ಬೆಂಗಳೂರು: ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ನಡೆಯುತ್ತಿದ್ದು, ಕಾಂಗ್ರೆಸ್ ನಾಯಕ ಕನ್ಹಯ್ಯ ಕುಮಾರ್ ಯಾತ್ರೆಯಲ್ಲಿ ಪಾಲ್ಗೋಂಡಿರುವುದರಿಂದ, ಯಾತ್ರೆಯಲ್ಲಿ ದೇಶದ್ರೋಹಿಗಳು ಜೊತೆಗೂಡಿದ್ದಾರೆ ಎಂದು ಬಿಜೆಪಿ ಕಟುವಾಗಿ ಟೀಕಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, ಭಾರತ್ ಜೋಡೋ ಯಾತ್ರೆಯಲ್ಲಿ ದೇಶ ವಿರೋಧಿ ಶಕ್ತಿಗಳು ಜೊತೆಯಾಗಿವೆ. ಭಾರತವನ್ನು ತುಂಡು ಮಾಡುತ್ತೇವೆ ಎಂದು ಸಂಕಲ್ಪ ತೊಟ್ಟಿರುವ ಕನ್ಹಯ್ಯ , ರಾಹುಲ್ ಗಾಂಧಿ ಅವರ ಯಾತ್ರೆಯಲ್ಲಿ ಸಾಗುತ್ತಿದ್ದಾನೆ. ಇದು ಭಾರತ್ ಜೋಡೋ ಯಾತ್ರೆಯೋ ಅಥವಾ ದೇಶದ್ರೋಹಿಗಳ ಯಾತ್ರೆಯೋ? ಎಂದು ವ್ಯಂಗಿಸಿದೆ.