Home ಬ್ರೇಕಿಂಗ್ ಸುದ್ದಿ ಎರಡು ವರ್ಷಗಳ ಕೋವಿಡ್‌ ವಿರಾಮದ ಬಳಿಕ ವಿಜೃಂಭಣೆಯ ಗಣೇಶೋತ್ಸವ

ಎರಡು ವರ್ಷಗಳ ಕೋವಿಡ್‌ ವಿರಾಮದ ಬಳಿಕ ವಿಜೃಂಭಣೆಯ ಗಣೇಶೋತ್ಸವ

0

ಮುಂಬೈ: ಎರಡು ವರ್ಷಗಳ ಕೋವಿಡ್‌ ವಿರಾಮದ ಬಳಿಕ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವ ಗಣೇಶ ಚತುರ್ಥಿ ಹಬ್ಬಕ್ಕೆ ಮುಂಬೈನಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. 10 ದಿನಗಳ ಕಾಲ ನಡೆಯುವ ಗಣೇಶ ಚತುರ್ಥಿ ಆಗಸ್ಟ್‌ 31 ರಂದು ಪ್ರಾರಂಭವಾಗಲಿದ್ದು, ಸೆಪ್ಟೆಂಬರ್‌ 9 ರಂದು ಮೂರ್ತಿಗಳನ್ನು ನೀರಿನಲ್ಲಿ ಮುಳುಗಿಸುವ ಮೂಲಕ ಭಕ್ತರು ಗಣೇಶನಿಗೆ ವಿದಾಯ ಹೇಳುವುದರೊಂದಿಗೆ ಮುಕ್ತಾಯಗೊಳಿಸಲಾಗುತ್ತದೆ ಎಂದು ಸುದ್ದಿ ವಾಹಿನಿಯಾದ ಇಂಡಿಯಾ ಟುಡೇ ವರದಿ ಮಾಡಿದೆ.

ಆಗಸ್ಟ್‌ 31 ರಿಂದ ಪ್ರಾರಂಭವಾಗುವ ಗಣೇಶ ಚತುರ್ಥಿ ಆಚರಣೆಗಳ ಮೇಲಿನ ಕೋವಿಡ್‌-19 ನಿರ್ಬಂಧಗಳನ್ನು ಹಿಂತೆಗೆದುಕೊಳ್ಳುವುದಾಗಿ ಮಹಾರಾಷ್ಟ್ರ ಸರ್ಕಾರವು ಕಳೆದ ತಿಂಗಳು ಘೋಷಿಸಿತು. ಕಳೆದ ಎರಡು ವರ್ಷಗಳಿಂದ, ಹಿಂದಿನ ಉದ್ಧವ್ ಠಾಕ್ರೆ ಸರ್ಕಾರವು ಕೋವಿಡ್‌ನಿಂದಾಗಿ ವಿಗ್ರಹಗಳ ಎತ್ತರವನ್ನು ನಾಲ್ಕು ಅಡಿಗಳಿಗೆ ನಿರ್ಬಂಧಿಸಿತ್ತು. ಆದರೆ ಪ್ರಸ್ತುತ ರಾಜ್ಯ ಸರ್ಕಾರವು ವಿಗ್ರಹಗಳ ಮೇಲಿನ ಎತ್ತರ ನಿರ್ಬಂಧಗಳನ್ನು ತೆಗೆದುಹಾಕಿ ಮೆರವಣಿಗೆಗಳಿಗೆ ಅವಕಾಶವನ್ನು ಕಲ್ಪಿಸಿದೆ.

You cannot copy content of this page

Exit mobile version