ಹಾಸನ : ಆರ್.ಟಿ.ಐ. ಅನುದಾನ ಬಿಡುಗಡೆ ಮಾಡಿ ಮತ್ತು ಆರು, ಏಳು, ಎಂಟನೇ ತರಗತಿಗೆ ಪ್ರಾರಂಭ ಮಾಡಲು ನಮಗೆ ಅನುಮತಿ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಥಮ ದರ್ಜೆ ಸಹಾಯಕನಿಗೆ 50 ಸಾವಿರ ಲಂಚ ನೀಡಿದ್ದರೂ ಅನುಮತಿ ಕೊಡುತ್ತಿಲ್ಲ ಎಂದು ಆರೋಪಿಸಿ ಕರ್ತವ್ಯದ ವೇಳೆ ಅಧಿಕಾರಿ ವಿರುದ್ಧ ಜೋರಾಗಿಯೇ ಮಾತನಾಡಿ ಆಕ್ರೋಶವ್ಯಕ್ತಪಡಿಸಿದರ ಘಟನೆ ಗುರುವಾರ ನಡೆದಿದೆ. ಇನ್ನು ಚುನಾವಣೆೆ ವೇಳೆ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಅಧಿಕಾರಿ ಮಂಜುನಾಥ್ ಮೊದಲೇ ಅಮಾನತ್ತು ಆಗಿದ್ದರೂ ಕರ್ತವ್ಯದಲ್ಲಿ ಇರುವುದು ಕೆಲ ಅನುಮಾನಕ್ಕೆ ಎಡೆ ಮಾಡಿದೆ.
ಅರಕಲಗೂಡಿನಲ್ಲಿರುವ ನ್ಯಾಷನಲ್ ಎರೋಡೈಡ್ ಹಿರಿಯ ಪ್ರಾಥಮಿಕ ಖಾಸಗೀ ಶಾಲೆಯ ಮುಖ್ಯಸ್ಥ ರಂಗಸ್ವಾಮಿಯು ಹಾಸನದ ಜಿಲ್ಲಾ ಡಿಡಿಪಿಐ ಕಛೇರಿಗೆ ಬಂದು ಕೆಲಸದ ವೇಳೆಯೆ ಅಧಿಕಾರಿ ಮಂಜುನಾಥ್ ಜೊತೆ ಕೆಲ ಸಮಯ ವಾಗ್ವಾದ ನಡೆಸಿದರು. ಕಳೆದ 22 ವರ್ಷದಿಂದ ಡಿಡಿಪಿಐ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಮಂಜುನಾಥ್ ಪತ್ರಕರ್ತರು ಪ್ರಶ್ನೆ ಮಾಡಿದಾಗ 10 ವರ್ಷದಿಂದ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಸುಳ್ಳು ಹೇಳಿದ ಪ್ರಸಂಗ ನಡೆಯಿತು. ಚುನಾವಣಾ ಪ್ರಚಾರ ಮಾಡಿದ್ದ ಆರೋಪದಲ್ಲಿ ಜಿಲ್ಲಾಧಿಕಾರಿಗಳು ಬಿ.ಎಚ್ ಮಂಜುನಾಥ. ರವರನ್ನು ಅಮಾನತು ಮಾಡಿರುತ್ತಾರೆ. ಜಿಲ್ಲಾಧಿಕಾರಿಗಳ ಆದೇಶದ ವಿರುದ್ಧ ಕೆಎಟಿಯಲ್ಲಿ ದಾವೆ ಕೋರಿ ದಾವೆ ಹೂಡಿರುತ್ತಾರೆ. ಕೆ ಎ ಟಿ ಯಲ್ಲಿ ಯಾವುದೇ ಆದೇಶ ಭಾರದ ಕಾರಣ ಹೈಕೋರ್ಟ್ ನಲ್ಲಿ ದಾವೆ ಹೂಡಿರುತ್ತಾರೆ. ಹೈಕೋರ್ಟ್ ಜಿಲ್ಲಾಧಿಕಾರಿಗಳು, ಹಾಸನ ರವರು ನೀಡಿರುವ ಅಮಾನತು ಆದೇಶಕ್ಕೆ ತಡೆಯಾಗಿ ನೀಡಿರುತ್ತದೆ.
ಸಂಬAಧಿಸಿದ ಪ್ರಾಧಿಕಾರಿಗಳಾದ ಜಿಲ್ಲಾಧಿಕಾರಿಗಳ ಅನುಮತಿ ಪಡೆಯದೇ ಕರ್ತವ್ಯಕ್ಕೆ ಇತ ಹಾಜರಾಗಿರುತ್ತಾರೆ. ನಂತರ ಕೆ.ಎ.ಟಿನಲ್ಲಿ ಇವರು ಸಲ್ಲಿಸಿದ್ದ ಅರ್ಜಿ ವಜಾ ಆಗಿರುತ್ತದೆ. ಅಮಾನತು ಆದೇಶವು ಮುಂದುವರಿದರೂ ಕೂಡ ಇಲಾಖೆಯ ಅಧಿಕಾರಿಗಳು ಇವರನ್ನು ಕರ್ತವ್ಯದಿಂದ ಬಿಡುಗಡೆ ಮಾಡದೆ ನಿರ್ಲಕ್ಷತೋರಿರುತ್ತಾರೆ. ಇವೆಲ್ಲಾವನ್ನು ಗಮನಿಸಿದರೇ ಮಂಜುನಾಥ್ ಬಗ್ಗೆ ವಿವಿಧ ರೀತಿಯಲ್ಲಿ ಅನುಮಾನಗಳು ಕಂಡು ಬರುತ್ತದೆ.ಇದೆ ವೇಳೆ ಅರಕಲಗೂಡಿನಲ್ಲಿರುವ ನ್ಯಾಷನಲ್ ಏರೋಡೈಟ್ ಶಾಲೆಯ ಮಾಲೀಕ ರಂಗಸ್ವಾಮಿ ಮಾಧ್ಯಮದೊಂದಿಗೆ ಮಾತನಾಡಿ, ನಾನು ದಲಿತನಾಗಿ ಒಂದು ಶಾಲೆ ನಡೆಸುತ್ತಿದ್ದು, ಉದ್ದೇಶ ಪೂರ್ವಕವಾಗಿಯೇ 2019 ರಲ್ಲಿ ಮೂಲಭೂತ ಸೌಕರ್ಯ ಇಲ್ಲವೆಂದು ಶಾಲೆಯನ್ನೆ ರದ್ದು ಮಾಡಿದ್ದಾರೆ. ಇನ್ನು 1 ರಿಂದ 5ರ ವರೆಗೂ ಶಾಲೆ ನಡೆಸಲು ಅವಕಾಶವಿದೆ. ಆದರೇ 6ನೇ ತರಗತಿಯಿಂದ 8ನೇ ತರಗತಿವರೆಗೂ ಶಾಲೆ ನಡೆಸಲು ಮಾತ್ರ ಇವರಿಗೆ ಮೂಲಭೂತ ಸೌಕರ್ಯ ಬೇಕಾಗಿದೆ. ನಾನು ಒಬ್ಬ ದಲಿತನು ಶಾಲೆ ನಡೆಸುವುದು ತಪ್ಪಾ!, 2019 ರಲ್ಲಿಯೇ ಶಾಲೆ ನಡೆಸಲು 50 ಸಾವಿರ ರೂಗಳ ಚೆಕ್ ನೀಡಿದ್ದು, ಪ್ರತಿವರ್ಷ ಶಾಲೆಯ ರಿನಿವಲ್ ಮಾಡಲು ಇವರಿಗೆ 15 ರಿಂದ 20 ಸಾವಿರ ಲಂಚ ಕೊಡಬೇಕು ಎಂದು ದೂರಿದರು.
ಎಸ್.ಸಿ. ಕ್ಯಾಸ್ಟ್ ಎಂದು ದೌರ್ಜನ್ಯ ಮಾಡಿ ಸ್ಕೂಲನ್ನೆ ರದ್ದು ಮಾಡಿದ್ದಾರೆ ಎಂದರು. ಚೆಕ್ ಡ್ರಾ ಆಗಿರಲಿಲ್ಲ. ಅಮೌಂಟ್ ನೀಡಿ ಚೆಕ್ ವಾಪಸ್ ಪಡೆಯುವಂತೆ ಸೂಚಿಸಿದ್ದರು. ಕಳೆದ ಎರಡು ವರ್ಷಗಳಿಂದಲೂ ಆರ್.ಟಿ.ಎ. ಹಣ ಕೊಟ್ಟಿರುವುದಿಲ್ಲ. ಒಂದು ಆರ್.ಟಿ.ಎ. ಹಣ ತೆಗೆದುಕೊಳ್ಳಬೇಕಾದರೇ ಇವರಿಗೆ ಲಂಚ ಕೊಡಬೇಕು. ಕಮಿಷನರ್ ನಿಂದ ಆರರಿಂಧ ಎಂಟನೆ ತೆರಗತಿವರೆಗೂ ಶಾಲೆ ನಡೆಸಲು ಆದೇಶವಾಗಿದೆ ಎಂದು ಆದೇಶದ ಕಾಫಿ ಪ್ರದರ್ಶಿಸಿದರು. ಇಲ್ಲಿ ಎಲ್ಲಾ ಮೂಲಭೂತ ಸೌಕರ್ಯ ಇದ್ದು ಶಾಲೆ ನಡೆಸಲು ಅನುಮತಿ ನೀಡಿ ಎಂದು ಬಿಓ ಕೂಡ ಅನುಮತಿ ನೀಡಿದ್ದಾರೆ. 2019 ರಿಂದ ಇಲ್ಲಿವರೆಗೂ ಡಿಡಿಪಿಐ ಕಛೇರಿ ಅಲೆಯುತ್ತಿದ್ದೇವೆ ಎಂದರು. ಈಗಾಗಲೇ ಮನೆಗೆ ಹೋಗಿ 50 ಸಾವಿರ ಲಂಚ ಕೊಡಲಾಗಿದೆ ಎಂದು ಆರೋಪಿಸಿದರು. ಆರ್.ಟಿ.ಐ ಹಣ ಕಳೆದ ವರ್ಷದ್ದು ಐದುವರೆ ಲಕ್ಷ ರೂ ಬರಬೇಕು ಈ ವರ್ಷದಕ್ಕೂ ಅಮೌಂಟ್ ಬರಬೇಕು. ಸೌಲಭ್ಯ ಇಲ್ಲದ ಅನೇಕ ಶಾಲೆಗಳಿಗೆ ಅನುಮತಿ ನೀಡಿದ್ದರೂ ನಮಗೆ ಮಾತ್ರ ಅನುಮತಿ ನೀಡದೇ ಸತಾಯಿಸುತ್ತಿರುವುದಾಗಿ ತಮ್ಮ ಅಳಲು ತೋಡಿಕೊಂಡರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಮಂಜುನಾಥ್ ಮಾತನಾಡಿ, ಅರಕಲಗೂಡು ಸಿಟಿಯಕಲ್ಲಿ ಇದ್ದ ಶಾಲೆಯನ್ನು ದೊಡ್ಡಮಗ್ಗೆ ರಸ್ತೆಗೆ ಶಾಲೆ ಶಿಫ್ಟ್ ಮಾಡಿಕೊಂಡಿದ್ದು, ಆದರೇ ಇದಕ್ಕೆ ಸರಕಾರದಿಂದ ಅನುಮತಿ ಪಡೆಯಬೇಕು. ಯಾವ ಅನುಮತಿ ಪಡೆಯದೇ ವರ್ಗಾವಣೆ ಮಾಡುವಾಗಿಲ್ಲ. ಅನಿಲೇಶನ್ ಲ್ಯಾಂಡ್ ಇಲ್ಲ. ಅನುಮತಿ ಇದ್ದರೇ ಶಾಲೆ ನಡೆಸಲು ಅನುಮತಿ ಕೊಡುತ್ತೇವೆ. ಈ ವಿಚಾರವಾಗಿ ನಾನು ಯಾವ ಹಣ ಆತನಿಂದ ಪಡೆದಿಲ್ಲ. ಎಲ್ಲಾವನ್ನು ಆನ್ಲೆöÊನ್ ಮೂಲಕ ಇರುವುದರಿಂದ ಹಣ ಪಡೆಯುವುದಕ್ಕೆ ಬರುವುದಿಲ್ಲ. ಆದ್ದರಿಂದಲೇ ತಾನಾಗಿಯೇ ರದ್ದಾಗಿದೆ. ಎಂದರು. ಹಿಂದಿನ ಡಿಡಿಪಿಐ ಅವರು ರದ್ದು ಮಾಡಲು ಆದೇಶ ಮಾಡಿರುತ್ತಾರೆ. ಉದ್ದೇಶಪೂರ್ವಕವಾಗಿ ರಂಗಸ್ವಾಮಿ ಎಂಬುವರು ನಮ್ಮ ಕಛೇರಿಗೆ ಬಂದಿದ್ದಾರೆ. ಶಿಫ್ಟ್ ಆಗಿದ್ದಾಗ ಆರ್.ಟಿ.ಐ. ದುಡ್ಡು ಕೊಡುವುದಕ್ಕೆ ಬರುವುದಿಲ್ಲ. ನಮ್ಮ ಕಛೇರಿಯ ಕೆಲ ಕುಮ್ಮಕ್ಕಿನಿಂದ ಬಂದಿದ್ದಾರೋ ಗೊತ್ತಿಲ್ಲ. ಡಿಡಿಪಿಐ ರದ್ದು ಮಾಡಿದನ್ನು ನೀವೆ ರದ್ದು ಮಾಡಿರುವುದಾಗಿ ನಮ್ಮ ಬಳಿ ಈತ ಬಂದಿರುವುದಾಗಿ ದೂರಿದರು.