ಬೆಂಗಳೂರು : ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಜನ್ಮದಿನವನ್ನು ಸ್ಪೂರ್ತಿ ದಿನ ಎಂದು ಸಿಎಂ ಘೋಷಣೆ ಮಾಡಿದೆ.
ಕೆಲವರ ಬದುಕು ಒಳ್ಳೆಯ ರೀತಿಯೋ ಕೆಟ್ಟ ರೀತಿಯೋ ಸಮಾಜದಲ್ಲಿ ಅನೇಕ ಸಂದೇಶಗಳನ್ನು ಸಾರುತ್ತವೆ. ಹೀಗಿರುವಾಗ ಸಂಕಷ್ಟದಲ್ಲಿದ್ದ ಅದೆಷ್ಟೊ ಮಂದಿಗೆ ಸಹಾಯ ಹಸ್ತವನ್ನು ಚಾಚಿದ ವ್ಯಕ್ತಿಗಳಲ್ಲಿ ಕನ್ನಡ ಚಲನಚಿತ್ರ ರಂಗದ ಅತ್ಯುತ್ತಮ ನಟರಾದ ಪುನೀತ್ ರಾಜ್ ಕುಮಾರ್ ಅತ್ಯಂತ ಎತ್ತರದ ಸ್ಥಾನದಲ್ಲಿ ಇದ್ದಾರೆ. ಇವರು ಕರ್ನಾಟಕದ ಲಕ್ಷಾಂತರ ಜನರಿಗೆ ಸ್ಪೂರ್ತಿದಾಯಕವಾಗಿದ್ದಾರೆ.
26ಕ್ಕಿಂತಲೂ ಹೆಚ್ಚು ಅನಾಥಾಶ್ರಮ, 19 ಗೋಶಾಲೆ, 16 ವೃದ್ಧಾಶ್ರಮ, 46 ಕ್ಕೂ ಹೆಚ್ಚೂ ಶಾಲಾ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದರು, ಮೈಸೂರಿನ ಶಕ್ತಿದಾಮದ ಮೂಲಕ ಸಾವಿರಾರು ಹೆಣ್ಣು ಮಕ್ಕಳಿಗೆ ಶಿಕ್ಷಣ, ರಾಜಕುಮಾರ ಸಿನಿಮಾದಿಂದ ಬಂದ ಸಂಭಾವನೆಯ ಒಂದು ಭಾಗವನ್ನು ವೃದ್ದಾಶ್ರಮಗಳಿಗೆ ಅರ್ಪಣೆ ಹೀಗೇ ಇನ್ನೂ ಹಲವಾರು ಸಮಾಜ ಸೇವೆಗಳನ್ನು ಮಾಡಿಕೊಂಡು ಆ ಕಾರ್ಯಗಳನ್ನು ಎಲ್ಲಿಯೂ ಬಹಿರಂಗವಾಗಿ ವ್ಯಕ್ತಪಡಿಸದೆ ಬಂದ ನಟ ಪುನೀತ್ ರಾಜಕುಮಾರ್ ಅವರ ಜನ್ಮದಿನವಾದ ಮಾರ್ಚ್ 17ರ ದಿನವನ್ನು “ಸ್ಪೂರ್ತಿ ದಿನ” ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.