ಬೆಂಗಳೂರು: ನಗರದಲ್ಲಿ ಇದೇ ನವೆಂಬರ್ 2, 3 ಹಾಗೂ 4 ರಂದು ಮೂರು ದಿನಗಳ ಕಾಲ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ(Global Investors Meet) ನಡೆಯಲಿದ್ದು, ಸಮಾವೇಶದಲ್ಲಿ ಜನಗತ್ತಿನ ಹಾಗೂ ದೇಶದ ವಿವಿಧ ಕಡೆಗಳಿಂದ ಬಂಡವಾಳ ಹೂಡಿಕೆದಾರರು ಆಗಮಿಸುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಸ್ವಚ್ಛತೆ ಹಾಗೂ ಸುಂದರೀಕರಣಕ್ಕೆ ಹೆಚ್ಚಿನ ಒತ್ತು ನೀಡುವಂತೆ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಆಡಳಿತಗಾರರಾದ ಶ್ರೀ ರಾಕೇಶ್ ಸಿಂಗ್ ರವರ ನಿರ್ದೇಶಿಸಿರುತ್ತಾರೆ. ಅದರಂತೆ ಪಾಲಿಕೆಯ 8 ವಲಯಗಳಲ್ಲೂ ವಲಯ ಆಯುಕ್ತರುಗಳ ನೇತೃತ್ವದಲ್ಲಿ ತೀವ್ರ ಸ್ವಚ್ಛತಾ ಅಭಿಯಾನ ವನ್ನು ಹಮ್ಮಿಕೊಳ್ಳಲಾಗಿದೆ.
ನಗರದಾದ್ಯಂತ ರಸ್ತೆಗಳ ಡಾಂಬರೀಕರಣ, ರಸ್ತೆ ಗುಂಡಿಗಳನ್ನು ಮುಚ್ಚುವುದು, ಪಾದಚಾರಿ ಮಾರ್ಗಗಳ ಅಭಿವೃದ್ಧಿ, ರಸ್ತೆ ಬದಿ ಬಿದ್ದಿರುವ ತ್ಯಾಜ್ಯ/ಕಟ್ಟಡ ಭಗ್ನಾವಶೇಷಗಳ ತೆರವುಗೊಳಿಸುವುದು, ರಸ್ತೆ ಬದಿಯಿರುವ ಮರಗಳ ಕೊಂಬೆಗಳನ್ನು ಕಟಾವು ಮಾಡುವುದು, ಫ್ಲೆಕ್ಸ್ಗಳ ತೆರವು, ಬಿದಿ ದೀಪಗಳನ್ನು ಸರಿಡಿಸುವುದು, ಪ್ರಮುಖ ರಸ್ತೆ ಗಳಾದ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ಬರುವ ಮೀಡಿಯನ್ ಗಳ ಅಭಿವೃದ್ಧಿ ಹಾಗೂ ಸುಂದರ ಸಸಿಗಳನ್ನು ನೆಡಲಾಗುತ್ತಿದೆ.
ಮುಖ್ಯ ಆಯುಕ್ತರಿಂದ ಇಂದು ಮುಂಜಾನೆ ವಿವಿಧ ಸ್ಥಳಗಳ ಪರಿಶೀಲನೆ:
ಬಿಬಿಎಂಪಿಯ 8 ವಲಯ ಆಯುಕ್ತರುಗಳ ನೇತೃತ್ವದಲ್ಲಿ ತೀವ್ರ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಪ್ರತಿದಿನ ನಿಗದಿತ ಸ್ಥಳಗಳನ್ನು ಗುರುತಿಸಿಕೊಂಡು ತೀವ್ರ ಸ್ವಚ್ಛತಾ ಅಭಿಯಾನವನ್ನು ನಡೆಸಲಾಗುತ್ತಿದೆ. ಈ ಪೈಕಿ ನಗರದ ಪೂರ್ವ ವಲಯದ ಹೆಬ್ಬಾಳ ರಸ್ತೆ, ಮೇಕ್ರಿ ವೃತ್ತ, ಜಯಮಹಲ್ ರಸ್ತೆ, ದಕ್ಷಿಣ ವಲಯದ ಬನಶಂಕರಿ ವೃತ್ತ, ಕನಕಪುರ ರಸ್ತೆ, ಬೊಮ್ಮನಹಳ್ಳಿ ವಲಯದ ಕನಕಪುರ ಮುಖ್ಯ ರಸ್ತೆ, ಚುಚ್ಚನಘಟ್ಟ ಮುಖ್ಯ ರಸ್ತೆ ಹಾಗೂ ಕೋಣನಕುಂಟೆ ರಸ್ತೆಯ ವಿವಿಧ ಸ್ಥಳಗಳಿಗೆ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮೇಲಿನ ಸ್ಥಳಗಳಿಗೆ ಅನಿರೀಕ್ಷಿತ ಭೇಟಿ ನೀಡಿ ರಸ್ತೆ ಡಾಂಬರೀಕರಣ, ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ, ಪಾದಚಾರಿ ಮಾರ್ಗ ಅಭಿವೃದ್ಧಿ ಹಾಗೂ ರಸ್ತೆ ಬದಿಯ ಚರಂಡಿಗಳ ಸ್ವಚ್ಛತೆ ಮಾಡಲು ನಿರ್ದೇಶನ ನೀಡಿದರು.

ಆಯಾ ವಲಯ ವ್ಯಾಪ್ತಿಯ ವಲಯ ಆಯುಕ್ತರು ವಲಯದ ತಂಡದ ಜೊತೆ ಪ್ರತಿನಿತ್ಯ ಬೇರೆ ಬೇರೆ ಸ್ಥಳಗಳಿಗೆ ಭೇಟಿ ನೀಡಿ ಸ್ಥಳೀಯ ಸಮಸ್ಯೆಗಳನ್ನು ಗುರುತಿಸಿ ಬಗೆಹರಿಸಬೇಕು. ಜೊತೆಗೆ ಬೆಸ್ಕಾಂ, ಜಲಮಂಡಳಿ ಸೇರಿದಂತೆ ಇನ್ನಿತರೆ ಇಲಾಖೆಗಳು ರಸ್ತೆಗಳನ್ನು ಹಗೆದಿರುವ ಕಡೆ ಪಾಲಿಕೆ ಅಧಿಕಾರಿಗಳು ಸಮನ್ವಯ ಮಾಡಿಕೊಂಡು ಕೂಡಲೆ ದುರಸ್ತಿಪಡಿಸುವ ಕೆಲಸ ಮಾಡಲು ಸೂಚನೆ ನೀಡಿದರು.
ಮೀಡಿಯನ್ ಗಳ ಅಭಿವೃದ್ಧಿ:
ಪಾಲಿಕೆ ತೋಟಗಾರಿಕೆ ವಿಭಾಗದಿಂದ ನಗರದ ಪ್ರಮುಖ ರಸ್ತೆ ಗಳಾದ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ಬರುವ ಮೀಡಿಯನ್ ಗಳ ಅಭಿವೃದ್ಧಿ ಹಾಗೂ ಸುಂದರ ಸಸಿಗಳನ್ನು ನಡೆಲಾಗುತ್ತಿದೆ. ಅದರಂತೆ ಬಳ್ಳಾರಿ ರಸ್ತೆ, ಸಿ.ವಿ ರಾಮನ್ ರಸ್ತೆ, ಭಾಷ್ಯಂ ವೃತ್ತ ರಸ್ತೆ, ವೆಸ್ಟ್ ಆಫ್ ಕಾರ್ಡ್ ರಸ್ತೆ ಮೇಲುಸೇತುವೆ, ಜಯನಗರ ಮುಖ್ಯ ರಸ್ತೆ, ಪ್ಯಾಲೆಸ್ ರಸ್ತೆ, ರಾಜಾಜಿನಗರ ಮೇಲುಸೇತುವೆ, ಸುಭೇದಾರ್ ಚತ್ರಂ ರಸ್ತೆ, ಮೆಜೆಸ್ಟಿಕ್ ರಸ್ತೆ, ಕೆ.ಆರ್.ರಸ್ತೆ, ಮೈಸೂರು ಬ್ಯಾಂಕ್ ರಸ್ತೆ, ಜೆ.ಪಿ ನಗರ ರಸ್ತೆ, ಗೊರಗುಂಟೆಪಾಳ್ಯ ರಸ್ತೆ, ಜಕ್ಕೂರು ರಸ್ತೆ, ಜಿಕೆವಿಕೆ ರಸ್ತೆ, ಹೆಬ್ಬಾಳ-ಬಿಇಎಲ್ ರಸ್ತೆ, ಎಂಎಸ್ ಪಾಳ್ಯ ರಸ್ತೆ, ದೊಡ್ಡಬಳ್ಳಾಪುರ ಮಾರ್ಗದ ರಸ್ತೆ ಮಿಡಿಯನ್ ಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಮಹದೇವಪುರ ವಲಯ:
ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಇಂದು ಕೆ.ಆರ್.ಪುರ ರೈಲ್ವೆ ಜಂಕ್ಷನ್(ಟಿನ್ ಪ್ಯಾಕ್ಟರಿ ಜಂಕ್ಷನ್), ಮಹದೇವಪುರ ಮುಖ್ಯ ರಸ್ತೆ(ಫಿನಿಕ್ಸ್ ಮಾಲ್ ಮಾರ್ಗ), ಮಹದೇವಪುರ ಪೊಲೀಸ್ ಠಾಣೆ ರಸ್ತೆ, ವಿಆರ್ ಮಾಲ್ನಿಂದ ಐಟಿಪಿಎಲ್ ಮುಖ್ಯ ರಸ್ತೆ ಮೂಲಕ ಒ-ಫಾರ್ಮ್ ಜಂಕ್ಷನ್ ವರೆಗೆ ಪರಿಶೀಲನೆ ನಡೆಸಲಾಯಿತು.
ರಾಜರಾಜೇಶ್ವರಿ ನಗರ ವಲಯ:
ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯಲ್ಲಿ ಇಂದು ನಮ್ಮೂರ ತಿಂಡಿ ರಸ್ತೆ, ಅಂಬೇಡ್ಕರ್ ಕಾಲೇಜು ರಸ್ತೆ, ದೀಪ ಕಾಂಫ್ಲೆಕ್ಸ್ ರಸ್ತೆ, ಕೊಮ್ಮಗಟ್ಟ ರಸ್ತೆ, ಕೆಂಗೇರಿ ರೈಲ್ವೆ ನಿಲ್ದಾಣದ ಪಾರ್ಯಯ ರಸ್ತೆ ಮೂಲಕ ಮೈಸೂರು ರಸ್ತೆಯವರೆಗೆ ಪರಿಶೀಲನೆ ನಡೆಸಲಾಯಿತು.
ಬೊಮ್ಮನಹಳ್ಳಿ ವಲಯ:
ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ಆರ್.ಬಿ.ಐ ಲೇಔಟ್ ಚುಂಚಘಟ್ಟ ಮುಖ್ಯ ರಸ್ತೆ, ಕೋಣನಕುಂಟೆ, ಉತ್ತರಹಳ್ಳಿ ಮುಖ್ಯ ರಸ್ತೆ, ಕನಕಪುರ ರಸ್ತೆ, ವಸಂತಪುರ ವಾರ್ಡ್ ಮೂಲಕ ಉತ್ತರಹಳ್ಳಿ ವಾರ್ಡ್ ವರೆಗೆ ಪರಿಶೀಲನೆ ನಡೆಸಲಾಯಿತು.
ದಾಸರಹಳ್ಳಿ ವಲಯ:
ದಾಸರಹಲ್ಳಿ ವಲಯ ವ್ಯಾಪ್ತಿಯಲ್ಲಿ ಹೆಸರಗಟ್ಟ ಮುಖ್ಯ ರಸ್ತೆ, 8ನೇ ಮೈಲು ತುಮಕೂರು ರಸ್ತೆ, ರುಕ್ಮಿನಿ ನಗರ, ನಾಗಸಂದ್ರ ವೃತ್ತ(ನೆಲಗದರನಹಳ್ಳಿ), ಮಾರುತಿ ಲೇಔಟ್(ಚೊಕ್ಕಚಂದ್ರ), ಡೈನಮೈಟಿಕ್ ಫ್ಯಾಕ್ಟರಿ ರಸ್ತೆ, ಎಬಿಬಿ ರಸ್ತೆ, ಎನ್.ಟಿ.ಟಿ.ಎಫ್ ವೃತ್ತ, 14ನೇ ಕ್ರಾಸ್ ಪೀಣ್ಯ 2ನೇ ಹಂತ, ಪೀಣ್ಯ ಉಪ ನೋಂದಣಿ ಕಛೇರಿ, ಪೀಣ್ಯ 2ನೇ ಹಂತ ಬಸ್ ನಿಲ್ದಾಣ, ಹೆಗ್ಗನಹಳ್ಳಿ ಕ್ರಾಸ್, ಪೈಪ್ ಲೈನ್ ರಸ್ತೆ ಹಾಗೂ ಸುಂಕದಕಟ್ಟೆ ರಸ್ತೆಯ ಮೂಲಕ ವಿವಿಧ ಸಮಸ್ಯೆಗಳ ಖುದ್ದು ಪರಿಶೀಲನೆ ನಡೆಸಲಾಯಿತು.
ಪೂರ್ವ ವಲಯ:
ಪೂರ್ವ ವಲಯ ವ್ಯಾಪ್ತಿಯಲ್ಲಿ ಮೇಕ್ರಿ ವೃತ್ತ, ಆರ್.ಟಿ ನಗರ ಮುಖ್ಯ ರಸ್ತೆ, ಜೆಸಿ ನಗರ ಪೊಲೀಸ್ ಠಾಣೆ, ಕಂಟೋನ್ಮೆAಟ್ ರೈಲ್ವೆ ಬ್ರಿಡ್ಜ್ ರಸ್ತೆ, ಕ್ವೀನ್ಸ್ ರಸ್ತೆ, ಬಾಳೆಕುಂದ್ರಿ ರಸ್ತೆ(ಇಂಡಿಯನ್ ಎಕ್ಸ್ಫ್ರೆಸ್), ಕಬ್ಬನ್ ರಸ್ತೆ ಮೂಲಕ ವಿವಿಧ ರಸ್ತೆಗಳ ಪರಿಶೀಲನೆ ನಡೆಸಲಾಯಿತು.
ಯಲಹಂಕ ವಲಯ:
ಯಲಹಂಕ ವಲಯ ವ್ಯಾಪ್ತಿಯಲ್ಲಿ ಗೋದ್ರೇಜ್ ಅಪಾರ್ಟ್ಮ್ಂಟ್(ಬಳ್ಳಾರಿ ರಸ್ತೆ), ಭುವನೇಶ್ವರಿ ನಗರ, ರಾಚೇನಹಳ್ಳಿ ಕೆರೆ ರಸ್ತೆ, ಜೆಎನ್ಸಿ ವೃತ್ತ, ಅಮೃತಹಳ್ಳಿ ಮುಖ್ಯ ರಸ್ತೆ ಮೂಲಕ ವಿವಿಧ ರಸ್ತೆಗಳ ಪರಿಶೀಲನೆ ನಡೆಸಲಾಯಿತು.
ದಕ್ಷಿಣ ವಲಯ:
ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಹೊರವರ್ತುಲ ರಸ್ತೆಯ ಮುತ್ತುರಾಜ್ ಕೆಳಸೇತುವೆ, ಸೀತಾ ವೃತ್ತ, ವಿದ್ಯಾಪೀಠ ವೃತ್ತ ರಸ್ತೆ ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.
ಪಶ್ಚಿಮ ವಲಯ:
ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಮಲ್ಲೇಶ್ವರ ರಸ್ತೆ, ಸುಬ್ರಮಣ್ಯಪುರಂ ರಸ್ತೆ, 17ನೇ ಕ್ರಾಸ್ ಮಲ್ಲೇಶ್ವರಂ, ಮಹಾಲಕ್ಷ್ಮೀ ಲೇಔಟ್ ಪೈಪ್ಲೈನ್ ರಸ್ತೆ, ಕುರುಬರಹಳ್ಳಿ ವೃತ್ತ, ರಾಜಾಜಿನಗರ ರಸ್ತೆ, ತಿಮ್ಮಯ್ಯ ರಸ್ತೆ, ಮೋದಿ ಆಸ್ಪತ್ರೆ ರಸ್ತೆ, ಬಸವೇಶ್ವರ ನಗರ ಮುಖ್ಯ ರಸ್ತೆ, ಗೋವಿಂದರಾಜನಗರ ರಸ್ತೆ, ಮಾಗಡಿ ರಸ್ತೆ, ಹೌಸಿಂಗ್ ಬೋರ್ಡ್ ಬಸ್ ನಿಲ್ದಾಣ, ಕಾಮಾಕ್ಷಿ ಪಾಳ್ಯ ರಸ್ತೆ, ಗಾಂಧಿನಗರ ರಸ್ತೆ, ಬೇಲಿ ಮರ ರಸ್ತೆ, ಬಿನ್ನಿ ಮಿಲ್ ಟ್ಯಾಂಕ್ ರಸ್ತೆ, ಚಾಮರಾಜಪೇಟೆ ರಸ್ತೆ ಮೂಲಕ ವಿವಿಧ ರಸ್ತೆಗಳ ಪರಿಶೀಲನೆ ನಡೆಸಲಾಯಿತು.