ನಯನತಾರ ಅಭಿನಯದ ಅನ್ನಪೂರ್ಣಿ ಚಿತ್ರವು ಹೆಣ್ಣು ಮಕ್ಕಳ ವೃತ್ತಿ ಶಿಕ್ಷಣ ಆಯ್ಕೆಯಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಜೀವತುಂಬಿರುವ ಚಿತ್ರ.ಚಿತ್ರದಲ್ಲಿ ನಾಯಕಿಯ ತಂದೆ, ಎಂಜಿನಿಯರಿಂಗ್ ಪದವಿ ಪಡೆದ ದೇವಾಸ್ಥಾನದ ವೃತ್ತಿ ಆಯ್ಕೆ, ಹಾಡುಗಾರ್ತಿಯಾಗಬೇಕಿದ್ದ ನಾಯಕಿಯ ಅಜ್ಜಿಯ ಕನಸು,ಮತ್ತು ಪ್ರಸಿದ್ದ ಬಾಣಸಿಗನ ಮಗ ಉತ್ತಮ ಬಾಣಸಿನಾಗಲು ಸೋಲುವುದು,ಸಣ್ಣ ವಯಸ್ಸಿನಿಂದಲೇ ಅಡುಗೆಯನ್ನು ಧ್ಯಾನದಂತೆ ಕಲಿಯುವ ತಂದೆ ಮತ್ತು ಮಗಳು, ಚಲನಚಿತ್ರದ ಕಡೆಯಲ್ಲಿ ನಾಯಕಿಯಿಂದ ಪ್ರೇರಣೆಗೊಂಡು,ಅನೇಕ ಯುವತಿಯರು ಹೋಟೆಲ್ ಮ್ಯಾನೇಜ್ ಮೆಂಟ್ ಕಾಲೇಜಿಗೆ ಸೇರಿ ಆಹಾರ ತಯಾರಿಕೆಯಲ್ಲಿ ಆವಿಷ್ಕಾರ ಮಾಡುವದು ಚನಲಚಿತ್ರದ ಕಥಾಹಂದರವಾಗಿದೆ.
ಚಿತ್ರಕಥೆಗೆ ತಿರುವು ಸಿಗುವುದು, ನಾಯಕಿಯ ಮುಸ್ಲಿಂ ಸ್ನೇಹಿತನ ಮಾತುಗಳಿಂದ, ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿ ,ಬೆಸ್ಟ್ ಶೆಫ್ ಆಗುವ ಸಲುವಾಗಿ ಮಾಂಸಾಹರವನ್ನು ಬೇಯಿಸುವುದು ಸಾದ್ಯವಿಲ್ಲ ಎಂದ ನಾಯಕಿಗೆ,ಸ್ಪೂರ್ತಿ ತುಂಬಲು ಶ್ರೀ ರಾಮನೇ ವನವಾಸದಲ್ಲಿ ಅನಿವಾರ್ಯವಾಗಿ ಮಾಂಸಾಹಾರ ಸೇವಿಸಬೇಕಾಗಿ ಬಂದಿತು,ಒಮ್ಮೆ ಯೋಚಿಸು ಎಂದಿರುವುದು, ಕೆಲವು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ವಿಪರ್ಯಾಸವೆಂದರೆ ಬೆಸ್ಟ್ ಶೆಫ್ ವೃತ್ತಿ ಆರಿಸಿಕೊಂಡ ಬ್ರಾಹ್ಮಣ ಕುಟುಂಬದ ನಾಯಕಿ ತಾನು ಮಾಡುವ ಖಾಧ್ಯವು ಪರ್ಫೆಕ್ಟ್ ರುಚಿ ಹೊಂದಿರಬೇಕು ಎಂದು ತಿಳಿದುಕೊಳ್ಳಲು ಮಾಂಸಾಹಾರ ಸೇವಿಸಿರುವುದು, ಕೆಲವು ಹಿಂದೂ ಸಂಘಟನೆಗಳ ಕೋಪಕ್ಕೆ ಕಾರಣವಾಗಿ ನಾಯಕಿಯ ಮೇಲೆ FIR ದಾಖಲಾಗಿದೆ. ಅನ್ನಪೂರ್ಣಿ ಚಿತ್ರವು ಹಿಂದೂ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಬಲಪಂಥೀಯ ಗುಂಪುಗಳ ಪ್ರತಿಭಟನೆ ನಂತರ ಡಿಸೆಂಬರ್ 1 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಚಿತ್ರವು ಡಿಸೆಂಬರ್ 29 ರಿಂದ ನೆಟ್ ಫ್ಲಿಕ್ಸ್ ನಲ್ಲಿ ಬಹುಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗಿದ್ದನ್ನು ಈಗ ಹಿಂತೆಗೆದುಕೊಳ್ಳಲಾಗಿದೆ.
ಈ ಶತಮಾನದಲ್ಲೂ ಕೂಡ ದೇವಸ್ಥಾನದಲ್ಲಿ ಅಡುಗೆಯನ್ನು ಮಾಡುವ ಬ್ರಾಹ್ಮಣ ಧರ್ಮದ ಮಗಳು ದೇಶದ ಅತ್ಯುತ್ತಮ ಬಾಣಸಿಗಳಾಗಬೇಕೆಂದು ಕನಸು ಕಾಣುತ್ತಾಳೆ ಮತ್ತು ತನ್ನ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಮಾಂಸಾಹಾರಿ ಆಹಾರವನ್ನು ಮಾಡಲು ಕಲಿಯುತ್ತಾಳೆ ಎಂಬುದನ್ನು ಅಪರಾಧವೆನ್ನುವಂತೆ ಭಾವಿಸಿರುವುದು,ಭಾರತದಲ್ಲಿ ಹೆಣ್ಣು ಮಕ್ಕಳ ವೃತ್ತಿಯ ಆಯ್ಕೆಯು ನಿರ್ಬಂಧಕ್ಕೊಳಪಡುವುದು ಆತಂಕಕಾರಿ ವಿಷಯ.
ಉತ್ತಮ ಬಾಣಸಿಗರ ಆಯ್ಕೆ ಪಂದ್ಯದಲ್ಲಿ ನಾಯಕಿಯು Food is an art ಎನ್ನುವಂತೆ ಸಸ್ಯಾಹಾರಿ ಖಾದ್ಯವನ್ನು ತನ್ನ ತಂದೆ ಹೇಳಿಕೊಟ್ಟ ಕ್ರಮವನ್ನು ಧ್ಯಾನದಂತೆ ಧ್ಯಾನಿಸಿ ಮಾಡುತ್ತಾಳೆ,ಅದೇ ಮಾಂಸಾಹಾರ ಖಾದ್ಯ ತಯಾರಿಸುವಾಗ ತನ್ನ ಮುಸ್ಲಿಂ ಗೆಳೆಯನ ತಾಯಿ ಶ್ರಧ್ದೆಯಿಂದ ನಮಾಜ್ ಮಾಡುವುದನ್ನು ಧ್ಯಾನಿಸಿಕೊಂಡು ಅತ್ಯುತ್ತಮ ರುಚಿಕರ ಬಿರಿಯಾನಿ ತಯಾರಿಸಿ ಪ್ರಶಂಸೆ ಪಡೆಯುತ್ತಾಳೆ. ಇಲ್ಲಿ “Biriyaani is an emotion” ಅಷ್ಟೇ..
ಆದರೆ ಸಿನೆಮಾವನ್ನು ಸಿನೆಮಾವನ್ನಾಗಿ ನೋಡದೇ ನಾಯಕಿಗೆ ಬುರ್ಕಾ ತೊಡಿಸಿ ನಮಾಜ್ ಮಾಡಿಸಲಾಗಿದೆ ಬಲವಂತವಾಗಿ ಮಾಂಸಾಹಾರ ತಯಾರಿಸಲಾಗಿದೆ, ಇದು ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಎಂದು ಚಲನಚಿತ್ರ ಬರಹಗಾರರು ಮತ್ತು ನಿರ್ಮಾಪಕರ ಮೇಲೆ ಭಾರತೀಯ ದಂಡ ಸಂಹಿತೆಯ 3A ಅಡಿಯಲ್ಲಿ ಕೇಸು ದಾಖಲಿಸಿ ವಿಶ್ವ ಹಿಂದು ಪರಿಷತ್ ವಕ್ತಾರರು ಇದು “ಹಿಂದುಗಳ ವಿಜಯ” ಎಂದಿರುವುದು,ಚಲನಚಿತ್ರ ತಂಡವೂ ಆಯಾ ಸಮುದಾಯಗಳ ಭಾವನೆಗಳಿಗೆ ಉಂಟಾದ ಅನಾನುಕೂಲತೆಗಾಗಿ ನೋವುಂಟುಮಾಡಿದ್ದಕ್ಕಾಗಿ ಕ್ಷಮೆಯಾಚಿಸಿ,ಹಿಂದೂಗಳು ಮತ್ತು ಬ್ರಾಹ್ಮಣರ ಧಾರ್ಮಿಕ ಭಾವನೆಗಳಿಗೆ ನೋವನ್ನು ಉಂಟುಮಾಡುವ ಸಂಭಾಷಣೆಗಳು ಎಡಿಟ್ ಆಗುವವರೆಗೂ ನೆಟ್ ಫ್ಲಿಕ್ಸ್ ವೇದಿಕೆಯಿಂದ ಹೊರಬಿದ್ದಿರುವುದು ವಿಷಾದನೀಯ.
ನಮ್ಮ ಸಮಾಜ ಎತ್ತ ಸಾಗುತ್ತಿದೆ ಚಲನಚಿತ್ರಗಳಿಗೆ ನಿಷೇಧ ಹೇರುವ ಕಾಲಘಟ್ಟದಲ್ಲಿ ನಾವಿದ್ದೇವೆ ಎನ್ನುವುದು ಕಳವಳಕಾರಿಯಾಗಿದೆ.
ಇಂತಹ ಒಳ್ಳೆಯ ಚಿತ್ರಗಳು ಜನರಿಗೆ ತಲುಪಬೇಕಿದೆ ಈ ಎಲ್ಲಾ ಸಮಸ್ಯೆಗಳು ಬಗೆಹರಿದು ವಿ ಹೆಚ್ ಪಿ ಮತ್ತು ಚಿತ್ರತಂಡದ ನಡುವೆ ಮಾತುಕತೆಗಳ ಸಮನ್ವಯತೆ ಪ್ರಕ್ರಿಯೆಗಳು ಮುಗಿದು ಅನ್ನಪೂರ್ಣಿ ಮತ್ತೆ ನೆಟ್ ಫ್ಲಿಕ್ಸ್ ವೇದಿಕೆಯಲ್ಲಿ ಪ್ರದರ್ಶನಗೊಳ್ಳುವಂತಾಗಲಿ ಎಂದು ಆಶಿಸೋಣ.
ಮಮತಾ. ಆರ್