ಬೆಂಗಳೂರು: ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ರಾಷ್ಟ್ರೀಯ ಮಂಡಳಿಯನ್ನು ಪುನರ್ ರಚಿಸಿ ಹೊಸ ಪಟ್ಟಿ ಬಿಡುಗಡೆ ಮಾಡಿದೆ.
ಆ ಪ್ರಕಾರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಿ.ಟಿ ರವಿಗೆ ಕೊಕ್ ನೀಡಲಾಗಿದೆ. 8 ನಾಯಕರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿ ನೇಮಕ ಮಾಡಲಾಗಿದೆ.
13 ನಾಯಕರನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯನ್ನಾಗಿ ಬಿ.ಎಲ್. ಸಂತೋಷ್ ಅವರನ್ನು ಮುಂದುವರೆಸಲಾಗಿದೆ.
ಸಂಘಟನಾ ಕಾರ್ಯದರ್ಶಿಗಳು, ಸಹ ಸಂಘಟನಾ ಕಾರ್ಯದರ್ಶಿಗಳು ಕೊಶಾಧ್ಯಕ್ಷರನ್ನು ನೇಮಕ ಮಾಡಲಾಗಿದೆ.
ಸಂಪೂರ್ಣ ಪಟ್ಟಿ ಇಲ್ಲಿದೆ.
ಈ ನಡುವೆ ರಾಜ್ಯ ಬಿಜೆಪಿ ಅಧ್ಯಕ್ಷರ ಪಟ್ಟ ಖಾಲಿಯಿದ್ದು ಆ ಸ್ಥಾನಕ್ಕೆ ಸಿ ಟಿ ರವಿ ಬರಬಹುದು ಎನ್ನಲಾಗುತ್ತಿದ್ದು ಮತ್ತೆ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ವಿರೋಧ ಪಕ್ಷದ ನಾಯಕನ ಸ್ಥಾನವೂ ಖಾಲಿಯಿದ್ದು ಅದಕ್ಕೂ ಸರಿಯಾದ ನಾಯಕನ ಹುಡುಕಾಟದಲ್ಲಿದೆ ಬಿಜೆಪಿ.
ಅತ್ತ ಪ್ರಶಾಂತ್ ಕಿಶೋರ್ ಮತ್ತು ವಿಜಯೇಂದ್ರ ಭೇಟಿ ಹಾಗೂ ಯಡ್ಯೂರಪ್ಪ ಮತ್ತು ಕುಮಾರ ಸ್ವಾಮಿಯವರ ವಿದೇಶದ ಭೇಟಿಯೂ ಕುತೂಹಲ ಕೆರಳಿಸಿದ್ದು. ಇಬ್ಬರೂ ಸೇರಿ ಹೊಸ ಪಕ್ಷ ಕಟ್ಟಲಿದ್ದಾರೆನ್ನುವ ಗುಸು ಗುಸು ಕೂಡಾ ಚಾಲ್ತಿಯಲ್ಲಿದೆ.
ಕುಮಾರಸ್ವಾಮಿಗೆ ವಿರೋಧ ಪಕ್ಷದ ನಾಯಕನ ಸ್ಥಾನ ಕೊಡಲು ಬಿಜೆಪಿ ಗತಿಗೆಟ್ಟಿಲ್ಲ ಎನ್ನುವ ಹೇಳಿಕೆಯ ಹಿನ್ನೆಲೆಯಲ್ಲಿ ಯಡಿಯೂರಪ್ಪ ಮತ್ತು ಕುಮಾರಸ್ವಾಮಿಯವರ ಭೇಟಿ ಕುತೂಹಲ ಮೂಡಿಸಿದೆ.