Home Uncategorized ಚಂದ್ರಶೇಖರ್ ಆಝಾದ್ ರಾವಣ್ ಮೇಲೆ ಗುಂಡಿನ ದಾಳಿ ಮತ್ತು ಮರ್ಯಾದೆಗೇಡು ಹತ್ಯೆ ಖಂಡಿಸಿ ನಾಳೆ ಪ್ರತಿಭಟನೆ

ಚಂದ್ರಶೇಖರ್ ಆಝಾದ್ ರಾವಣ್ ಮೇಲೆ ಗುಂಡಿನ ದಾಳಿ ಮತ್ತು ಮರ್ಯಾದೆಗೇಡು ಹತ್ಯೆ ಖಂಡಿಸಿ ನಾಳೆ ಪ್ರತಿಭಟನೆ

0

ಇತ್ತೀಚೆಗೆ ಉತ್ತರಪ್ರದೇಶದಲ್ಲಿ ನಡೆದ ಭೀಮ್‌ ಆರ್ಮಿ ಸಂಘಟನೆಯ ಅಧ್ಯಕ್ಷ ಚಂದ್ರಶೇಖರ್‌ ಆಜಾದ್‌ ರಾವಣ್‌ ಅವರ ಮೇಲೆ ನಡೆದ ಗುಂಡಿನ ದಾಳಿ ಹಾಗೂ ಇತ್ತೀಚೆಗೆ ಕೋಲಾರದಲ್ಲಿ ನಡೆದ ಮರ್ಯಾದೆಗೇಡು ಹತ್ಯೆಗಳನ್ನು ಖಂಡಿಸಿ ಹಲವು ಸಮಾನ ಮನಸ್ಕ ಸಂಘಟನೆಗಳು ನಾಳೆ ಸಂಜೆ (4 ಜುಲೈ) ಬೆಂಗಳೂರಿನಲ್ಲಿ ಮೇಣದ ಬತ್ತಿ ಮೆರವಣಿಗೆ ಹಮ್ಮಿಕೊಂಡಿವೆ.

ಈ ಪ್ರತಿಭಟನೆಯಲ್ಲಿ ತಮಟೆ – ಕರ್ನಾಟಕ, ಬಹುತ್ವ ಕರ್ನಾಟಕ ಮತ್ತು ಇನ್ನಿತರ ಹಲವು ಪ್ರಗತಿಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದು ಸಾರ್ವಜನಿಕರು ಸಹ ಪಾಲ್ಗೊಳ್ಳುವಂತೆ ಕಾರ್ಯಕ್ರಮದ ಆಯೋಜಕರು ಮನವಿ ಮಾಡಿರುತ್ತಾರೆ.

ಇತ್ತೀಚೆಗೆ ಬೋಡಗುರ್ಕಿಯ ಪರಿಶಿಷ್ಟ ಜಾತಿಯಡಿ ಬರುವ ಸಮುದಾಯದ ಹುಡುಗನೊಬ್ಬ ಗೊಲ್ಲ ಸಮುದಾಯದ ಹುಡುಗಿಯನ್ನು ಪ್ರೀತಿಸಿದ್ದು ವಿಷಯ ಮನೆಯಲ್ಲಿ ಗೊತ್ತಾಗಿ ಈ ದುರಂತ ಸಂಭವಿಸಿತ್ತು. ತನ್ನ ಗೆಳತಿ ಸತ್ತ ಸುದ್ದಿ ತಿಳಿದು ಯುವಕ ಕೂಡಾ ಮೈಸೂರು – ಚೆನೈ ಎಕ್ಸ್‌ಪ್ರೆಸ್‌ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಘಟನೆಯಿಂದ ರಾಜ್ಯವೇ ತಲೆ ತಗ್ಗಿಸುವಂತೆ ಆಗಿತ್ತು.

https://peepalmedia.com/for-caste-father-kills-daughter/

You cannot copy content of this page

Exit mobile version