Home ರಾಜಕೀಯ ‘ಕಾಂಗ್ರೆಸ್‌ನಿಂದ ದಿಕ್ಕು ತಪ್ಪಿಸುವ ಪ್ರಯತ್ನ’: ಸಚಿವ ಬಿ. ಸಿ. ನಾಗೇಶ್

‘ಕಾಂಗ್ರೆಸ್‌ನಿಂದ ದಿಕ್ಕು ತಪ್ಪಿಸುವ ಪ್ರಯತ್ನ’: ಸಚಿವ ಬಿ. ಸಿ. ನಾಗೇಶ್

0

ಬೆಂಗಳೂರು: ‘ರಾಷ್ಟ್ರಧ್ವಜದ ಬಣ್ಣವನ್ನೆ ತಿಳಿಯದವರು ದಿಕ್ಕು ತಪ್ಪಿಸಲೆಂದೇ ಒಂದು ಚಿತ್ರವನ್ನು ಬಳಸಿಕೊಂಡು ಸುಳ್ಳಿನ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ’ ಎಂದು ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಟ್ವೀಟ್ ಮೂಲಕ ಕಾಂಗ್ರೆಸಿಗರಿಗೆ ತಿರುಗೇಟು ಕೊಟ್ಟಿದ್ದಾರೆ.

ತಿಪಟೂರಿನಲ್ಲಿ ತಿರಂಗ ಯಾತ್ರೆ ನಡೆಸುವ ಸಂದರ್ಭದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ. ಸಿ. ನಾಗೇಶ್ ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ಎಬಿವಿಪಿ ಧ್ವಜ ಹಿಡಿದು ರಾಷ್ಟçಧ್ವಜಕ್ಕೆ ಅಪಮಾನ ಎಸಗಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು. ಈ ಕುರಿತು ಕಾಂಗ್ರೆಸ್‌ನ ಮುಂಖಡರಾದ ಎಚ್. ಸಿ. ಮಹಾದೇವಪ್ಪ, ಬಿ. ಕೆ. ಹರಿಪ್ರಸಾದ್ ಮೊದಲಾದವರು ಟ್ವೀಟ್ ಮಾಡುವ ಮೂಲಕ ರಾಜೀನಾಮೆಗೆ ಒತ್ತಾಯಿಸಿದ್ದರು.

You cannot copy content of this page

Exit mobile version