ಬೆಂಗಳೂರು: ಭಾರತ ಐಕ್ಯತಾ ಯಾತ್ರೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನು ಧರಿಸಿದ್ದ ಪೇಸಿಎಂ ಟೀಶರ್ಟ್ ಅನ್ನು ಪೋಲೀಸರು ಬಲವಂತವಾಗಿ ಬಿಚ್ಚಿಸಿದ್ದಾರೆ.
ರಾಜ್ಯದಲ್ಲಿ ಶುಕ್ರವಾರದಂದು ನಡೆದ ಭಾರತ ಐಕ್ಯತಾ ಯಾತ್ರೆಯಲ್ಲಿ ಸಿಂಧಗಿಯ ಕಾಂಗ್ರೆಸ್ ಕಾರ್ಯಕರ್ತರಾದ ಅಕ್ಷಯ್ ಎಂಬುವವ ಪೇಸಿಎಂ ಟೀಶರ್ಟ್ ಧರಿಸಿ ಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದ. ಈ ವೇಳೆ ಯುವಕನನ್ನು ನೋಡಿದ ಪೋಲೀಸರು ಅವನಿಗೆ ಟೀಶರ್ಟ್ ತೆಗೆಯುವಂತೆ ಹೇಳಿದ್ದಾರೆ. ಇದನ್ನು ಒಪ್ಪದ ಅಕ್ಟಯ್ ಗೆ ಪೋಲೀಸರು ಥಳಿಸಿದ್ದು, ಅವನು ಧರಿಸಿದ್ದ ಪೇಸಿಎಂ ಟೀಶರ್ಟ್ ಬಿಚ್ಚಿಸಿ ಪೇಸಿಎಂ ಬಾವುಟವನ್ನು ಕೈಯಲ್ಲಿದ್ದ ಬಾವುಟವನ್ನು ಕಿತ್ತುಕೊಂಡಿದ್ದಾರೆ.
ಸಿಂಧಗಿಯ ಅಕ್ಷಯ್ ಎಂಬ ಯುವಕ ಬಿಜೆಪಿಯ 40% ಕಮೀಷನ್ ಸರ್ಕಾರದ ವಿರುದ್ದ ಪೇಸಿಎಂ ಟೀಶರ್ಟ್ ಧರಿಸಿ, ಬಾವುಟವನ್ನು ಹಿಡಿದು ರಾಹುಲ್ ಗಾಂಧಿಯವರ ಭಾರತ ಐಕ್ಯತಾ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾನೆ. ಈ ವೇಳೆ ಟೀ ಶರ್ಟ್ ಬಿಚ್ಚಿಸಿದ ಘಟನೆ ನಡೆದಿದೆ.
🔸ಪೀಪಲ್ ಗ್ರೂಪ್ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo
ಇದನ್ನೂ ನೋಡಿ: ಚಿಟ್ಟೆ ಎಂಬ ಏಕವ್ಯಕ್ತಿ ಪ್ರದರ್ಶನದ ನಾಟಕದ ಮೂಲಕ ಹೆಸರುವಾಸಿಯಾಗಿರುವ ಗೋಕುಲ್ ಸಹೃದಯ್ ದೇಶಾದ್ಯಂತ ತಮ್ಮ ನಾಟಕದ ಶೋಗಳನ್ನು ನೀಡಿದ್ದಾರೆ. ಖ್ಯಾತ ನಾಟಕಕಾರ ಬೇಲೂರು ರಘುನಂದನ್ ಅವರ ಮಗ ಗೋಕುಲ್ ಚಿಟ್ಟೆ ಜೊತೆಗಿನ ತಮ್ಮ ಪಯಣವನ್ನು ಇಲ್ಲಿ ಹರವಿಟ್ಟಿದ್ದಾರೆ.