರಾಜಕೀಯ ಪಿತೂರಿಗಳಿಗೆ ಸುಳ್ಳು ಊಹಾಪೋಹಕ್ಕೆ ಕಿವಿಗೊಡದೆ, ಶಾಂತಿ ಕಾಪಾಡಲು ಕೋರುತ್ತೇವೆ ಎಂದು ಸಮಿತಿ ಕೋರಿದೆ.

ಜೊತೆಗೆ ಇಂದು ಮಹಾತ್ಮ ಗಾಂದಿಯವರ ಜಯಂತಿ ಅಂಗವಾಗಿ ಎಲ್ಲಾ ಧರ್ಮದ ಧರ್ಮ ಗುರುಗಳು ಒಂದಾಗಿ ಶಿವಮೊಗ್ಗ ಗಾಂಧಿ ಪಾರ್ಕಿನ ಮಹಾತ್ಮ ಗಾಂಧಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಶಿವಮೊಗ್ಗದಲ್ಲಿ ಶಾಂತಿ ನೆಲೆಸುವಂತೆ ಶಾಂತಿ ಸಂದೇಶ ಸಾರಲು ಸೌಹಾರ್ದ ಮನಸ್ಸುಗಳು ಕರೆ ನೀಡಿವೆ. ಈ ಕಾರ್ಯಕ್ರಮಕ್ಕೆ ವಿನಯ್ ಗುರೂಜಿ ಗೌರಿಗದ್ದೆ, ಶ್ರೀ ಬಸವ ಮರುಳಸಿದ್ದ ಸ್ವಾಮೀಜಿಗಳು ಬಸವಕೇಂದ್ರ ಶಿವಮೊಗ್ಗ, ಮೌಲಾನಿ ಅಬ್ದುಲ್ ಲತಿಪ್ ಸಾದಿ ಶಿವಮೊಗ್ಗ, ಪಾದರ್ ಕ್ಲಿಪ್ ಪೊರ್ಡ್ ರೋಷನ್ ಪಿಂಟೊ SMSS ಶಿವಮೊಗ್ಗ, ಮತ್ತು ಸೌರ್ಹಾದ ಸಮೀತಿಯವರು ಭಾಗವಹಿಸುತ್ತಾರೆ ಎಂದು ಸಮಿತಿಯ ಪರವಾಗಿ ಕೆ.ಪಿ.ಶ್ರೀಪಾಲ ಮತ್ತು ಕಿರಣ್ ಕುಮಾರ್ ಮನವಿ ಮಾಡಿದ್ದಾರೆ.

You cannot copy content of this page

Exit mobile version