ಹಿಂದುತ್ವದ ಹೆಸರಿನಲ್ಲಿ ಚೈತ್ರ ಕುಂದಾಪುರ ಹತ್ತಿರ ಚುನಾವಣಾ ಪ್ರಚಾರ ಭಾಷಣ ಮಾಡಿಸಿ, ಈಗ ನಮಗೂ ಆಕೆಗೂ ಸಂಬಂಧವೇ ಇಲ್ಲ ಎಂದು ಬಿಜೆಪಿ ನಾಟಕ ಆಡುತ್ತಿದೆ. ಇದು ವಿಚಾರದಲ್ಲಿ ಮಾತ್ರ ಅಲ್ಲ, ಹಿಂದುತ್ವದ ಅಡಿಯಲ್ಲಿ ಬಿಜೆಪಿ ಬೆಂಬಲಿಸುವ ಎಲ್ಲರಿಗೂ ಇದೇ ಕಥೆ ಎಂಬಂತೆ ರಾಜ್ಯ ಕಾಂಗ್ರೆಸ್ ನ ಸಾಮಾಜಿಕ ಜಾಲತಾಣ ಗಂಭೀರವಾಗಿ ಆರೋಪಿಸಿದೆ.
ಟಿಕೆಟ್ ಅವ್ಯವಹಾರಕ್ಕೆ ಸಂಬಂಧಿಸಿದಂತೆ, ಟಿಕೆಟ್ ವಂಚನೆ ವಿಚಾರದಲ್ಲಿ ಬಿಜೆಪಿ ಒಳಗೇ ದೊಡ್ಡ ಹಗರಣ ನಡೆದರೂ, ಎಲ್ಲಕ್ಕಿಂತ ಹೆಚ್ಚಾಗಿ ಅದು ಗೊತ್ತಿದ್ದರೂ ಬಿಜೆಪಿ ಮುಖಂಡರು ಮೌನ ವಹಿಸಿದ್ದಾರೆ. ಅದರಲ್ಲೂ ಬಿಜೆಪಿ ಪಕ್ಷದ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಎಂಬ ವ್ಯಕ್ತಿಗೆ ಈ ವಿಚಾರ ಗೊತ್ತಿದ್ದೂ ಮುಚ್ಚಿಟ್ಟ ಬಗ್ಗೆಯೂ ಕಾಂಗ್ರೆಸ್ ಆರೋಪಿಸಿದೆ.
“ಚಕ್ರವರ್ತಿ ಸೂಲಿಬೆಲೆ ಎಂಬ ಕರ್ನಾಟಕದ ಫ್ರಿಂಜ್ ಎಲಿಮೆಂಟ್ ಗೆ ಆತನೇ ಒಪ್ಪಿಕೊಂಡಂತೆ ಟಿಕೆಟ್ ವಂಚನೆ ಮೊದಲೇ ಗೊತ್ತಿತ್ತಂತೆ, ಸಿಟಿ ರವಿ ಅವರಿಗೂ ತಿಳಿದಿತ್ತಂತೆ. ಬಿಜೆಪಿ ಪಕ್ಷದ ಹೆಸರಲ್ಲಿ ಮಹಾವಂಚನೆ ನಡೆದಿದ್ದರೂ, ಹಣದ ಅಕ್ರಮ ವರ್ಗಾವಣೆ ನಡೆದಿದ್ದರೂ ಈ ಮಹಾ ಸುಭಗಧ್ವಯರು ಸುಮ್ಮನಿದಿದ್ದೇಕೆ? ಈ ಚೈನ್ ಚೈತ್ರ (ಚೈತ್ರ ಕುಂದಾಪುರ ಅವರ ಅಡ್ಡ ಹೆಸರು) ನಮಗೆ ತಿಳಿದೇ ಇಲ್ಲ ಎನ್ನುತ್ತಿರುವ ಎನ್ನುತ್ತಿರುವ ಬಿಜೆಪಿಗರು ಹಿಂದುತ್ವದ ಹೆಸರಲ್ಲಿ ಯಾರನ್ನು ಬೇಕಾದರೂ ಬಳಸಿಕೊಂಡು ಬೀದಿಗೆ ತಳ್ಳುತ್ತಾರೆ!” ಎಂದು ಕಾಂಗ್ರೆಸ್ ಆರೋಪಿಸಿದೆ.
ಹಾಗೆಯೇ ಬಿಜೆಪಿ ನಾಯಕನೊಬ್ಬನಿಗೆ ಮೋಸ ಆಗುತ್ತಿದ್ದರೂ, ಆತ ಬಿಜೆಪಿ ಪಕ್ಷದ ಟಿಕೆಟ್ ಗಾಗಿ ಕೋಟಿ ಕೋಟಿ ಕಳೆದುಕೊಳ್ಳುತ್ತಿದ್ದರೂ ಎಲ್ಲಕ್ಕಿಂತ ಹೆಚ್ಚಾಗಿ ಬಿಜೆಪಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಹುದ್ದೆಯಲ್ಲಿದ್ದ ಸಿ.ಟಿ.ರವಿಯವರು ಈ ಬಗ್ಗೆ ಸ್ವಲ್ಪ ಕೂಡಾ ಪಕ್ಷದ ಗಮನಕ್ಕೆ ತಂದು ಶಿಸ್ತು ಕ್ರಮ ಕೈಗೊಳ್ಳದ ಬಗ್ಗೆಯೂ ಕಾಂಗ್ರೆಸ್ ಆರೋಪಿಸಿದೆ.
ಸಿಟಿ ರವಿಯವರೇ, ನಿಮ್ಮ ಪಕ್ಷದ ಟಿಕೆಟ್ ಹೆಸರಲ್ಲಿ ಕೋಟ್ಯಂತರ ರೂಪಾಯಿಯ ವಂಚನೆ ನಡೆದಿದ್ದು ನಿಮ್ಮ ಗಮನಕ್ಕೆ ಬಂದಿದ್ದರೂ ಕ್ರಮ ಕೈಗೊಳ್ಳದೆ ಸುಮ್ಮನಿದ್ದಿದ್ದು ಏಕೆ? ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಂತಹ ಮಹತ್ವದ ಹೊಣೆಗಾರಿಕೆ ಹೊಂದಿದ್ದರೂ, ಮಾಜಿ ಸಚಿವರಾಗಿದ್ದರೂ ಇಂತಹ ಕಾನೂನು ಬಾಹಿರ ಚಟುವಟಿಕೆಗೆ ಬೆಂಬಲ ಮೌನದ ಮೂಲಕ ಬೆಂಬಲ ನೀಡಿದೇಕೆ? ಬಿಜೆಪಿಯಲ್ಲಿ ನಿಜಕ್ಕೂ ಹಣಕ್ಕಾಗಿ ಟಿಕೆಟ್ ಮಾರಾಟ ನಡೆಯುತ್ತಿತ್ತೆ? ಇಂತಹ ವಂಚನೆಗಳೆಲ್ಲ ಬಿಜೆಪಿ ಪಕ್ಷದಲ್ಲಿ ಸಾಮಾನ್ಯವೇ? ಅಥವಾ ಈ ವಂಚನೆ ಬಿಜೆಪಿಯ ದೊಡ್ಡ ನಾಯಕರ ಅಣತಿಯಂತೆ ನಡೆದಿದೆಯೇ?” ಎಂದು ಅನುಮಾನ ವ್ಯಕ್ತಪಡಿಸಿದೆ.
ಸಧ್ಯ ಇತ್ತು ಇದ್ದೂ ಇಲ್ಲದಂತಿರುವ ರಾಜ್ಯಾಧ್ಯಕ್ಷ, ವಿರೋಧ ಪಕ್ಷದ ನಾಯಕನೂ ಇಲ್ಲದ ಬಿಜೆಪಿಗೆ ಈಗ ಚೈತ್ರ ಕುಂದಾಪುರ ಟಿಕೆಟ್ ವಂಚನೆ ಪ್ರಕರಣ ನುಂಗಲಾರದ ತುತ್ತಾಗಿದೆ. ಟಿಕೆಟ್ ಹಗರಣದಲ್ಲಿ ಮೋಸ ಮಾಡಿದವರು ಮತ್ತು ಮೋಸ ಹೋದವರು ಇಬ್ಬರೂ ಬಿಜೆಪಿಯವರೇ ಆಗಿದ್ದರಿಂದ ಬಿಜೆಪಿ ಈಗ ಕಾಂಗ್ರೆಸ್ ನ ಆರೋಪಗಳಿಗೆ ಉತ್ತರ ಕೊಡದ ಸ್ಥಿತಿಗೆ ಬಂದಿದೆ.