ಬೆಂಗಳೂರು : ಬಿಬಿಎಂಪಿ ವಲಯದಲ್ಲಿ ಮರದ ಕೊಂಬೆ ಬಿದ್ದು ಯುವಕ ಸಾವನ್ನಪ್ಪಿದ್ದ ಘಟನೆಗೆ ಸಂಬಂಧಿಸಿದಂತೆ ವ್ಯಾಪ್ತಿಯ ಅರಣ್ಯ ಸಂರಕ್ಷಕ (DCF) ತಲೆ ದಂಡವಾಗಿದೆ. ಅರಣ್ಯ ಸಂರಕ್ಷಕ ಬಿಎಲ್ಜಿ ಸ್ವಾಮಿ ಅವರನ್ನು ವರ್ಗಾಯಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ. ಸ್ವಾಮಿ ಅವರ ಜಾಗಕ್ಕೆ ಚಿಕ್ಕಮಗಳೂರಿನ ಜಿ.ಕೆ. ಸುದರ್ಶನ್ ಅವರನ್ನು ನೇಮಿಸಲಾಗಿದೆ.
ಮೃತ ಯುವಕ ಅಕ್ಷಯ ನಾಲ್ಕು ದಿನಗಳ ಹಿಂದೆ ತನ್ನ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಮರದ ಕೊಂಬೆ ಮುರಿದು ತಲೆಯ ಮೇಲೆ ಬಿದ್ದಿತ್ತು. ಇದರಿಂದ ತಲೆಬುರುಡೆ ಒಡೆದು ಹಲವು ತುಂಡಾಗಿತ್ತು. ನಾಲ್ಕು ದಿನಗಳ ಕಾಲ ಸಾವು ಬದುಕಿನ ಹೋರಾಟ ನಡೆಸಿದ್ದ ಅಕ್ಷಯ ಗುರುವಾರ ಮೃತಪಟ್ಟಿದ್ದರು.
ಮೃತರ ಸೋದರ ಬಿಬಿಎಂಪಿ ವಿರುದ್ದ ದೂರು ದಾಖಲಿಸಿದ್ದರು.