Friday, June 20, 2025

ಸತ್ಯ | ನ್ಯಾಯ |ಧರ್ಮ

ಭಾರತ ಐಕ್ಯತಾ ಯಾತ್ರೆ: ಪೇಸಿಎಂ ಟೀಶರ್ಟ್ ಬಿಚ್ಚಿಸಿದ ಪೋಲೀಸರು

ಬೆಂಗಳೂರು: ಭಾರತ ಐಕ್ಯತಾ ಯಾತ್ರೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತನು ಧರಿಸಿದ್ದ ಪೇಸಿಎಂ ಟೀಶರ್ಟ್‌ ಅನ್ನು ಪೋಲೀಸರು ಬಲವಂತವಾಗಿ ಬಿಚ್ಚಿಸಿದ್ದಾರೆ.

ರಾಜ್ಯದಲ್ಲಿ ಶುಕ್ರವಾರದಂದು ನಡೆದ ಭಾರತ ಐಕ್ಯತಾ ಯಾತ್ರೆಯಲ್ಲಿ ಸಿಂಧಗಿಯ ಕಾಂಗ್ರೆಸ್‌ ಕಾರ್ಯಕರ್ತರಾದ ಅಕ್ಷಯ್‌ ಎಂಬುವವ ಪೇಸಿಎಂ ಟೀಶರ್ಟ್‌ ಧರಿಸಿ ಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದ. ಈ ವೇಳೆ ಯುವಕನನ್ನು ನೋಡಿದ ಪೋಲೀಸರು ಅವನಿಗೆ ಟೀಶರ್ಟ್‌ ತೆಗೆಯುವಂತೆ ಹೇಳಿದ್ದಾರೆ. ಇದನ್ನು ಒಪ್ಪದ ಅಕ್ಟಯ್‌ ಗೆ ಪೋಲೀಸರು ಥಳಿಸಿದ್ದು, ಅವನು ಧರಿಸಿದ್ದ ಪೇಸಿಎಂ ಟೀಶರ್ಟ್‌ ಬಿಚ್ಚಿಸಿ ಪೇಸಿಎಂ ಬಾವುಟವನ್ನು ಕೈಯಲ್ಲಿದ್ದ ಬಾವುಟವನ್ನು ಕಿತ್ತುಕೊಂಡಿದ್ದಾರೆ.

ಸಿಂಧಗಿಯ ಅಕ್ಷಯ್‌ ಎಂಬ ಯುವಕ ಬಿಜೆಪಿಯ 40% ಕಮೀಷನ್‌ ಸರ್ಕಾರದ ವಿರುದ್ದ ಪೇಸಿಎಂ ಟೀಶರ್ಟ್‌ ಧರಿಸಿ, ಬಾವುಟವನ್ನು ಹಿಡಿದು ರಾಹುಲ್‌ ಗಾಂಧಿಯವರ ಭಾರತ ಐಕ್ಯತಾ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾನೆ. ಈ ವೇಳೆ ಟೀ ಶರ್ಟ್‌ ಬಿಚ್ಚಿಸಿದ ಘಟನೆ ನಡೆದಿದೆ.

🔸ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ನೋಡಿ: ಚಿಟ್ಟೆ ಎಂಬ ಏಕವ್ಯಕ್ತಿ ಪ್ರದರ್ಶನದ ನಾಟಕದ ಮೂಲಕ ಹೆಸರುವಾಸಿಯಾಗಿರುವ ಗೋಕುಲ್‌ ಸಹೃದಯ್‌ ದೇಶಾದ್ಯಂತ ತಮ್ಮ ನಾಟಕದ ಶೋಗಳನ್ನು ನೀಡಿದ್ದಾರೆ. ಖ್ಯಾತ ನಾಟಕಕಾರ ಬೇಲೂರು ರಘುನಂದನ್‌ ಅವರ ಮಗ ಗೋಕುಲ್‌ ಚಿಟ್ಟೆ ಜೊತೆಗಿನ ತಮ್ಮ ಪಯಣವನ್ನು ಇಲ್ಲಿ ಹರವಿಟ್ಟಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page