ಮಧ್ಯಪ್ರದೇಶ: ಮಧ್ಯಪ್ರದೇಶದ ದಾತಿಯಾ ಜಿಲ್ಲೆಯ ಬಡೋನಿ ಶಾಲೆಯ ಬಾಲಕಿಯ ಬ್ಯಾಗ್ ಒಳಗಡೆ ಇರುವ ಹಾವನ್ನು ಹೊರಹಾಕಿರುವ ಭಯಾನಕ ದೃಶ್ಯ ಬೆಳಕಿಗೆ ಬಂದಿದೆ.
ಈ ಘಟನೆಯನ್ನು ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಕರ್ತ ಕರಣ್ ವಶಿಷ್ಠ ಅವರು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದು, ಸದ್ಯ ಘಟನೆಯಲ್ಲಿ ಯಾರಿಗೂ ಅಪಾಯ ಸಂಭವಿಸಿಲ್ಲ ಎಂದು ಹೇಳಿದ್ದಾರೆ
10ನೇ ತರಗತಿ ವಿದ್ಯಾರ್ಥಿ ಕೆ. ಉಮಾ ರಜಾಕ್ ಅವರು ಮನೆಯಿಂದ ಶಾಲೆಗೆ ಬಂದ ನಂತರ ಬ್ಯಾಗ್ ತೆರೆದಿದ್ದಾಳೆ. ಆ ವೇಳೆ ಭಯಭೀತಳಾಗಿ ಬ್ಯಾಗ್ ನಲ್ಲಿ ಏನೋ ಇರುವುದಾಗಿ ಶಿಕ್ಷಕರಿಗೆ ತಿಳಿಸಿದ್ದಾಳೆ. ನಂತರ ಶಾಲೆಯ ಶಿಕ್ಷಕರು ಬ್ಯಾಗ್ ಅನ್ನು ತೆಗೆದುಕೊಂಡು ಹೊರ ಹೋಗಿ ಬ್ಯಾಗ್ ನಲ್ಲಿರುವ ಪುಸ್ತಕಗಳನ್ನು ಕೆಳಗೆ ಸುರಿಯುವಾಗ ಬ್ಯಾಗ್ ಒಳಗಡೆ ಇದ್ದ ನಾಗರಹಾವು ಹೊರ ಬಂದಿದೆ.
ಅದೃಷ್ಟವಶಾತ್ ವಿದ್ಯಾರ್ಥಿನಿಯು ಬ್ಯಾಗ್ ಒಳಗಡೆ ಕೈ ಹಾಕದೇ ಇರುವುದರಿಂದ ಒಂದು ದೊಡ್ಡ ಅಪಾಯದಿಂದ ಪಾರಾಗಿದ್ದಾರೆ. ಹೀಗಾಗಿ ಯಾರೇ ಆಗಲಿ ಯಾವುದೇ ಸ್ಥಳಗಳಲ್ಲಿ ಕೂತು ಓದುವಾಗ ಮೈ ಮರೆತು ಬ್ಯಾಗ್ ಅನ್ನು ತೆರೆದಿಡಬಾರದು, ತೆರೆದಿಟ್ಟರೆ ಈ ರೀತಿ ವಿಷಕಾರಿ ಜಂತುಗಳು ಅದರೊಳಗಡೆ ಬಂದು ಸೇರಿಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಯಾರೇ ಆಗಲಿ ಈ ತರಹದ ವಿಷಯಗಳಲ್ಲಿ ಹೆಚ್ಚರವಾಗಿರುವುದು ಉತ್ತಮ.