ಹಾಸನ,ಸಪ್ಟೆಂಬರ್.15 : ಹಾಸನ ಸೇರಿದಂತೆ ಮಲೆನಾಡಿನ ಪ್ರದೇಶಗಳಲ್ಲಿ ಕಾಡನೆಗಳ ಹಾವಳಿ ಹೆಚ್ಚಾಗಿದ್ದು ಅನೇಕ ಪ್ರಮಾಣದ ಬೆಳೆ ಹಾನಿ ಮಾತ್ರವಲ್ಲ ಸಾವು ನೋವು ಸಂಭವಿಸಿದೆ.
ಸಕಲೇಶಪುರ ತಾಲ್ಲೂಕಿನ ಹಳೇಬಾಗೆಯ ದಿವಾನ್ ಎಸ್ಟೇಟ್ನಲ್ಲಿ ಕಾಡಾನೆಯೊಂದು ಸೋಲಾರ್ ಬೇಲಿಯನ್ನು ಮುರಿದು ಕಾಫಿ ತೋಟಕ್ಕೆ ನುಗ್ಗಲು ಪ್ರಯತ್ನಿಸುತ್ತಿರುವ ವಿಡಿಯೋವನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ.
ಆರು ತಿಂಗಳಿಂದ ನಾಪತ್ತೆಯಾಗಿದ್ದ ತಣ್ಣೀರ್ ಎಂಬ ಕಾಡಾನೆ ಕೊಡಗು ಭಾಗದಿಂದ ಸಕಲೇಶಪುರ ಬಂದಿದೆ. ಅಲ್ಲದೇ, ದಿವಾನ್ ಎಸ್ಟೇಟ್ನ ಕಾಫಿ ತೋಟದ ಬೇಲಿಗಳನ್ನು ಚಾಣಾಕ್ಷತನದಿಂದ ಮುರಿದು ತೋಟಕ್ಕೆ ನುಗ್ಗಿದೆ.
ವಿಡಿಯೋ ನೋಡಿ: https://www.instagram.com/reel/CxNiicwPPHk/?utm_source=ig_web_copy_link&igshid=MzRlODBiNWFlZA==