ಮಾಜಿ ಕೇಂದ್ರ ಸಚಿವ ಗುಲಾಂ ನಬಿ ಆಜಾದ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಪಕ್ಷದ ಎಲ್ಲ ಹುದ್ದೆಗಳೂ ಸೇರಿದಂತೆ ಪ್ರಾಥಮಿಕ ಸದಸ್ಯತ್ವಕ್ಕೆ ಗುಲಾಂ ನಬಿ ಆಜಾದ್ ರಾಜೀನಾಮೆ ಸಲ್ಲಿಸಿದ್ದಾರೆ.
ಎಐಸಿಸಿ ನಾಯಕತ್ವವು ಆತ್ಮಶಕ್ತಿಯನ್ನು ಮತ್ತು ಪಕ್ಷವನ್ನು ನಡೆಸುವ ಸಾಮರ್ಥ್ಯವನ್ನು ಕಳೆದುಕೊಂಡಿದೆ ಎಂದು ಗುಲಾಂ ನಬಿ ಆಜಾದ್ ತಮ್ಮ ರಾಜೀನಾಮೆಯ ಹೇಳಿಕೆಯಲ್ಲಿ ಹೇಳಿದ್ದಾರೆ.
2013ರಲ್ಲಿ ರಾಹುಲ್ ಗಾಂಧಿ ಸಕ್ರಿಯ ರಾಜಕಾರಣಕ್ಕೆ ಬಂದ ನಂತರ ನಿರಂತರ ಚರ್ಚೆ ಮಾತುಕತೆಯೊಂದು ಮುಂದೆ ಸಾಗುವ ಕಾಂಗ್ರೆಸ್ ಪರಂಪರೆಯನ್ನು ನಾಶಗೊಳಿಸಿದ್ದಾರೆ ಎಂದು ಆಜಾದ್ ಕಟುವಾಗಿ ಟೀಕಿಸಿದ್ದಾರೆ.