ದೆಹಲಿ: ಎಎಪಿ ರಾಷ್ಟ್ರೀಯ ಸಂಚಾಲಕ ಕೇಜ್ರಿವಾಲ್ ಭಾನುವಾರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕೇಂದ್ರದಲ್ಲಿ ಆಡಳಿತ ನಡೆಸುವ ಪಕ್ಷವು ಶಿಕ್ಷಣವನ್ನು ನಾಶಪಡಿಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಗುಜರಾತ್ ಮಾದರಿಯಂತೆ ಇಡೀ ದೇಶದ ಜನರನ್ನು ಅನಕ್ಷರಸ್ಥರನ್ನಾಗಿಸಲು ಬಿಜೆಪಿ ಬಯಸುತ್ತದೆ ಎಂದು ಅವರು ಹೇಳಿದರು.
“ಇದು ಗುಜರಾತ್ ಮಾದರಿ. ಇದು ಬಿಜೆಪಿ ಮಾದರಿ, ಇದನ್ನು ಮೋದಿ ಸರ್ಕಾರ ದೇಶಾದ್ಯಂತ ಜಾರಿಗೆ ತರಲು ಬಯಸುತ್ತಿದೆ. ಇವರ ಡಬಲ್ ಎಂಜಿನ್ ಮಾದರಿ. ಇಡೀ ದೇಶವನ್ನು ಅನಕ್ಷರಸ್ಥರನ್ನಾಗಿ ಮಾಡಲು ಬಯಸುತ್ತಿದೆ. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಶಿಕ್ಷಣ ವ್ಯವಸ್ಥೆ ನಾಶವಾಗದ ಒಂದೇ ಒಂದು ರಾಜ್ಯವನ್ನು ಹೆಸರಿಸಿ” ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದರು.
ಬಿಜೆಪಿ ಸರ್ಕಾರ ದೆಹಲಿಯನ್ನೂ ನಾಶಪಡಿಸುತ್ತಿದೆ ಎಂದು ಅವರು ಹೇಳಿದರು.