ಬೆಂಗಳೂರು: ಸ್ವಪಕ್ಷಿಯರಿಂದಲೇ ಆಕ್ರೋಶಕ್ಕೆ ಒಳಗಾಗುವಂತಹದ್ದು ‘ಬೊಮ್ಮಾಯಿ ಮಾಡೆಲ್’ ಅಡಳಿತ! ಎಂದು ಟ್ವಿಟರ್ ಮೂಲಕ ಕರ್ನಾಟಕ ಕಾಂಗ್ರೆಸ್ ಬೊಮ್ಮಾಯಿ ಸರ್ಕಾರವನ್ನು ಟೀಕಿಸಿದೆ.
ಸ್ವತಃ ಬಿಜೆಪಿಯ ಮಾಜಿ ಸಚಿವ ಸೊಗಡು ಶಿವಣ್ಣರವರು ಈ ಸರ್ಕಾರದ ಕಾನೂನು ಸುವ್ಯವಸ್ಥೆ ವೈಫಲ್ಯದ ಬಗ್ಗೆ. 40% ಕಮಿಷನ್ ಭ್ರಷ್ಟಾಚಾರದ ಬಗ್ಗೆ ಹಾಗೂ ಸ್ವಪಕ್ಷದ ಜನಪ್ರತಿನಿಧಿಗಳ ದುರಾಡಳಿತದ ಬಗ್ಗೆ ಆಡಿದ ಮಾತಿಗೆ ಕರ್ನಾಟಕ ಸರ್ಕಾರ ಏನು ಹೇಳುತ್ತದೆ? ಎಂದು ಕಾಂಗ್ರೆಸ್ ಪ್ರೆಶ್ನಿಸಿದೆ.