Home ದೇಶ ಮಹಾಕುಂಭಮೇಳಕ್ಕ ತೆರಳುತ್ತಿದ್ದ ಬಸ್ ಅಪಘಾತ 8 ಮಂದಿ ಸಾವು 40 ಮಂದಿ ಚಿಂತಾಜನಕ

ಮಹಾಕುಂಭಮೇಳಕ್ಕ ತೆರಳುತ್ತಿದ್ದ ಬಸ್ ಅಪಘಾತ 8 ಮಂದಿ ಸಾವು 40 ಮಂದಿ ಚಿಂತಾಜನಕ

0

ಉತ್ತರ ಪ್ರದೇಶ : ಮಹಾಕುಂಭಮೇಳಕ್ಕ ತೆರಳುತ್ತಿದ್ದ ಬಸ್ ಅಪಘಾತಕ್ಕೀಡಾಗಿ 8 ಮಂದಿ ಸಾವನ್ನಪ್ಪಿದ್ದು 40 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. 

ಉತ್ತರ ಪ್ರದೇಶದ ಬದ್ಲಾಪುರದ ಜೌನ್‌ಪುರದಲ್ಲಿ ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಪ್ರಯಾಗರಾಜ್ ಮಹಾಕುಂಭಕ್ಕೆ ತೆರಳುತ್ತಿದ್ದ ಡಬಲ್ ಡೆಕರ್ ಬಸ್ ಅಪಘಾತಕ್ಕೀಡಾಗಿ ನಜ್ಜುಗುಜ್ಜಾಗಿದೆ.

ಮಾಹಿತಿಯ ಪ್ರಕಾರ, ಭಕ್ತರು ತುಂಬಿದ್ದ ಡಬಲ್ ಡೆಕ್ಕರ್ ಬಸ್‌ಗೆ ಹಿಂದಿನಿಂದ ಅಕ್ಕಿ ತುಂಬಿದ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಈ ಅವಘಡದಲ್ಲಿ 8 ಮಂದಿ ಸಾವನ್ನಪ್ಪಿದ್ದು, 40 ಮಂದಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಜೌನ್‌ಪುರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ಕೈಗೊಂಡಿದ್ದಾರೆ.

You cannot copy content of this page

Exit mobile version