ಕೇರಳ: ʼಕಾಂಗ್ರೆಸ್ ದೇಶದಿಂದ ಕಣ್ಮರೆಯಾಗುತ್ತಿದ್ದು, ವಿಶ್ವ ಕಮ್ಯುನಿಸ್ಟ್ ಪಕ್ಷಗಳನ್ನು ತೊಡೆದು ಹಾಕುತ್ತಿದೆʼ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಕೇರಳದ ತಿರುವನಂತಪುರಂನಲ್ಲಿ ನಡೆದ ಬಿಜೆಪಿ ಎಸ್ಸಿ ಸಮಾವೇಶದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಮತ್ತು ಕಮ್ಯುನಿಸ್ಟರು ಪರಿಶಿಷ್ಟ ಪಂಗಡ ಮತ್ತು ಬಡವರ ಕಲ್ಯಾಣಕ್ಕಾಗಿ ಎಂದಿಗೂ ಕೆಲಸ ಮಾಡಲಿಲ್ಲ. ಅವರನ್ನು ಕೇವಲ ವೋಟ್ ಬ್ಯಾಂಕ್ ಪರಿಗಣಿಸಿದ್ದಾರೆ. ಕೇರಳಕ್ಕೆ ಭವಿಷ್ಯವಿದ್ದರೆ ಅದು ಬಿಜೆಪಿಯಿಂದ ಎಂದು ಹೇಳಿದರು.