ಚಿಕ್ಕಮಗಳೂರು ಜಿಲ್ಲೆಯಿಂದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಕ್ಯಾಬ್ ಚಾಲಕನೊಬ್ಬನ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಯುವಕನನ್ನು ಆತನ ಸ್ನೇಹಿತರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಮೃತನ ಅಜ್ಜ ಹೊಲಕ್ಕೆ ಆಗಮಿಸಿದಾಗ ಅಲ್ಲಿ ಮೊಮ್ಮಗನ ಶವ ಬಿದ್ದಿರುವುದು ಕಂಡು ಬಂದಿದೆ. ಸದ್ಯ ಪೊಲೀಸರು ಶವವನ್ನು ವಶಪಡಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
21 ವರ್ಷದ ದರ್ಶನ್ ಬೆಂಗಳೂರಿನಲ್ಲಿ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಅವನ ಸ್ನೇಹಿತರು ಕೂಡ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ದರ್ಶನ್ ಇತ್ತೀಚೆಗೆ ಕೊಲೆ ಯತ್ನ ಪ್ರಕರಣದಲ್ಲಿ ಜೈಲಿನಿಂದ ಜಾಮೀನಿನ ಮೇಲೆ ಹೊರ ಬಂದಿದ್ದ. ಫೆಬ್ರವರಿ 15ರಂದು ದರ್ಶನ್ ತಾತನನ್ನು ಭೇಟಿ ಮಾಡಲು ಪ್ಲಾನ್ ಮಾಡಿದ್ದ.ಈ ನಡುವೆ ಇಬ್ಬರು ಗೆಳೆಯರು ಅವನನ್ನು ಭೇಟಿಯಾಗಿದ್ದರು. ದರ್ಶನ್ ತಾತನ ಊರಿಗೆ ಹೋಗುತ್ತಿದ್ದೇನೆ ಎಂದು ಹೇಳಿದಾಗ ಗೆಳೆಯರಿಬ್ಬರೂ ಜೊತೆಯಲ್ಲಿ ಕರೆದುಕೊಂಡು ಹೋಗುವಂತೆ ಕೇಳತೊಡಗಿದರು. ಇದಕ್ಕೆ ದರ್ಶನ್ ಒಪ್ಪಿಕೊಂಡಿದ್ದಾನೆ. ಫೆ.15ರಂದು ದರ್ಶನ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಕಡೂರಿನ ಹುಲಿಗೊಂದಿ ಹೊಸೂರು ಗ್ರಾಮದ ಅಜ್ಜನ ಮನೆಗೆ ಬಂದಿದ್ದ.
ದರ್ಶನ್ ಮತ್ತು ಅವನ ಇಬ್ಬರು ಸ್ನೇಹಿತರು ದರ್ಶನ್ ಕ್ಯಾರಿನಲ್ಲಿ ಊರಿಗೆ ತೆರಳಿದ್ದರು. ರಾತ್ರಿ ಮೂವರೂ ಅಜ್ಜನ ಜೊತೆ ಊಟ ಮಾಡಿ ಸ್ವಲ್ಪ ಹೊತ್ತು ಕುಳಿತು ಮಾತಾಡಿದರು. ತಡರಾತ್ರಿ ಮಲಗುವ ಸಮಯ ಬಂದಾಗ ದರ್ಶನ್ ಮತ್ತು ಅವರ ಇಬ್ಬರು ಸ್ನೇಹಿತರು ಮೂವರೂ ಹೊಲದಲ್ಲಿ ಮಲಗಲು ಹೋಗುವುದಾಗಿ ಹೇಳಿದರು. ಇದು ದರ್ಶನನಿಗೂ ಇಷ್ಟವಾಗಿದ್ದು, ಮೂವರೂ ಹೊಲದಲ್ಲೇ ಮಲಗಿದ್ದಾರೆ. ತಡರಾತ್ರಿ ದರ್ಶನ್ ತಾತ ಮೂವರು ಮಕ್ಕಳನ್ನು ನೋಡಲೆಂದು ಹೋದಾಗ ಅಲ್ಲಿ ದರ್ಶನ್ ಕಾಣಲಿಲ್ಲ, ಆಗ ಅವರು ಕಾರಿನಲ್ಲಿ ಮಲಗಿರಬಹುದು ಎಂದುಕೊಂಡು ಸುಮ್ಮನಾಗಿದ್ದಾರೆ.
ಹೊಲದಲ್ಲಿ ಬಿದ್ದಿದ್ದ ಮೊಮ್ಮಗನ ಶವ ಪತ್ತೆ
ಬೆಳಗ್ಗೆ ದರ್ಶನ್ ತಾತ ಕ್ಯಾಬ್ ಬಳಿ ಹೋಗಿ ನೋಡಿದಾಗ ಅಲ್ಲಿಯೂ ದರ್ಶನ್ ಇರಲಿಲ್ಲ. ಇದಾದ ನಂತರ ಅವರು ಮೂವರನ್ನೂ ಹುಡುಕಿಕೊಂಡು ತಮ್ಮ ಜಮೀನಿಗೆ ತಲುಪಿದರು. ಆದರೆ ಅಲ್ಲಿಯೂ ಯಾರೂ ಕಾಣಿಸಲಿಲ್ಲ. ಹಾಗೇ ಹುಡುಕಿಕೊಂಡು ಮುಂದಕ್ಕೆ ಹೋದ ತಾತ ಹೊಲದಲ್ಲಿನ ದೃಶ್ಯವನ್ನು ಕಂಡು ದಂಗಾಗಿ ಹೋದರು. ಅಲ್ಲಿ ದರ್ಶನ್ ರಕ್ತದ ಮಡುವಿನಲ್ಲಿ ಬಿದ್ದಿದ್ದ.
ತನಿಖೆಯಲ್ಲಿ ತೊಡಗಿರುವ ಪೊಲೀಸರು
ಮೃತ ದರ್ಶನ್ ಕುತ್ತಿಗೆಯಲ್ಲಿ ಮರಳಿನ ಗುರುತುಗಳಿದ್ದವು. ದರ್ಶನ್ ಅವರನ್ನು ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಆತನ ಇಬ್ಬರು ಗೆಳೆಯರೂ ತಲೆಮರೆಸಿಕೊಂಡಿದ್ದಾರೆ. ದರ್ಶನ್ ಮೃತದೇಹ ಗದ್ದೆಯಲ್ಲಿ ಬಿದ್ದಿರುವುದನ್ನು ಕಂಡ ಅಜ್ಜ ಕಿರುಚಿಕೊಂಡಿದ್ದು, ಬಳಿಕ ಗ್ರಾಮದ ಜನರು ಅಲ್ಲಿಗೆ ಬಂದಿದ್ದಾರೆ. ಈ ವೇಳೆ ಅಲ್ಲಿದ್ದವರೊಬ್ಬರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆಯಲ್ಲಿ ತೊಡಗಿದ್ದಾರೆ. ಸದ್ಯ ದರ್ಶನನ ಇಬ್ಬರು ಸ್ನೇಹಿತರ ಮೇಲೆ ಪೊಲೀಸರಿಗೆ ಅನುಮಾನ ಮೂಡಿದೆ.