ಬೆಂಗಳೂರು: ಶುಕ್ರವಾರ ಮುಂಜಾನೆ ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿ 75ರಲ್ಲಿ, ನಗರದ ಹೊರವಲಯದ ಹೊಸಕೋಟೆ ಸಮೀಪದಲ್ಲಿ ಆಂಧ್ರಪ್ರದೇಶ ರಾಜ್ಯ ಸಾರಿಗೆ ಬಸ್ ಮತ್ತು ಲಾರಿಯ ನಡುವಿನ ರಸ್ತೆ ಅಪಘಾತದಲ್ಲಿ 11 ತಿಂಗಳ ಮಗುವಿನೊಂದಿಗೆ ಐವರು ಸಾವಿಗೀಡಾಗಿದ್ದಾರೆ.
ತಿರುಪತಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಚಿತ್ತೂರು ಡಿಪೋದ ಎಪಿಎಸ್ಆರ್ಟಿಸಿ ಬಸ್, ಪಶ್ಚಿಮ ಬಂಗಾಳದ ನೋಂದಣಿ ಸಂಖ್ಯೆ ಹೊಂದಿರುವ ಲಾರಿಯನ್ನು ಡಬದಿಯಿಂದ ಓವರ್ಟೇಕ್ ಮಾಡಲು ಯತ್ನಿಸುವ ವೇಳೆ ಡಿಕ್ಕಿಯಾಗಿದೆ ಎಂದು ಹೊಸಕೋಟೆ ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಗೊಟ್ಟಿಪುರ ಗೇಟ್ ಬಳಿ ಬೆಳಗ್ಗೆ 1:50ರ ಸುಮಾರಿಗೆ ಸಂಭವಿಸಿದೆ. ಮೃತರನ್ನು ಕೇಶವುಲು ರೆಡ್ಡಿ (54), ತುಳಸಿ (21), ಯುತ್ವಿಕ್ (11 ತಿಂಗಳು), ಪ್ರಣತಿ (4) ಮತ್ತು ಶಾರದಾ (43) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಬಸ್ ಚಾಲಕ ಸೇರಿದಂತೆ ಒಟ್ಟು ಎಂಟು ಜನರಿಗೆ ಗಾಯಗಳಾಗಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.