Home ರಾಜ್ಯ 10ರೂ ಚಿಲ್ಲರೆಗೆ ಗ್ರಾ ಮಾಜಿ ಸದಸ್ಯನ ಕೊ* ಕೇಸ್, 6 ಜನ ಅರೆಸ್ಟ್‌

10ರೂ ಚಿಲ್ಲರೆಗೆ ಗ್ರಾ ಮಾಜಿ ಸದಸ್ಯನ ಕೊ* ಕೇಸ್, 6 ಜನ ಅರೆಸ್ಟ್‌

ರಾಯಚೂರು : ಜಿಲ್ಲೆಯ (Raichur) ಹಂಚಿನಾಳ ಕ್ಯಾಂಪ್ ವ್ಯಾಪ್ತಿಯ ಪೆಟ್ರೋಲ್ ಬಂಕ್ (Petrol bunk) ಒಂದರಲ್ಲಿ 10 ರೂಪಾಯಿ ವಿಚಾರಕ್ಕೆ ನಡೆದ ವಾಗ್ವಾದ ಭೀಕರ ಕೊಲೆಯಲ್ಲಿ (Crime) ಅಂತ್ಯವಾಗಿದೆ. ಮಹೇಶ್ ಹಾಗೂ ನಾಗರಾಜ್ ಎಂಬ ವ್ಯಕ್ತಿಗಳು ಬಾಟಲಿಯಲ್ಲಿ 110/- ಗೆ ಇಂಧನ ಪಡೆದು ನೂರು ರೂಪಾಯಿ ಪಾವತಿಸಿದ್ದು, ಉಳಿದ ಹತ್ತು ರೂಪಾಯಿ ಬಾಕಿಗಾಗಿ ಅಲ್ಲಿನ ನೌಕರರೊಂದಿಗೆ ತೀವ್ರ ಮಾತಿನ ಚಕಮಕಿ ಆರಂಭವಾಗಿತ್ತು.

ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಮುಂದಾದ ಗಿಲ್ಲೆಸುಗೂರು ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರಾದ 42 ವರ್ಷದ ಮೇಘನಾಥ್ ಎಂಬುವವರ ಮೇಲೆ ಬಂಕ್ ಸಿಬ್ಬಂದಿ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ತೀವ್ರ ಘರ್ಷಣೆಯ ಪರಿಣಾಮವಾಗಿ ಅವರು ಸ್ಥಳದಲ್ಲೇ ಜೀವ ಕಳೆದುಕೊಂಡಿದ್ದು, ಈ ಇಡೀ ರಕ್ತಪಾತದ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಪನೂರು ಠಾಣೆಯ ಪೊಲೀಸರು, ಕೃತ್ಯದಲ್ಲಿ ಭಾಗಿಯಾಗಿದ್ದ ರವಿ, ವೀರೇಶ್, ನರಸಿಂಹ, ಮಾರೆಪ್ಪ, ರಮೇಶ್ ಮತ್ತು ಪ್ರವೀಣ್ ಎಂಬ ಆರು ಮಂದಿ ಸಿಬ್ಬಂದಿಯನ್ನು ಸದ್ಯ ವಶಕ್ಕೆ ಪಡೆದಿದ್ದಾರೆ. ಈ ಘಟನೆಯ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಅವರು, ಎಲ್ಲಾ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

You cannot copy content of this page

Exit mobile version