Home ಬ್ರೇಕಿಂಗ್ ಸುದ್ದಿ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕುಸಿತ: USCIRF ಕಳವಳ

ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕುಸಿತ: USCIRF ಕಳವಳ

0
Photo Source: The New Indian Express

ಬೆಂಗಳೂರು,ಅಕ್ಟೋಬರ್‌.4: ಯುನೈಟೆಡ್ ಸ್ಟೇಟ್ಸ್ ಕಮಿಷನ್ ಆನ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಮ್ (The United States Commission on International Religious Freedom – USCIRF) “ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಪರಿಸ್ಥಿತಿ ಗಮನಾರ್ಹವಾಗಿ ಕುಸಿದಿದೆ” ಎಂದು ಕಳವಳ ವ್ಯಕ್ತಪಡಿಸಿದೆ.

ಸೆಪ್ಟೆಂಬರ್ 20 ರಂದು Advancing Religious Freedom within the US – India Bilateral Relationship ನ ಸಂದರ್ಭದಲ್ಲಿ USCIRF ಭಾರತದಲ್ಲಿ “ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧದ ತಾರತಮ್ಯ ನೀತಿಗಳ” ಜಾರಿಯನ್ನು ಎತ್ತಿ ತೋರಿಸಿ ಪತ್ರಿಕಾ ಹೇಳಿಕೆಯನ್ನು ನೀಡಿದೆ.

USCIRF  ವಿದೇಶಗಳಲ್ಲಿರುವ ಧಾರ್ಮಿಕ ಸ್ವಾತಂತ್ರ್ಯವನ್ನು ವಿಶ್ಲೇಷಿಸಿ ವರದಿ ಮಾಡಲು ಯುನೈಟೆಡ್‌ ಸ್ಟೇಟ್‌ ಕಾಂಗ್ರೆಸ್ ಸ್ಥಾಪಿಸಿರುವ ಸ್ವತಂತ್ರ ಹಾಗೂ ಉಭಯಪಕ್ಷೀಯ ಫೆಡರಲ್ ಸರ್ಕಾರಿ ಸಂಸ್ಥೆಯಾಗಿದೆ. ಮತೀಯ ಹಿಂಸಾಚಾರ ತಡೆಯಲು ಮತ್ತು ಧರ್ಮ ಹಾಗೂ ನಂಬಿಕೆಯ ಸ್ವಾತಂತ್ರ್ಯವನ್ನು ರಕ್ಷಿಸುವ ಉದ್ದೇಶದಿಂದ ಇದು ಅಧ್ಯಕ್ಷರು, ರಾಜ್ಯ ಕಾರ್ಯದರ್ಶಿ ಮತ್ತು ಕಾಂಗ್ರೆಸ್‌ಗೆ ವಿದೇಶಾಂಗ ನೀತಿ ಶಿಫಾರಸುಗಳನ್ನು ಮಾಡುತ್ತದೆ.

ಸೆಪ್ಟೆಂಬರ್ 20 ರಂದು ನಡೆದ  “ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಜಾರಿಗೊಂಡ ತಾರತಮ್ಯ ನೀತಿಗಳ” ಬಗೆಗಿನ ಚರ್ಚೆಯಲ್ಲಿ ಹರಿಯಾಣದ ನುಹ್‌ನಲ್ಲಿನ ಇತ್ತೀಚಿಗೆ ನಡೆದ ಹಿಂಸಾಚಾರ ಮತ್ತು ಮಣಿಪುರ ಹಿಂಸಾಚಾರಗಳ ಬಗ್ಗೆ ವಿಚಾರಣೆ ನಡೆಸಲಾಯಿತು.  ಇದರಲ್ಲಿ ಭಾಗವಹಿಸಿದವರು ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ಮತ್ತು ಮಾನವ ಹಕ್ಕುಗಳ ಕಾಪಾಡಲು  ದೇಶದಲ್ಲಿ ಕೆಲಸ ಮಾಡಲು ಯುನೈಟೆಡ್‌ ಸ್ಟೇಟ್‌ಗೆ ನೀತಿಗಳನ್ನು ನೀಡಿದರು.

ವಿಡಿಯೋ: U.S. Commission on International Religious Freedom Hearing

“ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಪರಿಸ್ಥಿತಿಗಳು ಗಮನಾರ್ಹವಾಗಿ ಕುಸಿದಿವೆ” ಎಂದು USCIRF ಅಧ್ಯಕ್ಷ ಅಬ್ರಹಾಂ ಕೂಪರ್ ಹೇಳಿದ್ದಾರೆ. “ಮುಸ್ಲಿಮರು, ಸಿಖ್ಖರು, ಕ್ರಿಶ್ಚಿಯನ್ನರು, ದಲಿತರು ಮತ್ತು ಆದಿವಾಸಿಗಳು ಹೆಚ್ಚಿದ ಮಟ್ಟದ ದಾಳಿಗಳು ಮತ್ತು ಬೆದರಿಕೆ ಮೊದಲಾದ ಕೃತ್ಯಗಳನ್ನು ಎದುರಿಸುತ್ತಿದ್ದಾರೆ. ಅಧಿಕಾರ ಹೊಂದಿರುವವರು ಅಲ್ಪಸಂಖ್ಯಾತರ ಧ್ವನಿಗಳನ್ನು ಮತ್ತು ಅವರ ಪರವಾಗಿ ವಕಾಲತ್ತು ವಹಿಸುವವರನ್ನು ಹತ್ತಿಕ್ಕುವ ಕೆಲಸವನ್ನು ಮುಂದುವರೆಸಿದ್ದಾರೆ. ಈ ಪ್ರವೃತ್ತಿ ಅಮೇರಿಕಾದ ವಿದೇಶಾಂಗ ನೀತಿಯ ಮೇಲೆ ಬೀರುವ ಪರಿಣಾಮಗಳನ್ನು ನಿರ್ಲಕ್ಷಿಸಲಾಗದು,” ಎಂದಿದ್ದಾರೆ.

ಭಾರತದಲ್ಲಿನ ಧಾರ್ಮಿಕ ಕಾರಣಗಳಿಗೆ ಬಂಧನಕ್ಕೆ ಒಳಗಾದವರನ್ನು ಬಿಡುಗಡೆ ಮಾಡುವಂತೆ USನ ಈ ಸಂಸ್ಥೆ ಕರೆ ನೀಡಿದೆ. USCIRF ನ Frank R. Wolf Freedom of Religion or Belief Victims Listನ ಡೇಟಾಬೇಸ್ ಪ್ರಕಾರ, ಅನ್ಯ ನಂಬಿಕೆಗಳನ್ನು ಹೊಂದಿರುವ ಒಟ್ಟು 37 ವ್ಯಕ್ತಿಗಳನ್ನು  ಜೈಲಿಗೆ ಹಾಕಲಾಗಿದೆ.

ಈ ಚರ್ಚೆಯಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಹದಗೆಡುತ್ತಿರುವುದನ್ನು ವಿರೋಧಿಸಿ ಜೈಲು ಪಾಲಾಗಿರುವ ಮೀರಾನ್ ಹೈದರ್ ಮತ್ತು ರೂಪೇಶ್ ಸಿಂಗ್ ಅವರ ಬಗ್ಗೆ ಚರ್ಚೆ ನಡೆಸಲಾಗಿದೆ.  

ವಿಚಾರಣೆಯನ್ನು ಇಲ್ಲಿ ಓದಿ: Advancing Religious Freedom within the U.S. – India Bilateral Relationship

ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿ ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಯುವ ನಾಯಕ ಮೀರಾನ್ ಹೈದರ್‌ರನ್ನು ಫೆಬ್ರವರಿ 2020 ರಂದು ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ದೆಹಲಿ ಪೊಲೀಸರು ಬಂಧಿಸಿದ್ದರು. ರೂಪೇಶ್ ಸಿಂಗ್ ಎಂಬ ಸ್ವತಂತ್ರ ಪತ್ರಕರ್ತನನ್ನು ಕಾನೂನುಬಾಹಿರವಾಗಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ನೊಂದಿಗೆ ಸಂಪರ್ಕ ಹೊಂದಿದ್ದಕ್ಕಾಗಿ ಜುಲೈ 17, 2022 ರಂದು ಜಾರ್ಖಂಡ್ ಪೊಲೀಸರು ಬಂಧಿಸಿದ್ದರು.

“ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಶಾಂತಿಯುತ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದ ಹೈದರ್‌ರನ್ನು ಕಾನೂನುಬಾಹಿರ ಚಟುವಟಿಕೆಗಳು (ತಡೆ) ಕಾಯ್ದೆಯ (Unlawful Activities (Prevention) Act- UAPA) ಅಡಿಯಲ್ಲಿ ಬಂಧಿಸಲಾಗಿದೆ. ರಾಜ್ಯದಲ್ಲಿ ನಡೆಯುತ್ತಿದ್ದ ಹಿಂಸಾಚಾರ ಮತ್ತು ಆದಿವಾಸಿಗಳ ವಿರುದ್ಧದ ತಾರತಮ್ಯದ ಬಗ್ಗೆ ವರದಿ ಮಾಡಿ ಸಿಂಗ್‌ ಹೆಸರನ್ನು ಗಳಿಸಿದ್ದರು.  ಜುಲೈ 2022 ರಿಂದ ಅವರನ್ನು ಯುಎಪಿಎ ಅಡಿಯಲ್ಲಿ ಬಂಧಿಸಲಾಗಿದೆ” ಎಂದು USCIRF ಉಪಾಧ್ಯಕ್ಷ ಫ್ರೆಡ್ರಿಕ್ ಎ ಡೇವಿ ಹೇಳಿದ್ದಾರೆ.

ಇದನ್ನೂ ಓದಿ: ಸಾಲು ಸಾಲು ಪತ್ರಕರ್ತರ ಮನೆಗಳ ಮೇಲೆ ದಾಳಿ – ಬಂಧನ! ಏನಾಗುತ್ತಿದೆ?

USCIRF ಈ ಪ್ರಕರಣಗಳನ್ನು ತನಿಖೆ ನಡೆಸಿ, ಎಲ್ಲಾ ಕೈದಿಗಳನ್ನು ಮತ್ತು ಅವರ ಧರ್ಮ ಅಥವಾ ನಂಬಿಕೆಯನ್ನು ಶಾಂತಿಯುತವಾಗಿ ವ್ಯಕ್ತಪಡಿಸಿದ್ದಕ್ಕಾಗಿ ಬಂಧಿತರಾದವರನ್ನು ಬಿಡುಗಡೆ ಮಾಡಲು ಭಾರತ ಸರ್ಕಾರಕ್ಕೆ ಕರೆ ನೀಡಿದೆ ಎಂದು.

ಜೂನ್ 2020 ರಿಂದ  USCIRF ಮೋದಿ ಸರ್ಕಾರದ ಅವಧಿಯಲ್ಲಿ ನಡೆಯುತ್ತಿರುವ ಧಾರ್ಮಿಕ ಸ್ವಾತಂತ್ರ್ಯದ ಅತಿರೇಕದ ಉಲ್ಲಂಘನೆಗಳಿಗಾಗಿ ಭಾರತವನ್ನು “ನಿರ್ದಿಷ್ಟ ಕಾಳಜಿಯ ದೇಶ – Country of Particular Concern ” ಎಂದು ಗುರುತಿಸಲು ಅಧ್ಯಕ್ಷ ಜೋ ಬಿಡನ್ ಅವರಿಗೆ ಕರೆ ನೀಡುತ್ತಾ ಬಂದಿದೆ. ಈ ವರ್ಷ ಮೇ ತಿಂಗಳಲ್ಲಿ, ಸತತ ನಾಲ್ಕನೇ ವರ್ಷಕ್ಕೆ ಅಮೇರಿಕಾ ಭಾರತವನ್ನು ‘ನಿರ್ದಿಷ್ಟ ಕಾಳಜಿಯ ದೇಶ’ ಎಂದು ಗುರುತಿಸಬೇಕು  ಎಂಬ ಸಲಹೆಯನ್ನು ನೀಡಿದೆ.

You cannot copy content of this page

Exit mobile version