ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರವು ಮೂರು ವರ್ಷದ ಆಡಳಿತದ ಕುರಿತು ಜನರಿಗೆ ತಿಳಿಸುವ ಸಲುವಾಗಿ ಆಯೋಜಿಸಲಾಗಿದ್ದ ʼಜನಸ್ಪಂದನʼ ಸಮಾವೇಶದಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ಅವರು ದೇಶ ಒಡೆದವರಿಂದ ʼಭಾರತ್ ಜೋಡೋ ಯಾತ್ರೆʼ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಏಕತಾ ಪ್ರತಿಮೆಗೆ ದೇಶವೇ ವಂದಿಸಿದೆ. ಆದರೆ ರಾಹುಲ್ ಗಾಂಧಿ ಕಾಂಗ್ರೆಸ್ ಬ್ಯಾನರ್ನಿಂದಲೇ ಪಟೇಲ್ ಅವರ ಫೋಟೋವನ್ನು ಮಾಯವಾಗಿಸಿದ್ದಾರೆ. ದೇಶವನ್ನು ಒಡೆದವರೆಲ್ಲ ಸೇರಿ ಭಾರತ್ ಜೋಡೋ ಯಾತ್ರೆ ಆರಂಭಿಸಿದ್ದಾರೆ. ಇದು ರಾಹುಲ್ ಗಾಂಧಿಯ ಕಪಟ ನಾಟಕವಲ್ಲವೇ ? ಎಂದು ಭಾರತ್ ಜೋಡೋ ಯಾತ್ರೆ ಕುರಿತು ಸ್ಮೃತಿ ಇರಾನಿ ವ್ಯಂಗಿಸಿದ್ದಾರೆ.