ಆಧುನಿಕ ಪ್ರಜಾಪ್ರಭುತ್ವವಾದಿ ಟಿಪ್ಪು ಸುಲ್ತಾನನನ್ನು ಅಖಂಡ ಕನ್ನಡಿಗರು ಬೇರೆ ಬೇರೆ ಕಾರಣಕ್ಕೆ ನೆನೆಯ ಬೇಕಾಗಿದೆ. ಯಾರು ಯಾರು ಏಕೆ ನೆನೆಯಬೇಕೆಂದು ಸಣ್ಣದೊಂದು ಪಟ್ಟಿಯನ್ನು ಸಂಶೋಧಕ ಅರುಣ್ ಜೋಳದಕೂಡ್ಲಿಗಿಯವರು ಮಾಡಿದ್ದಾರೆ. ಗಮನಿಸಿ.
ಟಿಪ್ಪುವನ್ನು ಮಹಿಳೆಯರೇಕೆ ನೆನೆಯಬೇಕು?
- ಸಾಮಾಜಿಕ ಪಿಡುಗನ್ನು ನಿಶೇಧಿಸಿದ.
- ಮನೆಗೆಲಸಕ್ಕೆ ಗುಲಾಮ ಮಹಿಳೆಯರನ್ನು ನೇಮಿಸಿ ಕೊಳ್ಳುವುದನ್ನು ನಿಶೇಧಿಸಿದ.
- ಮಲಬಾರ್ ಪ್ರಾಂತದಲ್ಲಿದ್ದ ಬಹುಪತ್ನಿತ್ವ ಪದ್ಧತಿಯನ್ನು ನಿಶೇಧಿಸಿದ.
- ಮಲಬಾರಿನ ಬುಡಕಟ್ಟು ಮಹಿಳೆಯರು ಸೊಂಟದ ಮೇಲೆ ಉಡುಪು ಧರಿಸುವಂತಿರದ ಅಮಾನವೀಯ ಕ್ರೌರ್ಯವನ್ನು ನಿಶೇಧಿಸಿ ಉಡುಪು ಧರಿಸುವಂತೆ ನಿಯಮ ಜಾರಿಗೊಳಿಸಿದ.
- ಮದುವೆಯ ದುಂದು ವೆಚ್ಚವನ್ನು ನಿಯಂತ್ರಿಸಿ ಸರಳ ಮದುವೆಗಳನ್ನು ಬೆಂಬಲಿಸಿದ.
ಟಿಪ್ಪುವನ್ನು ರೈತರೇಕೆ ನೆನೆಯಬೇಕು?
- ರೈತರ ಜೀವ ಹಿಂಡುತ್ತಿದ್ದ ಸ್ಥಳೀಯ ಪಾಳೆಯಗಾರರನ್ನು ಮಟ್ಟಹಾಕಿನು.
- ಮಧ್ಯವರ್ತಿ ದಲ್ಲಾಳಿಗಳನ್ನು ನಿಯಂತ್ರಿಸಿ ರೈತ ಮತ್ತು ಸರಕಾರದ ನೇರ ಸಂಪರ್ಕಕ್ಕೆ ಕ್ರಮ ಕೈಗೊಂಡನು.
- ಜಮೀನ್ದಾರಿ ಪದ್ಧತಿಯನ್ನು ನಿಯಂತ್ರಿಸಿ, ತಕಾವಿ ಕಿರುಸಾಲ ಯೋಜನೆಯನ್ನು ಜಾರಿಗೆ ತಂದನು.
- ರೈತರಿಗಾಗಿ ಸಹಕಾರಿ ಬ್ಯಾಂಕ್ ಸ್ಥಾಪಿಸಿದನು.
- ತೆರಿಗೆಯಲ್ಲಿ ದೊಡ್ಡ ಸುಧಾರಣೆ ತರಲಾಯಿತು. ಹೊಲ ಬೆಳೆ ಎಲ್ಲವನ್ನು ಸರ್ವೆಮಾಡಿ ನ್ಯಾಯಯುತ ತೆರಿಗೆ ವಿಧಿಸತೊಡಗಿದ.
- ಬಂಗಾಳದಿಂದ ರೇಶ್ಮೆಹುಳು ತರಿಸಿ ರೇಶ್ಮೆ ಕೃಷಿ ಯನ್ನು ಆರಂಭಿಸಿದ.
- ನೀರಾವರಿಗಾಗಿ 39,000 ಕೆರೆಕಟ್ಟೆಗಳನ್ನು ಕಟ್ಟಿಸಿದ, 16,000 ಬಾವಿಗಳನ್ನು ತೋಡಿಸಿದ. 24 ಕಡೆ ನದಿ ಆಣೆಕಟ್ಟೆಗಳನ್ನು ಕಟ್ಟಿಸಿ ನೀರಾವರಿ ಕೃಷಿಯನ್ನು ಅಭಿವೃದ್ಧಿಗೊಳಿಸಿದ. 1803-04 ರ ಹೊತ್ತಲ್ಲಿ 30 ಲಕ್ಷ ಎಕರೆ ಜಮೀನಿನಲ್ಲಿ 8 ಲಕ್ಷ ಎಕರೆ ಜಮೀನು ಅಂದರೆ ಶೇ 35 ರಷ್ಟು ನೀರಾವರಿಯಾಯಿತು.
- 1798 ರಲ್ಲಿ KRS ಇರುವ ಜಾಗದಲ್ಲಿ ಕಾವೇರಿ ನದಿಗೆ ಬೃಹತ್ ಆಣೆಕಟ್ಟು ಕಟ್ಟಿಸುವ ಅಡಿಗಲ್ಲು ಹಾಕಿಸಿದ.
- ಕಬೀರ್ ಕಾಸರ್ ಗುರುತಿಸುವಂತೆ, ರೈತನ ಜಾತಿ, ಮತ, ಪಂಥ, ಧರ್ಮ ಏನೇ ಇದ್ದರೂ ಉಳುವವನೆ ಭೂಒಡೆಯ ಎಂಬ ಕ್ರಾಂತಿಕಾರಿ ಯೋಜನೆಯನ್ನು ತಂದನು.
- ಜೀತ ಪದ್ಧತಿ ಮುಕ್ತಗೊಳಿಸಿ ದಿನಕೂಲಿ ಪದ್ಧತಿಯನ್ನು ಜಾರಿಗೊಳಿಸಿದನು.
- ರೈತರ ಆರೋಗ್ಯ ಹಿತದೃಷ್ಟಿಯಿಂದ ಗಾಂಜಾ ಮತ್ತು ಮದ್ಯಪಾನ ನಿಶೇಧ ಜಾರಿಗೆ ತರುತ್ತಾನೆ.
ಟಿಪ್ಪುವನ್ನು ಈ ನಾಡಿನ ದಲಿತರೇಕೆ ನೆನೆಯಬೇಕು?
- ತನ್ನ ರಾಜ್ಯದಲ್ಲಿ ಅಸ್ಷೃಶ್ಯತೆಯ ಆಚರಣೆಯನ್ನು ನಿಶೇಧ ಮಾಡುತ್ತಾನೆ.
- 2.ಟಿಪ್ಪು ಕಟ್ಟಿಸಿದ ಕೆರೆ ಬಾವಿಗಳಿಗೆ ದಲಿತರನ್ನು ನೀರಗಂಟಿ ಗಳನ್ನಾಗಿ ನೇಮಿಸುತ್ತಾರೆ.
- 3.ನಂಜನಗೂಡಿನಲ್ಲಿ 500 ಬ್ರಾಹ್ಮಣರಿಗಿದ್ದ 14,000 ಎಕರೆ ಜಮೀನನ್ನು ಹೊಲವಿಲ್ಲದ 700 ದಲಿತ ಶೂದ್ರರಿಗೆ ಹಂಚುತ್ತಾನೆ.
- ಜೀತಪದ್ಧತಿಗೆ ಬಲಿಯಾಗಿದ್ದ ಬಹುಸಂಖ್ಯಾತ ದಲಿತರನ್ನು ಜೀತಪದ್ಧತಿ ನಿಶೇಧ ಕಾಯ್ದೆ ಬಿಡುಗಡೆಗೊಳಿಸುತ್ತದೆ.
- 6.’ಉಳುವವನೆ ಭೂ ಒಡೆಯ’ ಕಾನೂನಿನಡಿ ಉಳುವ ಭೂಮಿಗೆ ಒಡೆಯರಾದವರಲ್ಲಿ ದಲಿತರ ಪಾಲು ದೊಡ್ಡದಿದೆ.
ಟಿಪ್ಪುವನ್ನು ಹಿಂದುಗಳೇಕೆ ನೆನೆಯಬೇಕು?
- ಬಹುಸಂಖ್ಯಾತ ಹಿಂದುಗಳಿರುವ ತನ್ನ ರಾಜ್ಯದಲ್ಲಿ ಆತ ಮುಸ್ಲಿಮರಿಗಿಂತ ಹಿಂದುಗಳಿಗೆ ಹೆಚ್ಚು ಕೆಲಸ ಮಾಡಿದ್ದಾನೆ.
- ಟಿಪ್ಪುವಿನ ರಾಜ್ಯನೀತಿಯ ಮುಖ್ಯ ಅಂಶ ಜಾತ್ಯತೀತತೆ
- 1916 ರಲ್ಲಿ ಆರ್.ನರಸಿಂಹಾಚಾರ್ಯರು ಟಿಪ್ಪು ಶೃಂಗೇರಿಗೆ ಬರೆದ ಪತ್ರಗಳನ್ನು ಪತ್ತೆಹಚ್ಚಿದ್ದಾರೆ. ಈ ಪತ್ರಗಳನ್ನು ಓದಿದರೆ ಟಿಪ್ಪುವಿನ ಧರ್ಮಾತೀತ ಗುಣ ತಿಳಿಯುತ್ತದೆ. ಮರಾಠರ ಪರುಶುರಾಮ ಭಾವು ಶೃಂಗರಿಯ ಮಠವನ್ನು ದಾಳಿ ಮಾಡಿದಾಗ ಶಾರದಾ ಮಠವನ್ನು ಮತ್ತೆ ಜೀರ್ಣೋದ್ಧಾರ ಮಾಡಿದವನು ಟಿಪ್ಪು.
- ನಂಜನಗೂಡಿನ ಕಳಲೆಯ ಲಕ್ಷ್ಮಿಕಾಂತ ದೇವಸ್ಥಾನಕ್ಕೆ ನಾಲ್ಕು ಬೆಳ್ಳಿಬಟ್ಟಲು, ಮೇಲುಕೋಟೆ ಚೆಲುವ ನಾರಾಯಣ ದೇವಸ್ಥಾನಕ್ಕೆ ಆನೆ, ಬೆಳ್ಳಿ ಪಾತ್ರೆಗಳನ್ನು ಕೊಟ್ಟಿದ್ದಾನೆ. ನಂಜನಗೂಡಿನ ಶ್ರೀಕಂಠೇಶ್ವರ ದೇಗುಲಕ್ಕೆ ಅಪೂರ್ವ ಪಚ್ಚೆಲಿಂಗ ಕೊಡಿಸಿದ್ದಾನೆ. ಈ ಪಟ್ಟಿ ದೊಡ್ಡದಿದೆ. ಒಟ್ಟು 154 ದೇವಾಲಯಗಳಿಗೆ ದತ್ತಿ ಕಾಣಿಕೆ ನೀಡಿದ್ದಾನೆ.
- ಆಡಳಿತದ ಪ್ರಮುಖ ಹುದ್ದೆಗಳಲ್ಲಿ ಹಿಂದೂಗಳನ್ನು ನೇಮಿಸಿದ್ದ.
- ದಿವಾನ್ ಪೂರ್ಣಯ್ಯ-ಕಂದಾಯ, ಹಣಕಾಸು ಸಚಿವ
- ಕೃಷ್ಣಾರಾವ್- ಕೋಶಾಧಿಕಾರಿ.
- ಶ್ಯಾಮ್ ಅಯ್ಯಂಗಾರ್-ಅಂಚೆ ಸಚಿವರು.
- ಹರಿಸಿಂಗ್- ಅಶ್ವದಳದ ಮುಖ್ಯಸ್ಥ
- ಶಿವಾಜಿ ಎಂಬ ಮರಾಠಿ ಸೈನಿಕ 3,000 ಅಶ್ವದಳದ ಮುಖ್ಯಸ್ಥನಾಗಿದ್ದ.
- ನರಸಿಂಗ ರಾವ್, ಶ್ರೀನಿವಾಸರಾವ್, ಅಪ್ಪಾಜಿರಾವ್ ಟಿಪ್ಪುಗೆ ಮುತ್ಸದ್ದಿ ಸಲಹೆಗಾರರಾಗಿದ್ದರು.
ಹೀಗೆ ಪಟ್ಟಿ ಬೆಳೆಯುತ್ತದೆ.