ಉತ್ತರಾಖಂಡದಲ್ಲಿ ಕೇದಾರನಾಥ ಯಾತ್ರಿಕರಿದ್ದ ಹೆಲಿಕಾಪ್ಟರ್ ಒಂದು ಪತನಗೊಂಡಿದ್ದು ಆರು ದರ್ಮರಣ ಹೊಂದಿರುವ ಸುದ್ದಿಯೊಂದು ಬಂದಿದೆ.
ಉತ್ತರಾಖಂಡದ ಫಾಟಾದಿಂದ ಕೇದಾರನಾಥ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಮಂಗಳವಾರ ಪತನಗೊಂಡಿದೆ ಎಂದು ಎಎನ್ಐ ವರದಿ ಮಾಡಿದೆ. ಘಟನೆಯಲ್ಲಿ ಇಬ್ಬರು ಪೈಲಟ್ ಮತ್ತು ನಾಲ್ಕು ಮಂದಿ ಪ್ರಯಾಣಿಕರು ತೀರಿಕೊಂಡಿರುವುದಾಗಿ ತಿಳಿದುಬಂದಿದೆ.
ಪರಿಹಾರ ಮತ್ತು ರಕ್ಷಣಾ ಕಾರ್ಯಕ್ಕಾಗಿ ಆಡಳಿತ ತಂಡವು ಸ್ಥಳಕ್ಕೆ ತೆರಳಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ ಎಂದು ಸಂಸ್ಥೆ ತಿಳಿಸಿದೆ.