Home ರಾಜ್ಯ ಕರ್ನಾಟಕಕ್ಕೆ ಸೇರುವ ಗಡಿ ಕನ್ನಡಿಗರಿಗೆ ಮಹಾರಾಷ್ಟ್ರ ಸರ್ಕಾರದ ಬೆದರಿಕೆ

ಕರ್ನಾಟಕಕ್ಕೆ ಸೇರುವ ಗಡಿ ಕನ್ನಡಿಗರಿಗೆ ಮಹಾರಾಷ್ಟ್ರ ಸರ್ಕಾರದ ಬೆದರಿಕೆ

0

ಸೊಲ್ಲಾಪುರ : ಕರ್ನಾಟಕಕ್ಕೇ ಸೇರಬೇಕೆಂದು ನಿರ್ಧಾರ ಮಾಡಿರುವ ಗಡಿ ಕನ್ನಡಿಗರಿಗೆ ಮಹಾರಾಷ್ಟ್ರ ಸರ್ಕಾರದ ಕಡೆಯಿಂದ ಬೆದರಿಕೆ ಹಾಕಲಾಗುತ್ತಿದೆ.

ಹಲವು ವರ್ಷಗಳಿಂದ ಕರ್ನಾಟಕದಿಂದ ಕೊಂಚ ದೂರ ಇದ್ದರೂ, ಹಿಂದಿ , ಮರಾಠ ಹೇರಿಕೆ ನಡುವೆಯೂ ಕನ್ನಡವನ್ನೇ ಕನ್ನಡ ಭಾಷೆಯ ಮೇಲಿನ ಅಪಾರ ಗೌರವದಿಂದ ಕನ್ನಡವನ್ನೇ ಉಸಿರಾಗಿಸಿಕೊಂಡು ಬಂದಿರುವ ಅಕ್ಕಲಕೋಟೆ ಗಡಿ ಕನ್ನಡಿಗರಿಗೆ ಮಹಾರಾಷ್ಟ್ರ ಸರ್ಕಾರ ಭಯದ ವಾತಾವರಣ ಸೃಷ್ಟಿ ಮಾಡಿದೆ.

ತಾಲೂಕಿನ ಆಳಗೆ, ಆಳಗೆ, ಶೇಗಾಂವ, ಕಲ್ಲಕರ್ಜಾಳ, ಧಾರಸಂಗ, ಕೆಗಾಂವ, ದೇವಿಕವಟಾ, ಶಾವಳ, ಹಿಳ್ಳಿ, ಅಂದೇವಾಡಿ, ಪಾನ್‌ ಮಂಗರುಳ ಹಾಗೂ ಕೋರ್ಸೆಗಾಂವ ಗ್ರಾಮ ಪಂಚಾಯ್ತಿಯವರು ತಮ್ಮ ವ್ಯಾಪ್ತಿಯಲ್ಲಿ ಗ್ರಾಮ ಸಭೆ ನಡೆಸಿ ಕರ್ನಾಟಕ ಸೇರುತ್ತೇವೆಂದು ತಾವು ಅಂಗೀಕರಿಸಿರುವ ಠರಾವು ಪತ್ರ ಸಮೇತ ಸೊಲ್ಲಾಪುರ ಜಿಲ್ಲಾಧಿಕಾರಿಗಳಿಗೆ ಕೋರಿಕೆ ಪತ್ರವನ್ನು ಡಿಸೆಂಬರ್‌ 8ರಂದು ಸಲ್ಲಿಸಿದ್ದರು.

ಈಗಾಗಲೇ ಠರಾವು ಪಾಸು ಮಾಡಿದ್ದು, ಈ ಹಿನ್ನೆಲೆಯಲ್ಲಿ ಸೊಲ್ಲಾಪುರ ತಾಲ್ಲೂಕಿನ ಹನ್ನೊಂಡು ಗ್ರಾಮ ಪಂಚಾಯಿತಿಗಳನ್ನು ವಿಸರ್ಜನೆ ಮಾಡುವುದಾಗಿ ಅಲ್ಲಿನ ಅಕ್ಕಲಕೋಟೆ ಕನ್ನಡಿಗರಿಗೆ ಮಹಾರಾಷ್ಟ್ರ ಸರ್ಕಾರ ಬೆದರಿಸಿದೆ.

ಈ ನಿಟ್ಟಿನಲ್ಲಿ ಗಡಿ ಕನ್ನಡಿಗರು, ಗ್ರಾಮ ಪಂಚಾಯಿತಿಗಳು ಸೇರಿ ಸಭೆ ನಡೆಸಿದ್ದು, ಮಹರಾಷ್ಟ್ರ ಸರ್ಕಾರ ಹೊಡ್ಡುತ್ತಿರುವ ಬೆದರಿಕೆಯ ಬಗ್ಗೆ, ತಮಗಾಗುತ್ತಿರುವ ಅನ್ಯಾಯದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

You cannot copy content of this page

Exit mobile version